ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣ ಲೂಟಿ..! ನಿಮ್ಮ ದುಡ್ಡು ಖಾಲಿ ಮಾಡ್ತಾಳೆ ಸುಂದರಿ ಮ್ಯಾನೇಜರ್..!

ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣ ಲೂಟಿ..! ನಿಮ್ಮ ದುಡ್ಡು ಖಾಲಿ ಮಾಡ್ತಾಳೆ ಸುಂದರಿ ಮ್ಯಾನೇಜರ್..!

Published : Aug 19, 2023, 12:56 PM IST

ವೃದ್ಧೆಯ ಹಣ ದೋಚಲು ಕಳ್ಳರೆಲ್ಲಾ ಒಂದಾಗಿದ್ರು..!
ವಾಸ್ತು ಸರಿಯಿಲ್ಲ ಅಂತ ಹೇಳಿ 3 ಕೋಟಿ ಮನೆ ಮಾರಿಸಿದ್ರು..!
ಬೇಕಾಬಿಟ್ಟಿ ಸೈನ್ ಮಾಡಿಸಿದ್ರು ಬ್ಯಾಂಕ್ ಮ್ಯಾನೇಜರ್..!
 

ನಿಮ್ಮ ಅಕೌಂಟ್‌ನಲ್ಲಿ ದುಡ್ಡು ಇಟ್ಟಿದ್ದೀರಾ..? ಮನೆಯಲ್ಲಿ ಒಂಟಿಯಾಗಿದ್ದೀರಾ..? ಹಾಗಿದ್ರೆ ಹುಷಾರ್... ದಿಕ್ಕಿಲ್ಲದವರು ಅಲ್ಪಸ್ವಲ್ಪ ಹಣವನ್ನ ಎಫ್.ಡಿ ಮಾಡಿಕೊಂಡು ತಮ್ಮ ಪಾಡಿಗೆ ಜೀವನ ಮಾಡ್ತಿರೋರನ್ನ ಸುಂದರಿಯೊಬ್ಬಳು ಟಾರ್ಗೆಟ್ ಮಾಡಿ ಕೂತಿರುತ್ತಾಳೆ. ಒಮ್ಮೆ ಅಕೌಂಟ್‌ನಲ್ಲಿ(Account) ದೊಡ್ಡ ಮೊತ್ತದ ಹಣ ಇದೆ ಅಂದ್ರೆ ಮುಗತೀತು, ಆಕೆ ನಿಮ್ಮನ್ನ ಬರ್ಬಾದ್ ಮಾಡಿಬಿಡ್ತಾಳೆ. ಹೀಗೆ  ಗಂಡನನ್ನ ಕಳೆದುಕೊಂಡ ವೃದ್ಧೆಯೊಬ್ಬಳು ಆ ಸುಂದರಿಯ ಮಾತಿನ ಬಲೆಗೆ ಬಿದ್ದು ಅವಳ ಅಕೌಂಟ್‌ನಲ್ಲಿದ್ದ ಕೋಟಿ ಕೋಟಿ ಹಣವನ್ನ ಕಳೆದುಕೊಂಡು ಇವತ್ತು ತಲೆಯ ಮೇಲೆ ಕೈಹೊತ್ತು ಕೂತಿದ್ದಾಳೆ. ಯಾವಾಗ ಅಜ್ಜಿಯ ಅಕೌಂಟ್‌ಗೆ ಮೂರುವರೆ ಕೋಟಿ ಬಿತ್ತೋ ಅಪೂರ್ವಾ ಅಲರ್ಟ್ ಆಗ್ತಾಳೆ. ಯಾಕಂದ್ರೆ ಶಾಂತಾ ಒಂಟಿಯಾಗಿ ಜೀವನ ಮಾಡ್ತಿದ್ದಿದ್ದು ಆಕೆಗೂ ಗೊತ್ತಿರುತ್ತೆ. ಇನ್ನೂ ಆಕೆಗೆ ಮೋಸ ಮಾಡಿದ್ರೂ ಯಾರಿಗೂ ಗೊತ್ತಾಗಲ್ಲ ನಾವು ಸೇಫ್ ಅಂತ ಯೋಚನೆ ಮಾಡ್ತಾಳೆ. ಪಕ್ಕಾ ಪ್ಲಾನ್ ಮಾಡಿಕೊಂಡು ಫೀಲ್ಡ್ಗೆ ಇಳಿದೇ ಬಿಡ್ತಾಳೆ ಆಗ ಅವಳಿಗೆ ಸಹಾಯ ಮಾಡಿದವರೇ ಅರಂಧತಿ ಮತ್ತು ರಾಕೇಶ ದಂಪತಿ. ಅಜ್ಜಿಯ ಅಕೌಂಟ್ ಬ್ಯಾಲೇನ್ಸ್ ಜೀರೋ ಮಾಡೋಕ್ಕೆ ಎಲ್ಲಾ ದಿಕ್ಕುಗಳಿಂದಲೂ ಕಿರಾತಕರು ರೆಡಿಯಾಗಿದ್ರು. ಮನೆ(House) ಮಾರಿದ್ದು ಮೂರುವರೆ ಕೋಟಿ.. ಎಫ್.ಡಿ ಹಣ 4 ಕೋಟಿ.. ಒಟ್ಟು ಏಳುವರೆ ಕೋಟಿ ಯಾರಿಗುಂಟು ಯಾರಿಗಿಲ್ಲ. ಶಾಂತಜ್ಜಿಯನ್ನ ಯಾಮಾರಿಸಿ ದುಡ್ಡು ಬಾಚಿಬಿಡೋಣ ಅಂದುಕೊಂಡಿದ್ದವರು ಒಂದಾದ್ರು. ಎಲ್ಲಾ ಪಕ್ಕಾ ಪ್ಲಾನ್ ಮಾಡಿ ಆಕೆಯಿಂದ ಖಾಲಿ ಚೆಕ್ಗಳಿಗೆ, ಟ್ರಾನ್ಸ್ಫರ್ ನೋಟೀಸ್‌ಗಳಿಗೆ ಆಕೆಗೆ ಗೊತ್ತಿರದ ಹಾಗೆ ಸೈನ್ ಮಾಡಿಸಿಕೊಂಡ್ರು. ಆಕೆಗೆ ಗೊತ್ತಿಲ್ಲದ ಹಾಗೆ ಹಣವನ್ನೆಲ್ಲಾ ಡ್ರಾ ಮಾಡಿಕೊಂಡ್ರು.. ಅವರ ಸಾಲಗಳನ್ನೆಲ್ಲಾ ತೀರಿಸಿಕೊಂಡ್ರು. ಆದ್ರೆ ಉಪ್ಪು ತಿಂದವನು ನೀರು ಕುಡಿಯಲೇಬೇಕಲ್ಲ.. ಒಮ್ಮೆ ದುಡ್ಡು ಡ್ರಾ ಮಾಡಲು ಬ್ಯಾಂಕ್‌ಗೆ ಹೋದ ಅಜ್ಜಿಗೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ತಲೆ ತಿರಿಗಿದೆ. ಬ್ಯಾಂಕ್‌ನಿಂದ ಸೀದಾ ಪೊಲೀಸ್ ಠಾಣೆಗೆ ಹೋಗಿದ್ದಾಳೆ.

ಇದನ್ನೂ ವೀಕ್ಷಿಸಿ:  ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more