ಅಪ್ಪ ಪೊಲೀಸ್..ಅಮ್ಮ ಟೀಚರ್..ಮಗ ರೌಡಿ..! ಬರ್ತಡೇಗೆ ಬರಲ್ಲ ಅಂದಿದಕ್ಕೆ ಮುಗಿಸಿಬಿಡೋದಾ ?

ಅಪ್ಪ ಪೊಲೀಸ್..ಅಮ್ಮ ಟೀಚರ್..ಮಗ ರೌಡಿ..! ಬರ್ತಡೇಗೆ ಬರಲ್ಲ ಅಂದಿದಕ್ಕೆ ಮುಗಿಸಿಬಿಡೋದಾ ?

Published : Nov 12, 2023, 02:13 PM IST

ಮೀಸೆ ಚಿಗುರದ ಹುಡುಗರಿಗೆ ರೌಡಿಗಳಾಗೋ ಆಸೆ..!
ಕೊಲೆ ಮಾಡಿ ಎಸ್ಕೇಪ್ ಆದವನಿಗೆ ಗುಂಡೇಟು..!
ಕೊಂದು ಮೈಮೇಲೆ R ಮತ್ತು S ಎಂದು ಗೀಚಿದ್ರು..!

ಅವನಿನ್ನೂ ಮೀಸೆ ಚಿಗುರದ ಹುಡುಗ. ಆಟ ಪಾಟ ಅಂತ ಇರಬೇಕಿದ್ದ ವಯಸ್ಸು. ಆದ್ರೆ ಈ ವಯಸ್ಸಿಗೆ ಆತ ಡಾನ್ ಆಗಲು ಹೊರಟಿದ್ದ. ಏರಿಯಾದಲ್ಲಿ ನನಗೊಂದು ಹೆಸರಿರಬೇಕು. ಎಲ್ರೂ ನನ್ನ ನೋಡಿ ಭಯಪಡಬೇಕು ಅಂತ ಕನಸುಕಂಡಿದ್ದ. ಹೀಗಾಗಿ ಕೈಗೆ ಸಿಗ್ತಿದ್ದ ಬಡಪಾಯಿಗಳನ್ನ ಹಿಡಿದು ಹಲ್ಲೆ(Attack) ಮಾಡ್ತಿದ್ದ. ಆದ್ರೆ ಆವತ್ತು ಹೀಗೆ ಡಾನ್ ಆಗಲು ಹೊರಟು ಬಾಲಕನ ಕೈಯಲ್ಲಿ ಒಬ್ಬ ಅಮಾಯಕ ತಗ್ಲಾಕಿಕೊಂಡಿದ್ದ. ಅವನನ್ನ ಈ ಕಿರಾತಕ ಬರ್ಬರವಾಗಿ ಕೊಂದು ಬಿಟ್ಟ. ಇನ್ನೂ ಈತ ಕೊಂದದ್ದೇನು ಬೇರೆಯಾರೋ ಆಗಿರಲಿಲ್ಲ ಬದಲಿಗೆ ಇವನ ಜೊತೆ ಆಡಿ ಬೆಳೆದವನೇ.ಆವತ್ತು ನವೆಂಬರ್ ಮೂರನೇ ತಾರೀಖು ಶುಕ್ರವಾರ. ಕೋಲಾರ(Koalr) ನಗರದ ಪಿಸಿ ಬಡಾವಣೆಯ ಜನ ಬೆಚ್ಚಿ ಬಿದ್ದಿದ್ರು. ಯಾಕಂದ್ರೆ ಅದೇ ಊರಿನ ಸರ್ಕಾರಿ ಶಾಲೆಯ ಎದುರಲ್ಲಿ ಒಂದು ಭೀಕರ ಕೊಲೆ(Murder) ನಡೆದು ಹೋಗಿತ್ತು. ರಕ್ತದ ಮಡುವಿನಲ್ಲಿ ಒಬ್ಬ ಯುವಕ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಸರ್ಕಾರಿ ಶಾಲೆಯ ಆವರಣದಲ್ಲಿ ಒಬ್ಬ ಯುವಕನ ಶವ ಪತ್ತೆಯಾಗಿತ್ತು. ಆತನನ್ನ ಹೇಗೆ ಕೊಂದಿದ್ರು ಅಂದ್ರೆ ಅವನ ಮೈಮೇಲೆಲ್ಲಾ ಬರೀ ಚಾಕು ಇರಿತದ ಗಾಯಗಳೇ ಇದ್ವು. ಇನ್ನೂ ರಕ್ತ ಅಂತೂ ಕೋಡಿ ಹರಿದಂತೆ ಹರದುಬಿಟ್ಟಿತ್ತು. ಇನ್ನೂ ಭಿಕರ ದೃಶ್ಯವನ್ನ ನೋಡಿದ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ಇನ್ನೂ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಡಾಗ್ ಸ್ಕ್ವಾಡ್ ಅನ್ನೂ ಕರೆಸಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಪರಿಶೀಲಿಸಿದ್ರು. ಭೀಕರವಾಗಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದು ಹೆಣವಾದವನು ಅದೇ ಗ್ರಾಮದ ನಿವಾಸಿ ಅರುಣ್ ಸಿಂಗ್ ಮತ್ತು ಸುಶೀಲ ಭಾಯಿ ಅನ್ನೋರ ಮಗ 16 ವರ್ಷದ ಕಾರ್ತೀಕ್.

ಇದನ್ನೂ ವೀಕ್ಷಿಸಿ:  ಅತಿಯಾದ ಧರ್ಮ ಪಾಲನೆಯೇ ಮುಸ್ಲಿಮರಿಗೆ ಸಮಸ್ಯೆನಾ ? ಅಂಬೇಡ್ಕರ್ ಸಂವಿಧಾನ ಅವರಿಗೆ ಅನ್ವಯಿಸಲ್ವಾ ?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more