Bengaluru: ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಟಿಕ್‌ಟಾಕ್‌ ಪ್ರೇಮಿ

Bengaluru: ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಟಿಕ್‌ಟಾಕ್‌ ಪ್ರೇಮಿ

Published : Sep 20, 2023, 07:17 PM IST

ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ಇನ್ಸ್‌ಸ್ಟಾಗ್ರಾಂನಲ್ಲಿ ಪ್ರೀತಿ ಮಾಡಿ, 5 ವರ್ಷಗಳ ಕಾಲ ಊರೆಲ್ಲಾ ಸುತ್ತಾಡಿದ್ದಾರೆ. ಇನ್ನು ಹುಡುಗಿ ನೀನಿಲ್ಲದೆ ನಾನಿರಲ್ಲ ಸಾಯ್ತೀನಿ ಎಂದಾಗ ಯುವಕ ವಿಷ ತಂದುಕೊಟ್ಟು ಸಾಯಿಸಿದ್ದಾರೆ. 

ಬೆಂಗಳೂರು (ಸೆ.20): ಟಿಕ್‌ಟಾಕ್‌ ಮತ್ತು ಇನ್ಸ್ಟಾ ಮೂಲಕ ಪ್ರೇಮ ಪಕ್ಷಿಗಳಾಗೋ ಅಬ್ರಾರ್ ಮತ್ತು ಮುಸ್ಕಾನ್ ಬೆಂಗಳೂರಿನ ಮೂಲೆ ಮೂಲೆಯನ್ನ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುತ್ತಾ 5 ವರ್ಷ ಕಳೆದುಬಿಡುತ್ತೆ. ಆದ್ರೆ ಯಾವಾಗ ಮುಸ್ಕಾನ್ ಮದುವೆ ಯೋಚನೆ ಮಾಡಿದ್ಲೋ ಅಬ್ರಾರ್ ನಿಧಾನವಾಗಿ ಬದಲಾಗೋದಕ್ಕೆ ಶುರು ಮಾಡಿದ್ದಾನೆ. ಅವಳ ಮೇಲೆ ಇಂಟರೆಸ್ಟ್ ಕಳೆದುಕೊಳ್ಳೋಕೆ ಶುರುವಾಗಿದೆ. ಕೊನೆಗೆ ಅವಳು ಬೇಡವೇ ಬೇಡ ಅನ್ನೋ ನಿರ್ಧಾರ ಕೂಡ ಮಾಡಿದ್ದನು. ಇನ್ನೂ ಆಕೆಯನ್ನ ಎಷ್ಟರ ಮಟ್ಟಿಗೆ ಆತ ದ್ವೇಷಿಸೋಕೆ ಶುರು ಮಾಡಿದ ಅಂದ್ರೆ ನಾನು ವಿಷ ಕುಡೀತೀನಿ ಅಂತ ಮುಸ್ಕಾನ್ ಹೇಳಿದಾಗ ಈತನೇ ಇಲಿ ಪಾಷಣವನ್ನ ತಂದುಕೊಟ್ಟಿದ್ದನು.

ಹೌದು, ವಿಷ ತಂದು ಕೊಡು ಅಂದಿದ ತಕ್ಷಣ ಈ ಕಿರಾತಕ ಹೋಗಿ ಒಂದು ಬಾಟೆಲ್ ಇಲಿ ಪಾಷಾಣ ತಂದುಕೊಟ್ಟುಬಿಟ್ಟಿದ್ದಾನೆ.  ನೀನು ಸತ್ತರೂ ಮದುವೆಯಾಗಲ್ಲ ಅಂದಿದ್ದ ಪ್ರೇಮಿಯೇ 5 ವರ್ಷ ಪ್ರೀತಿಸಿದ ಪ್ರೇಯಸಿಗೆ ವಿಷ ತಂದುಕೊಟ್ಟಿದ್ದ. ಆಕೆಯೋ ಅವನೇ ಬೇಡ ಅಂದಮೇಲೆ ನಾನೇಕೆ ಬದುಕಿರಬೇಕು ಅಂತ ಯೋಚಿಸಿ ಲವ್ವರ್ ತಂದುಕೊಟ್ಟ ವಿಷವನ್ನ ಕುಡಿದು ಬಿಟ್ಟಿದ್ದಾಳೆ. ಇದನ್ನ ಗಮನಿಸಿದ ಆಕೆಯ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಕೆ ಮಾತ್ರ ಬದುಕುಳಿಯಲಿಲ್ಲ. ವಿಷ ಕುಡಿಸಿದ ಲವ್ವರ್ ಆಕೆ ಸತ್ತ ಮೆಲೂ ಅವಳನ್ನ ಬಿಟ್ಟಿರಲಿಲ್ಲ. ಅವಳ ಸತ್ತ ನಂತರ ಆಸ್ಪತ್ರೆಗೆ ಬಂದ ಅಬ್ರಾರ್ ಅವಳ ಮೊಬೈಲ್ ಅನ್ನೇ ಕದ್ದೊಯ್ದಿದ್ದಾನೆ. ನಂತರ, ಅವರಿಬ್ಬರು ಜೊತೆಗಿರುವ ಎಲ್ಲ ಫೋಟೋ, ವಿಡಿಯೋ, ಚಾಟಿಂಗ್‌ ಅನ್ನು ಡಿಲೀಟ್‌ ಮಾಡಿದ್ದಾನೆ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more