ಕೊಲೆಯಾಗಬೇಕಿದ್ದವರೇ ಯಾರೋ..ಸತ್ತವರೇ ಯಾರೋ! ಹೆತ್ತವರನ್ನ ಕೊಲ್ಲಲು ಮಗನೇ ಕೊಟ್ಟಿದ್ದ 65 ಲಕ್ಷಕ್ಕೆ ಸುಪಾರಿ!

ಕೊಲೆಯಾಗಬೇಕಿದ್ದವರೇ ಯಾರೋ..ಸತ್ತವರೇ ಯಾರೋ! ಹೆತ್ತವರನ್ನ ಕೊಲ್ಲಲು ಮಗನೇ ಕೊಟ್ಟಿದ್ದ 65 ಲಕ್ಷಕ್ಕೆ ಸುಪಾರಿ!

Published : Apr 23, 2024, 05:20 PM ISTUpdated : Apr 23, 2024, 05:21 PM IST

ರಾತ್ರಿ ಕೊಂದು ಬೆಳಗ್ಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ!
ತಂದೆಯ ಕುಟುಂಬವನ್ನೇ ಮುಗಿಸಲು ನಿರ್ಧರಿಸಿದ ಮಗ..!
ಬರ್ತಡೇ ಪಾರ್ಟಿ ಮಾಡಿ ಮಲಗಿದ್ದವರು ಹೆಣವಾದರು..!

ಆತ ಮಾಜಿ ನಗರ ಸಭೆ ಮಾಜಿ ಆಧ್ಯಕ್ಷ. ಹೆಂಡತಿ ಹಾಲಿ ಉಪಾಧ್ಯಕ್ಷೆ. ಅವರು ಆ ಭಾಗದ ಬಿಜೆಪಿ(BJP) ಮುಖಂಡರು. ಇನ್ನೂ ಆವತ್ತು ಅವರ ಕಿರಿಯ ಮಗನನ್ನ ನೋಡಲು ಹೆಣ್ಣಿನ ಮನೆಯವರು ಬಂದಿದ್ರು. ಅದಕ್ಕಾಗಿ ಸಂಬಂಧಿಕರೂ ಬಂದಿದ್ರು. ಎಲ್ಲಾ ಶಾಸ್ತ್ರ ಮುಗಿದ ಮೇಲೆ ಆವತ್ತು ರಾತ್ರಿ ಸಂಬಂಧಿಕರೊಬ್ಬರ ಬರ್ತಡೇ ಪಾರ್ಟಿಯನ್ನೂ ಮಾಡಿ ಮಾಲಗಿದ್ರು ಅಷ್ಟೇ. ಬೆಳಗಾಗುವಷ್ರಲ್ಲಿ ಆ ಮನೆಯಲ್ಲಿ ನಾಲ್ಕು ಹೆಣಗಳು ಬಿದ್ದಿದ್ವು. ಮಧ್ಯರಾತ್ರಿ ಆ ಮನೆಗೆ ಎಂಟ್ರಿ ಕೊಟ್ಟ ಹಂತಕರು ನಾಲ್ಕು ಹೆಣಗಳನ್ನ ಹಾಕಿ ಎಸ್ಕೇಪ್ ಆಗಿದ್ರು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ(Police) ಒಂದೇ ಒಂದು ಕ್ಲೂ ಕೂಡ ಸಿಕ್ಕಿರಲಿಲ್ಲ. ಆದ್ರೆ ಘಟನೆ ನಡೆದ 72 ಗಂಟೆಗಳಲ್ಲೆ ಪೊಲೀಶರು ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಯಾವ ಆ್ಯಂಗಲ್ನಲ್ಲಿ ತನಿಖೆ ಮಾಡಿದ್ರೂ ಹಂತಕರ ಸುಳಿವು ಸಿಗದಿದ್ದಾಗ ಪ್ರಕಾಶ್ ಬಾಕಳೆಯವರ ಮೊದಲ ಹೆಂಡತಿ ಮಕ್ಕಳ ಮೇಲೆಯೇ ಪೊಲೀಸರು ಕಣ್ಣು ಹಾಕ್ತಾರೆ. ದತ್ತಾತ್ರೇಯ ಮತ್ತು ವಿನಾಯಕ್ ಇಬ್ಬರೂ ಪ್ರಕಾಶ್ ಬಾಕಳೆ ಮೊದಲ ಹೆಂಡತಿ ಮಕ್ಕಳು. ಮನೆಯಲ್ಲಿ ನಾಲ್ಕು ಹೆಣಗಳು ಬಿದ್ದಾಗ ತಂದೆ. ಮಕ್ಕಳು ಈ ಕೆಲಸ ಮಾಡಿರೋದಕ್ಕೆ ಸಾಧ್ಯವೇ ಇಲ್ಲ ಅಂತ ಅಂದುಕೊಂಡಿದ್ರು. ಆದ್ರೆ ಪೊಲೀಸರು ಅವರಿಬ್ಬರ ಮೇಲೆಯೇ ಕಣ್ಣಿಡ್ತಾರೆ. ಮೊದಲು ಕ್ರೈಂ ಬ್ಯಾಕ್ಗ್ರೌಂಡ್ ಹೊಂದಿದ್ದ ಕಿರಿಯ ಮಗ ದತ್ತಾತ್ರೇಯನ ಹಿಂದೆ ಬೀಳ್ತಾರೆ. ಆದ್ರೆ ಆತ ಕೊಲೆಗಾರನಲ್ಲ(Murder) ಅನ್ನೋದು ಕನ್ಫರ್ಮ್ ಆಗುತ್ತೆ. ಆದ್ರೆ ಯಾವಾಗ ಮೊದಲ ಮಗ ವಿನಾಯಕ್ ಪೋನ್ ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಾರೋ ಅವನೇ ನಾಲ್ಕು ಹೆಣ ಹಾಕಿದ್ದು ಅಂತ ಗೊತ್ತಾಗುತ್ತೆ.ಕೇವಲ ಆಸ್ತಿಗಾಗೇ ಹೆತ್ತಪನ ಕುಟುಂಬವನ್ನ ಸರ್ವನಾಶ ಮಾಡಲು ಹೋದ ವಿನಾಯಕ ಈಗ ತಗ್ಲಾಕಿಕೊಂಡಿದ್ದಾನೆ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more