ಕೇವಲ ಒಂದಡಿ ಜಾಗಕ್ಕಾಗಿ ಕೊಚ್ಚಿ ಕೊಂದ ಕಿರಾತಕರು: ಮನೆ ಯಜಮಾನನ ಹತ್ಯೆಗೆ ಹೆಂಡತಿ ಮಕ್ಕಳ ಕಣ್ಣೀರು

ಕೇವಲ ಒಂದಡಿ ಜಾಗಕ್ಕಾಗಿ ಕೊಚ್ಚಿ ಕೊಂದ ಕಿರಾತಕರು: ಮನೆ ಯಜಮಾನನ ಹತ್ಯೆಗೆ ಹೆಂಡತಿ ಮಕ್ಕಳ ಕಣ್ಣೀರು

Published : Oct 31, 2023, 11:46 AM IST

ಅವರೆಲ್ಲ ನಟೋರಿಯಸ್ ರೌಡಿಗಳು.. ಏರಿಯಾದಲ್ಲಿದ್ದವರನ್ನ ಹೆದರಿಸುತ್ತಾ ಹವಾ ಮೇಂಟೇನ್ ಮಾಡಿದ್ರು..   ಜನರಿಗೆ ಒಂದಿಲ್ಲೊಂದು ರೀತಿ ದಿನನಿತ್ಯ ತೊಂದರೆ ನೀಡ್ತಿದ್ರು. ಇದೇ ಪುಡಿ ರೌಡಿಗಳು ಪಕ್ಕದ ಮನೆಯ ವ್ಯಕ್ತಿಯನ್ನೇ ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಕೊಂದು ಹಾಕಿದ್ದಾರೆ. 
 

ಅರ್ಧಕ್ಕೆ ನಿಂತ ಮನೆ ಕಟ್ಟಡ ಶವವಾಗಿ ಬಿದ್ದಿರುವ ವ್ಯಕ್ತಿ, ಮಡುಗಟ್ಟಿದ ರಕ್ತ, ಮಹಿಳೆಯರ ಆಕ್ರಂದನ. ಇಲ್ನೋಡಿ ಹೀಗೆ ಶವವಾಗಿ ಬಿದ್ದಿರೋ ಈತನ ಹೆಸರು ರಮೇಶ್. ಹಳೇ ದ್ವೇಷಕ್ಕೆ ಹೆಣವಾಗಿ ಬಿದ್ದಿದ್ದಾನೆ. ಮನೆ ಹಳೆಯದ್ದಾಗಿದ್ರಿಂದ ಕೆಡವಿ ಹೊಸ ಮನೆಯನ್ನ ಕಟ್ಟುತ್ತಿದ್ದ. ಆದ್ರೆ ಪಕ್ಕದ ಮನೆಯ ಪುಡಿರೌಡಿಗಳು ಕ್ಯಾತೆ ತೆಗೆದಿದ್ರು. ನಮಗೆ ಧೂಳು ಬರ್ತಿದೆ. ಯಾರನ್ನ ಕೇಳಿ ಮನೆ ಕೆಡವಿದ್ದೀಯಾ ಅಂತ ಜಗಳಕ್ಕೆ ನಿಂತಿದ್ರು. ಈ ಜಗಳವನ್ನು ಕೊನೆಗೂ ಕೊಲೆಯಲ್ಲೇ(Murder) ಅಂತ್ಯಗೊಳಿಸಿದ್ದಾರೆ. ಬೆಂಗಳೂರು(Bengaluru) ನಗರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಪಕ್ಕದಲ್ಲೇ ರಮೇಶನ ಬರ್ಬರ ಹತ್ಯೆ ನಡೆದಿದೆ. ಪಕ್ಕದ ಮನೆಯ ಕೃಷ್ಣಪ್ಪ ಅಲಿಯಾಸ್ ಜೋಸೆಫ್ ಕುಟುಂಬದವರು ಕೊಂದುಹಾಕಿದ್ದಾರೆ. ತಿಂಗಳ ಹಿಂದಷ್ಟೇ ರಮೇಶ್ ತನ್ನ ಹಳೆಯ ಮನೆಯನ್ನ ಕೆಡವಿ ಹೊಸ ಮನೆ ನಿರ್ಮಾಣ ಮಾಡಲು ಮುಂದಾಗಿದ್ರು. ನಿನ್ನೆ ಮನೆಯ ಅಡಿಪಾಯದ ಕಾಮಗಾರಿ ಮಾಡಿಸುತ್ತಿದ್ದ ರಮೇಶ್‌ನ ಮರ್ಡರ್ ನಡೆದಿದೆ. ಮೊದಲೇ ಹತ್ಯೆಗೆ ಹೊಂಚು ಹಾಕಿದ್ದ ಜೋಸೆಫ್ ಮತ್ತಾತನ ಮಕ್ಕಳಾದ ಮೋಸಿಸ್ ಮತ್ತು ಜಗದೀಶ್ ಮಾರಕಾಸ್ತ್ರಗಳಿಂದ ಕೊಚ್ಚಿ  ಕೊಲೆ ಮಾಡಿದ್ದಾರೆ. ಕೊಲೆಯ ದೃಶ್ಯ ಪಕ್ಕದ ಮನೆಯೊಂದರ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಮೊಸೀಸ್ ಹಾಗೂ ಜಗದೀಶ್ ಏರಿಯಾದ ಜನರಿಗೆ ಒಂದಿಲ್ಲೊಂದು ರೀತಿ ತೊಂದರೆ ನೀಡ್ತಿದ್ರು. ಕಳೆದ ವರ್ಷ ದೀಪಾವಳಿ ಹಬ್ಬದ ದಿನ ಪಟಾಕಿ ವಿಚಾರವಾಗಿ ಇದೇ ಮೊಸೀಸ್, ಜಗದೀಶ್, ಜೋಸೆಫ್  ಇದೀಗ ಹತ್ಯೆಯಾದ ರಮೇಶ್ ಪತ್ನಿ ಕಾವ್ಯಾ ಮೇಲೆ ಹಲ್ಲೆ ನಡೆಸಿದ್ದರಂತೆ. ಇದೇ ವಿಚಾರವಾಗಿ ಜೈಲಿಗೆ ಕೂಡ ಹೋಗಿ ಬಂದಿದ್ರು.  ಇದೇ ವೈಷಮ್ಯ ಇಟ್ಟುಕೊಂಡು, ರಮೇಶ್ ಜೊತೆ ಕಿರಿಕ್ ತೆಗೆದಿದ್ದಾರೆ, ಧೂಳು ಬರ್ತಿದೆ.. ನಮಗೆ ಸೇರಿದ್ದ ಒಂದು ಅಡಿ ಜಾಗ ಒತ್ತುವರಿ ಮಾಡ್ಕೊಂಡಿದ್ದೀಯಾ ಎಂದು ಕಿರಿಕ್ ತೆಗೆದು ಕೊಲೆ ಮಾಡಿದ್ದಾರೆ ಅನ್ನೋದು ಕೊಲೆಯಾದ ರಮೇಶ್ ಕುಟುಂಬಸ್ಥರ ಆರೋಪ.

ಇದನ್ನೂ ವೀಕ್ಷಿಸಿ:  ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ: ಗ್ಯಾರಂಟಿ ಯೋಜನೆ ಬೇಡ ನೀರು ಕೊಡಿ ಎಂದ ಶಾಸಕ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more