ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

Published : Jun 19, 2024, 04:17 PM IST

ದರ್ಶನ್ ವಿರುದ್ಧ ಇರುವ ಕೇಸ್,ವಿವಾದಗಳು ಯಾವು?
‘ಸ್ವಲ್ಪ ತಡವಾಗಿದ್ರೂ ಕೇಸ್ ದಾರಿ ತಪ್ಪಿ ಹೋಗ್ತಿತ್ತು’
ಬಗೆದಷ್ಟು ಬಯಲಾಗ್ತಿದೆ ದರ್ಶನ್ ಗ್ಯಾಂಗ್ ಕ್ರೌರ್ಯ  

ಅಮಾಯಕ ರೇಣುಕಾಸ್ವಾಮಿಯನ್ನ(Renukaswamy murder Case) ಅಮಾನುಷವಾಗಿ ಕೊಂದ ದರ್ಶನ್ (Darshan) ಮತ್ತು ಪಟಾಲಂಗೆ ಪೊಲೀಸರು(Police) ಕ್ಲಾಸ್ ತೆಗೆದುಕೊಳ್ತಿದ್ದಾರೆ. ಇವರುಗಳನ್ನ ಪರ್ಮನೆಂಟ್ ಆಗಿ ಕಂಬಿ ಹಿಂದೆ ಕಳಿಸಲು ಎಲ್ಲಾ ಸಾಕ್ಷ್ಯಗಳನ್ನ ಕಲೆ ಹಾಕುತ್ತಿದ್ದಾರೆ. ಆದ್ರೆ ಯಾವಾಗ ಈ ಕೇಸ್‌ನಲ್ಲಿ ದರ್ಶನ್ ಕೈವಾಡವಿದೆ ಅನ್ನೋದು ಬಹಿರಂಗವಾಯ್ತು. ಅಂದಿನಿಂದಲೇ ಈ ಕಿಲ್ಲಿಂಗ್ ಸ್ಟಾರ್ ಮಾಡಿರುವ ಒಂದೊಂದು ಕ್ರೈಂ ಕಥೆಗಳು ಹೊರಬರುತ್ತಿವೆ. ಆತ ಅಮಾಯಕರ ಮೇಲೆ ನಡೆಸಿದ ದೌರ್ಜನ್ಯಗಳು ಮತ್ತು ಕೇಸ್‌ಗಳು ಈಗ ಮುನ್ನೆಲೆಗೆಗೆ ಬಂದಿವೆ. ರೇಣುಕಾಸ್ವಾಮಿ ರೀತಿ ಟಾರ್ಚರ್ ಈ ಹಿಂದೆ ಹಲವರಿಗೆ ಕೊಟ್ಟಿದ್ದಾರೆ ಅನ್ನೋ ಅನುಮಾನ ದರ್ಶನ್‌ ಮೇಲೆ ಮೂಡದೇ ಇರದು. ಇವೆಲ್ಲಾ ದರ್ಶನ್ ವಿರುದ್ಧ ದಾಖಲಾಗಿರೋ ಕೇಸ್‌ಗಳಾದ್ರೆ, ಮಾಡಿಕೊಂಡಿರೋ ವಿವಾದಗಳ ಪಟ್ಟಿ ಬಹಳ ದೊಡ್ಡದಿದೆ. 13 ವರ್ಷಗಳ ಹಿಂದೆಯೇ ಹೆಂಡತಿಗೆ ಹೊಡೆದು ಜೈಲಿಗೆ ಹೋಗಿದ್ದ ದರ್ಶನ್ ವಾಪಸ್ ಆದ್ಮೇಲೆ ನಾನು ಬದಲಾಗ್ತೀನಿ ಅಂತ ಹೇಳಿದ್ರು. ಆದ್ರೆ ಅದು ಕೇವಲ ಬಾಯಿ ಮಾತಾಗಿ ಉಳಿದುಬಿಡ್ತು. ಸಾಲು ಸಾಲು ವಿವಾದಗಳು. ಆಗಿಂದಾಗೆ ಬೀಳುವ ಕೇಸ್‌ಗಳು. ಇವೆಲ್ಲವನ್ನ ನೋಡ್ತಿದ್ರೆ ದರ್ಶನ್ ಒಬ್ಬ ಚಾಳಿ ಬಿದ್ದ ಆರೋಪಿ ಅನ್ನೋದು ಖಾತ್ರಿಯಾಗ್ತಿದೆ.

ಇದನ್ನೂ ವೀಕ್ಷಿಸಿ:  ಕೊಲೆ ನಡೆದ ದಿನ ದರ್ಶನ್ ಹಾಕಿದ್ದ ಶೂ ಸೀಜ್ : ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದಿದ್ದ ಕಾಸ್ಟ್ಯೂಮ್ ಡಿಸೈನರ್!

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more