ಮುರುಘಾ ಶ್ರೀ ಕೇಸ್‌: ಪ್ರಮುಖ ಪಾತ್ರವಹಿಸಿದ ಒಡನಾಡಿ ಸಂಸ್ಥೆಗೆ ಬೆದರಿಕೆ ಕರೆ, ಸಿಬ್ಬಂದಿ ಪೊಲೀಸ್ ಮೊರೆ

Sep 4, 2022, 2:26 PM IST

ಮೈಸೂರು, (ಸೆಪ್ಟೆಂಬರ್. 04): ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಲು ಪ್ರಮುಖ ಪಾತ್ರವಹಿಸಿದ ಒಡನಾಡಿ ಸಂಸ್ಥೆ ಹಾಗೂ ಅದರ ಮುಖ್ಯಸ್ಥರಿಗೆ ಬೆದರಿಕೆ ಕರೆಗಳು ಬರುತ್ತಿದೆಯಂತೆ.

ಸಾಕ್ಷಿ ಕಲೆಹಾಕಲು ಸ್ಥಳ ಮಹಜರ್, ಫಸ್ಟ್ ಶ್ರೀಗಳ ಬೆಡ್ ರೂಮ್‌ಗೆ ಹೊಕ್ಕಿದ ಪೊಲೀಸ್!

ಮುರುಘಾ ಶ್ರೀಗಳ ಕೇಸ್‌ನಲ್ಲಿ ಸಂತ್ರಸ್ತ ಮಕ್ಕಳ ಪರ ಮೈಸೂರಿನ ಒಡನಾಡಿ ಸಂಸ್ಥೆ ನಿಂತಿದೆ. ಈ ಹಿನ್ನೆಲೆಯಲ್ಲಿ ಸ್ಟ್ಯಾನ್ಲಿ, ಪರಶು ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಕಲಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ಪೊಲೀಸ್ ಮೊರೆ ಹೋಗಿದೆ.