ಕ್ಷಮೆ ಇರಲಿ ಅಮ್ಮಂದಿರೆ...  ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

Sep 19, 2020, 12:17 AM IST

ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ನಿರೂಪಕ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.

ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ?

ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್‌ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ  ಅದನ್ನು ಸುವರ್ಣ ನ್ಯೂಸ್  ಮೂಲಕ ಹಿಂದಕ್ಕೆ ನೀಡಿದ ಕತೆ.. ಕ್ಷಮಿಸಿಬಿಡಿ ಅಮ್ಮಂದಿರಾ!