ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಕಳ್ಳರ ಕೈಚಳಕ: ರಾತ್ರೋ ರಾತ್ರಿ ಮರ ಹೊತ್ತೊಯ್ದ ಖದೀಮರು !

ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಕಳ್ಳರ ಕೈಚಳಕ: ರಾತ್ರೋ ರಾತ್ರಿ ಮರ ಹೊತ್ತೊಯ್ದ ಖದೀಮರು !

Published : Nov 21, 2023, 10:09 AM IST

ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಮರ ಕಳ್ಳತನವಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಕಾದು ಕುಳಿತು ಎಸ್.ಜೆ.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ಶ್ರೀಗಂಧ ಮರ ಕಳವು ಮಾಡಿ ಕದ್ದು ಪರಾರಿಯಾಗಿದ್ದಾರೆ.ಪೊಲೀಸರು ಶ್ರೀಗಂಧ ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.
 

ರಾತ್ರೋ ರಾತ್ರಿ ಶ್ರೀಗಂಧ ಮರಕ್ಕೆ ಕೊಡಲಿ. ಮೂರರಲ್ಲಿ ಒಂದು ಇಡೀ ಮರ ಕತ್ತರಿಸಿ ಹೊತ್ತೊಯ್ದ ಖದೀಮರು. ಇದು ಶಕ್ತಿ ಕೇಂದ್ರ ವಿಧಾನಸೌಧದಿಂದ(Vidhana Soudha) ಕೂಗಳತೆ ದೂರದಲ್ಲಿ ನಡೆದ ಗಂಧದ ಮರ(Sandalwood Tree) ಕಳ್ಳತನ. ಬೆಂಗಳೂರಿನ ಕೆ.ಆರ್.ಸರ್ಕಲ್ನಲ್ಲಿ ಹಗಲೊತ್ತಲ್ಲಿ ವಾಹನ ದಟ್ಟಣೆ ನಿಮಗೆಲ್ಲ ಗೊತ್ತೇಯಿದೆ. ರಾತ್ರಿ ಹೊತ್ತಲ್ಲೂ ಇಲ್ಲಿ ವಾಹನ ಓಡಾಟ ಇದ್ದೇ ಇರುತ್ತೆ. ಆದ್ರೆ, ಇದೇ ಕೆಆರ್ ಸರ್ಕಲ್ನಲ್ಲಿರುವ ಎಸ್.ಜೆ.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿನ ಶ್ರೀಗಂಧ ಮರವನ್ನು ಖದೀಮರು ಹೊತ್ತೊಯ್ದಿದ್ದಾರೆ. ರಾತ್ರೋ ರಾತ್ರಿ ಮರವನ್ನು ತುಂಡು ತುಂಡಾಗಿ ಕತ್ತರಿಸಿಕೊಂಡು ಹೊತ್ತೊಯ್ದಿದ್ದಾರೆ. ಕಳೆದ 10 ರಿಂದ 15 ವರ್ಷಗಳಿಂದ ಕಾಲೇಜ್ ಆವರಣದಲ್ಲಿ ಮೂರು ಶ್ರೀಗಂಧ ಮರ ಬೆಳೆದಿದ್ದವು. ಖದೀಮರು ಹಲವು ದಿನದಿಂದ ಕಾದು ಕುಳಿತು ಸಮಯ ಸಾಧಿಸಿ ರಾತ್ರಿ ಹೊತ್ತಲ್ಲಿ ಒಂದು ಶ್ರೀಗಂಧ ಮರ ಕಳ್ಳತನ(Theft) ಮಾಡಿದ್ದಾರೆ.  ಶ್ರೀಗಂಧ ಕಳ್ಳತನ ಬಗ್ಗೆ ಕಾಲೇಜು ಪ್ರಿನಸಿಪಾಲ್ ಸದಾಶಿವಮೂರ್ತಿ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಶ್ರೀಗಂಧ ಕಳ್ಳತನ ಜಾಗದಿಂದ ಕೂಗಳತೆ ದೂರದಲ್ಲಿ ವಿಧಾನಸೌಧ ಇದೆ.. ಮತ್ತೊಂದ್ಕಡೆ ಡಿಜಿಐಜಿ ಕಚೇರಿಯೂ ಇದೆ.. ರಾತ್ರಿ ಹೊತ್ತಲ್ಲೂ ಈ ಭಾಗದಲ್ಲಿ ಕೆಲ ವಾಹನಗಳ ಓಡಾಟವೂ ಇದ್ದೇ ಇರುತ್ತೆ.. ಆದ್ರೆ, ಖದೀಮರು ಯಾವ ಭಯವಿಲ್ಲದೇ ಬೆಲೆ ಬಾಳೋ ಗಂಧದ ಮರ ಕದ್ದು ಪರಾರಿಯಾಗಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರೋ ವಿಧಾನಸೌಧ ಠಾಣೆ ಪೊಲೀಸರು ಗಂಧದ ಚೋರರಿಗೆ ಬಲೆ ಬೀಸಿದ್ದಾರೆ.

ಇದನ್ನೂ ವೀಕ್ಷಿಸಿ:  ಬ್ಯಾಂಕ್ ಮ್ಯಾನೇಜರ್ ದೋಖಾ..ರೈತನಿಗೆ ಸಂಕಷ್ಟ: ಏಷ್ಯಾನೆಟ್‌ ಸುವರ್ಣನ್ಯೂಸ್ ವರದಿಯಿಂದ ಸಮಸ್ಯೆ ಇತ್ಯರ್ಥ

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more