20 ದಿನಗಳ ನಂತರ ಮಾಸ್ ಸುಸೈಡ್ ರಹಸ್ಯ ಬಹಿರಂಗ.. ಅಪ್ಪನ ಹತ್ಯೆಗೆ ಸ್ಕೆಚ್!

Oct 6, 2021, 3:41 PM IST

ಬೆಂಗಳೂರು(ಅ. 06)   ಬೆಂಗಳೂರಿನ ಮಾಸ್ ಸೂಸೈಡ್(mass suicide) ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣಕ್ಕೆ ಸರಿ ಸುಮಾರು ಇಪ್ಪತ್ತು ದಿನಗಳ ನಂತರ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ತಂದೆಯನ್ನು ಹತ್ಯೆ(Murder) ಮಾಡಲು ಮಕ್ಕಳೇ ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಹೊರಬಂದಿದೆ.

ಬರಿಗೈನಲ್ಲಿ ಬೆಂಗಳೂರಿಗೆ ಬಂದ ಶಂಕರ್ ಕೋಟಿ ಕೋಟಿ ಸಂಪಾದಿಸಿದ ಕತೆ

ತವರು ಮನೆಯಲ್ಲಿ ತಂದೆ, ಗಂಡನ ಮನೆಯಿಂದಲೂ ಕಿರುಕುಳವಾಗುತ್ತಿದೆ ಎಂದು ಡೆತ್ ನೋಟ್(Death Note) ನಲ್ಲಿ ಬರೆದಿಟ್ಟ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು.  ಹಾಗಾದರೆ ಪ್ರಕರಣದ ತನಿಖೆ ಬೆನ್ನು ಹತ್ತಿದ ಪೊಲೀಸರಿಗೆ (Bengaluru Police) ಸಿಕ್ಕ ಶಾಕಿಂಗ್ ಮಾಹಿತಿಗಳು ಏನೇನು? ನಿಜಕ್ಕೂ ಆತ್ಮಹತ್ಯೆಗೂ ಮುನ್ನ ನಡೆದ ಘಟನಾವಳಿಗಳು ಏನು?