Vijayanagar Crime: ಕೊಲೆಗೆ ಕಾರಣವಾಗಿದ್ದು 5 ಸಾವಿರ ರೂ..! ಅಣ್ಣ ತಮ್ಮಂದಿರಿಂದಲೇ ರೌಡಿಶೀಟರ್  ಮರ್ಡರ್..!

Vijayanagar Crime: ಕೊಲೆಗೆ ಕಾರಣವಾಗಿದ್ದು 5 ಸಾವಿರ ರೂ..! ಅಣ್ಣ ತಮ್ಮಂದಿರಿಂದಲೇ ರೌಡಿಶೀಟರ್ ಮರ್ಡರ್..!

Published : Feb 22, 2024, 05:12 PM IST

ಬಡ್ಡಿ ವ್ಯವಹಾರವೇ ಅವನ ಕೊಲೆಗೆ ಕಾರಣ..!
ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದುಬಿಟ್ಟರು..!
ನ್ಯಾಯ ಕೇಳಲು ಹೋಗಿದ್ದೇ ತಪ್ಪಾಗಿಹೊಯ್ತು..!

ಅವನೊಬ್ಬ ರೌಡಿಶೀಟರ್, ಸಣ್ಣಪುಟ್ಟ ಸೆಟ್ಲಮೆಂಟ್, ಪಂಚಾಯಿತಿ ಮಾಡೋದು ಬಡ್ಡಿ ವ್ಯವಹಾರ(Baddi money lenders) ಮಾಡೋದೆ ಅವನ ಕಾಯಕ. ಇದು ಅವನೊಬ್ಬನೇ ಮಾಡುತ್ತಿದ್ದ ಕೆಲಸವಲ್ಲ ಕುಟುಂಬದ ಏಳೆಂಟು ದಾಯಾದಿ ಸಹೋದರರು ಕೂಡ ಇದೇ ರೀತಿಯ ವ್ಯವಹಾರವನ್ನು ಮಾಡುತ್ತಿದ್ರು. ಆದರೆ ಆವತ್ತೊಂದು ದಿನ ತನ್ನವರಿಂದಲೇ ಆ ರೌಡಿಶೀಟರ್(Rowdy-Sheeter) ಹೆಣವಾಗಿದ್ದ. ಮಾತನ್ನಾಡಿಸಲು ಬಂದವನ ಎದೆಗೆ ಚಾಕು ನುಗ್ಗಿಸಿದ್ರು ಹಂತಕರು. ರೌಡಿ ಶೀಟರ್ ಅನ್ನೋ ಕ್ವಾಲಿಫಿಕೇಷನ್ ಇಟ್ಟುಕೊಂಡು, ಬಡ್ಡಿ ವ್ಯವಹಾರ , ಸೆಟಲ್‌ಮೆಂಟ್‌ ಅಂತೆಲ್ಲಾ ಬೇಜಾನ್ ದುಡ್ಡು ಮಾಡಿದ್ದ ಬಂಗಾರಿ ಮಂಜನನ್ನ ತನ್ನವರೇ ಕೊಂದು(Murder) ಮುಗಿಸಿದ್ರು. ಅವನ ಸಾವಿನ ಸುದ್ದಿ ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿತ್ತು. ಬಂಗಾರಿ ಮಂಜ ಮತ್ತು ಆತನ ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿಯೇ ಬಡ್ಡಿ ವ್ಯವಹಾರ ಮಾಡ್ತಿದ್ರು. ಆದ್ರೆ ಮಂಜ ಮಾತ್ರ ಸೈಡ್ ಬ್ಯಸಿನೆಸ್ಗಳನ್ನ ಮಾಡಿಕೊಂಡು ತನ್ನ ದಾಯಾದಿಗಳಿಗಿಂತ ವೇಗವಾಗಿ ಬೆಳೆದುಬಿಟ್ಟಿದ್ದ. ಇದು ಅವರ ಕಣ್ಣುಕುಕ್ಕಿತ್ತು. ಇನ್ನೂ ವ್ಯವಹಾರದಲ್ಲೂ ಒಂದೆರಡು ಬಾರಿ ಮಂಜನ ಜೊತೆ ಜಗಳ ಮಾಡಿಕೊಂಡಿದ್ರು. ಅವನ ವಿರುದ್ಧ ಕತ್ತಿ ಮಸೆಯೋಕೆ ಶುರು ಮಾಡಿದ್ರು. ಒಳ್ಳೆ ಸಮಯಕ್ಕಾಗಿ ಕಾಯುತ್ತಿದ್ರು. ಇದೇ ವೇಳೆ 5 ಸಾವಿರ ಹಣದ(Money) ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಗುತ್ತೆ. ಈ ಜಗಳ ಮಂಜನ ಹೆಂಡತಿಗೆ ಆವಾಜ್ ಹಾಕುವವರೆಗೂ ಹೋಗುತ್ತೆ. ಯಾವಾಗ ತನ್ನ ಹೆಂಡತಿ ಮೇಲೆ ಅಣ್ಣ ತಮ್ಮಂದಿರು ಆವಾಜ್ ಹಾಕಿದ್ದಾರೆ ಅಂತ ಗೊತ್ತಾಯ್ತೋ ಮಂಜ ನ್ಯಾಯ ಕೇಳೋಕೆ ಅಂತ ಹಂತಕರ ಮನೆಗೆ ಹೋಗ್ತಾನೆ. ಆದ್ರೆ ಅವನ ಬರುವಿಕೆಗಾಗಿ ಕಾಯುತ್ತಿದ್ದವರು ಮಂಜ ಎಂಟ್ರಿ ಕೊಡ್ತಿದ್ದಂತೆ ಹೆಣ ಹಾಕೇಬಿಡ್ತಾರೆ.

ಇದನ್ನೂ ವೀಕ್ಷಿಸಿ: 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more