Rameshwaram Cafe Blast: ಹ್ಯಾಂಡ್ ವಾಶ್‌ನ ಸಿಂಕ್ ಬಳಿ ಸ್ಫೋಟಕ ಇದ್ದ ಕಪ್ಪು ಬ್ಯಾಗ್:  ಅಲ್ಲಿ ಬಾಂಬ್ ಇಟ್ಟವರು ಯಾರು..?

Rameshwaram Cafe Blast: ಹ್ಯಾಂಡ್ ವಾಶ್‌ನ ಸಿಂಕ್ ಬಳಿ ಸ್ಫೋಟಕ ಇದ್ದ ಕಪ್ಪು ಬ್ಯಾಗ್: ಅಲ್ಲಿ ಬಾಂಬ್ ಇಟ್ಟವರು ಯಾರು..?

Published : Mar 02, 2024, 04:35 PM IST

ಹೇಗಿತ್ತು ಗೊತ್ತಾ ಸ್ಫೋಟದ ನಂತರದ ಭೀಕರತೆ..!
ಮಧ್ಯಾಹ್ನದ ವೇಳೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ 
ಸ್ಫೋಟಗೊಳ್ಳುತ್ತಲೇ ಚೆಲ್ಲಾಪಿಲ್ಲಿಯಾಗಿ ಓಡಿದ ಜನ

ಅದು ಪ್ರತಿಷ್ಟಿತ ಹೋಟೆಲ್. ಪ್ರತಿ ನಿತ್ಯ ಸಾವಿರಾರು ಮಂದಿ ಬಂದು ರುಚಿ ರುಚಿಯಾದ ಊಟ ಸೇವನೆ ಮಾಡಿ ಹೋಗ್ತಿದ್ರು. ಆದ್ರೆ ಇವತ್ತು ಎಂದಿನಂತೆ ನೂರಾರು ಮಂದಿ ಆ ಹೋಟೆಲ್(Hotel) ಒಳಗೆ ಊಟ ಸವಿಯುತ್ತ ನಿಂತಿದ್ರು. ಇದೇ ಟೈಂನಲ್ಲಿ ಅಲ್ಲಿ ಒಂದು ಬಾಂಬ್ ಬ್ಲಾಸ್ಟ್(Bomb Blast) ಆಗಿತ್ತು. ಆ ಬಾಂಬ್ ತೀವ್ರತೆ ಎಷ್ಟಿತ್ತು ಅಂದ್ರೆ ಬರೊಬ್ಬರಿ 9 ಮಂದಿ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿದ್ರು. ಎರಡು ಸಿಸಿ ಟಿವಿ ದೃಶ್ಯಗಳು ಕೇವಲ ಬೆಂಗಳೂರನ್ನಷ್ಟೇ(Bengaluru) ಅಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ವು. ಇನ್ನೂ ಯಾವಾಗ ಕೆಫೆಯಲ್ಲಿ ಇಂಥಹದೊಂದು ಬ್ಲಾಸ್ಟ್ ಆಗಿದೆ ಅನ್ನೋದು ಗೊತ್ತಾಯ್ತೋ ಅಧಿಕಾರಿಗಳು, ಎಫ್.ಎಸ್.ಎಲ್ ಟೀಂ ಎಲ್ಲವೂ ಆಗಮಿಸಿತ್ತು. ಶುಕ್ರವಾರ ರಾಜಧಾನಿ ಬೆಂಗಳೂರು ಪಾಲಿಗೆ ಕರಾಳ ಶುಕ್ರವಾರವಾಗಿ ಬದಲಾಗಿದೆ. ರಾಮೇಶ್ವರಂ ಕೆಫೆಯಲ್ಲಾದ ಸ್ಫೋಟ(rameshwaram cafe bomb blast) ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದೆ. ಇನ್ನೂ ಯಾವಾಗ ಬ್ಲಾಸ್ಟ್ ಆಯ್ತೋ ಅದು IED ಬಾಂಬ್, ಯಾರೋ ಬೆಕಂತಲೇ ಟಿಫನ್ ಬಾಕ್ಸ್ನಲ್ಲಿ ಇಟ್ಟು ಹೋಗಿದ್ದಾರೆ. ಟೈಂ ಕೂಡ ಫಿಕ್ಸ್ ಮಾಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ರು. ಇನ್ನೂ ಸ್ವತಃ ಸಿಎಂ ಸಿದ್ದರಾಮಯ್ಯಾರೆ ಇದು ಬಾಂಬ್ ಅಂತ ಕನ್ಫರ್ಮ್ ಮಾಡಿದ್ದು ತನಿಖೆ ಮುಂದುವರೆದಿದೆ.

ಇದನ್ನೂ ವೀಕ್ಷಿಸಿ:  Rameshwaram Cafe Blast: ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಆದ ಬ್ಲಾಸ್ಟ್‌ಗೆ ಸಾಮ್ಯತೆ ಇದೆ: ಡಿಕೆ ಶಿವಕುಮಾರ್‌

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more