Bengaluru: ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಟಿಕ್‌ಟಾಕ್‌ ಪ್ರೇಮಿ

Bengaluru: ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಟಿಕ್‌ಟಾಕ್‌ ಪ್ರೇಮಿ

Published : Sep 20, 2023, 07:17 PM IST

ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ಇನ್ಸ್‌ಸ್ಟಾಗ್ರಾಂನಲ್ಲಿ ಪ್ರೀತಿ ಮಾಡಿ, 5 ವರ್ಷಗಳ ಕಾಲ ಊರೆಲ್ಲಾ ಸುತ್ತಾಡಿದ್ದಾರೆ. ಇನ್ನು ಹುಡುಗಿ ನೀನಿಲ್ಲದೆ ನಾನಿರಲ್ಲ ಸಾಯ್ತೀನಿ ಎಂದಾಗ ಯುವಕ ವಿಷ ತಂದುಕೊಟ್ಟು ಸಾಯಿಸಿದ್ದಾರೆ. 

ಬೆಂಗಳೂರು (ಸೆ.20): ಟಿಕ್‌ಟಾಕ್‌ ಮತ್ತು ಇನ್ಸ್ಟಾ ಮೂಲಕ ಪ್ರೇಮ ಪಕ್ಷಿಗಳಾಗೋ ಅಬ್ರಾರ್ ಮತ್ತು ಮುಸ್ಕಾನ್ ಬೆಂಗಳೂರಿನ ಮೂಲೆ ಮೂಲೆಯನ್ನ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುತ್ತಾ 5 ವರ್ಷ ಕಳೆದುಬಿಡುತ್ತೆ. ಆದ್ರೆ ಯಾವಾಗ ಮುಸ್ಕಾನ್ ಮದುವೆ ಯೋಚನೆ ಮಾಡಿದ್ಲೋ ಅಬ್ರಾರ್ ನಿಧಾನವಾಗಿ ಬದಲಾಗೋದಕ್ಕೆ ಶುರು ಮಾಡಿದ್ದಾನೆ. ಅವಳ ಮೇಲೆ ಇಂಟರೆಸ್ಟ್ ಕಳೆದುಕೊಳ್ಳೋಕೆ ಶುರುವಾಗಿದೆ. ಕೊನೆಗೆ ಅವಳು ಬೇಡವೇ ಬೇಡ ಅನ್ನೋ ನಿರ್ಧಾರ ಕೂಡ ಮಾಡಿದ್ದನು. ಇನ್ನೂ ಆಕೆಯನ್ನ ಎಷ್ಟರ ಮಟ್ಟಿಗೆ ಆತ ದ್ವೇಷಿಸೋಕೆ ಶುರು ಮಾಡಿದ ಅಂದ್ರೆ ನಾನು ವಿಷ ಕುಡೀತೀನಿ ಅಂತ ಮುಸ್ಕಾನ್ ಹೇಳಿದಾಗ ಈತನೇ ಇಲಿ ಪಾಷಣವನ್ನ ತಂದುಕೊಟ್ಟಿದ್ದನು.

ಹೌದು, ವಿಷ ತಂದು ಕೊಡು ಅಂದಿದ ತಕ್ಷಣ ಈ ಕಿರಾತಕ ಹೋಗಿ ಒಂದು ಬಾಟೆಲ್ ಇಲಿ ಪಾಷಾಣ ತಂದುಕೊಟ್ಟುಬಿಟ್ಟಿದ್ದಾನೆ.  ನೀನು ಸತ್ತರೂ ಮದುವೆಯಾಗಲ್ಲ ಅಂದಿದ್ದ ಪ್ರೇಮಿಯೇ 5 ವರ್ಷ ಪ್ರೀತಿಸಿದ ಪ್ರೇಯಸಿಗೆ ವಿಷ ತಂದುಕೊಟ್ಟಿದ್ದ. ಆಕೆಯೋ ಅವನೇ ಬೇಡ ಅಂದಮೇಲೆ ನಾನೇಕೆ ಬದುಕಿರಬೇಕು ಅಂತ ಯೋಚಿಸಿ ಲವ್ವರ್ ತಂದುಕೊಟ್ಟ ವಿಷವನ್ನ ಕುಡಿದು ಬಿಟ್ಟಿದ್ದಾಳೆ. ಇದನ್ನ ಗಮನಿಸಿದ ಆಕೆಯ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಕೆ ಮಾತ್ರ ಬದುಕುಳಿಯಲಿಲ್ಲ. ವಿಷ ಕುಡಿಸಿದ ಲವ್ವರ್ ಆಕೆ ಸತ್ತ ಮೆಲೂ ಅವಳನ್ನ ಬಿಟ್ಟಿರಲಿಲ್ಲ. ಅವಳ ಸತ್ತ ನಂತರ ಆಸ್ಪತ್ರೆಗೆ ಬಂದ ಅಬ್ರಾರ್ ಅವಳ ಮೊಬೈಲ್ ಅನ್ನೇ ಕದ್ದೊಯ್ದಿದ್ದಾನೆ. ನಂತರ, ಅವರಿಬ್ಬರು ಜೊತೆಗಿರುವ ಎಲ್ಲ ಫೋಟೋ, ವಿಡಿಯೋ, ಚಾಟಿಂಗ್‌ ಅನ್ನು ಡಿಲೀಟ್‌ ಮಾಡಿದ್ದಾನೆ.

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more