ಊರಿಗೆ ಬಂದ ಅಜ್ಜಿಯ ನಿಗೂಢ ಸಾವು: ಮೊಬೈಲ್​​ ಒಡವೆ ಕೊಟ್ಟಿತ್ತು ಮಹತ್ತರ ಸುಳಿವು..!

Oct 7, 2024, 12:57 PM IST

ಆಕೆ ಕೋಟ್ಯಾಧಿಪತಿ, ಮೂಲತಃ ರಾಯಚೂರಿನವಳು ಮಕ್ಕಳಿಬ್ಬರೂ ಸಾಫ್ಟ್​​​ವೇರ್​​ ಇಂಜನಿಯರ್ಸ್​​, ವಯಸ್ಸಾದ ಮೇಲೆ ಮಕ್ಕಳ ಜೊತೆ ಇರೋಣ ಅಂತ ಆಸ್ತಿಯನ್ನೆಲ್ಲಾ ಬಿಟ್ಟು ಬೆಂಗಳೂರು ಸೇರಿದ್ದರು. ಆಗ್ಗಾಗೆ ತನ್ನೂರಿಗೆ ಹೋಗಿ ಆಸ್ತಿಯನ್ನೆಲ್ಲಾ ನೋಡಿಕೊಂಡು ಬಾಡಿಗೆ ಹಣ ಕಲೆಕ್ಷನ್​ ಮಾಡಿ ವಾಪಸ್​​ ಆಗ್ತಿದ್ದರು.. ಆದ್ರೆ ಆವತ್ತು ಊರಿಗೆ ಹೋದವರು ಹೆಣವಾಗಿದ್ದರು.. ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲೇ ಇಲ್ಲ.. ಎಲ್ಲರೂ ಸಹಜ ಸಾವು ಅಂತ ಅಂದುಕೊಂಡು ಅಂತ್ಯ ಸಂಸ್ಕಾರ ಮಾಡಿದ್ರು.. ಆದ್ರೆ ಮಣ್ಣು ಮಾಡಿದ ಮರು ದಿನ ಆಕೆಯ ಸಾವು ಸಹಜದಲ್ಲ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ಅಜ್ಜಿಯದ್ದು ಕೊಲೆಯಾ..? ಕೊಲೆಯೇ ಆಗಿದ್ರೆ ಮಾಡಿದ್ಯಾರು..? ಒಬ್ಬ ವೃದ್ಧೆಯ ಸಾವಿನ ರಹಸ್ಯವೇ ಇಂದಿನ ಎಫ್​.ಐ.ಆರ್​​​