ಆತ JCB ಡ್ರೈವರ್..ಈಕೆ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸದಾಕೆ: ಅವನನ್ನ ಪ್ರೀತಿಸಿದ್ದೇ, ಆಕೆ ಮಾಡಿದ ಮೊದಲ ತಪ್ಪು..!

ಆತ JCB ಡ್ರೈವರ್..ಈಕೆ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸದಾಕೆ: ಅವನನ್ನ ಪ್ರೀತಿಸಿದ್ದೇ, ಆಕೆ ಮಾಡಿದ ಮೊದಲ ತಪ್ಪು..!

Published : Aug 26, 2023, 03:02 PM IST

ಅವಳು ಆವತ್ತು ಕ್ಷಮಿಸಿ ತಪ್ಪುಮಾಡಿಬಿಟ್ಟಳು..!
ಮೊಬೈಲ್ ಪಡೆದಾಗಲೇ ಬಂದಿತ್ತು ಫೋನ್ ಕಾಲ್..!
ಟೀನೇಜ್ನಲ್ಲಿ ಲವ್.. ಟೀನೇಜ್ನಲ್ಲೇ ಬ್ರೇಕ್ ಅಪ್..!
ಆತನನ್ನ ಕ್ಷಮಿಸಿದ್ದು ಆಕೆ ಮಾಡಿದ ಕೊನೆಯ ತಪ್ಪು..!

ಅದೊಂದು ಬಡ ಕುಟುಂಬ.. ಬೀಡಿ ಕಟ್ಟಿ ಜೀವನ ಮಾಡ್ತಿತ್ತು. ಇದ್ದ ಇಬ್ಬರು ಮಕ್ಕಳನ್ನ ಕಷ್ಟಪಟ್ಟು ಓದಿಸಿದ್ರು. ಇನ್ನೂ ಮೊದಲ ಮಗಳು ಪಿ.ಯು.ಸಿಗೆ ಓದು ಮುಗಿಸಿ ತಂದೆ ತಾಯಿಯ ಸಹಾಯಕ್ಕೆ ನಿಂತಿದ್ಲು. ಫ್ಯಾನ್ಸಿ ಸ್ಟೋರ್‌ನಲ್ಲಿ ಕೂಲಿಗೆ ಸೇರಿದ್ಲು. ಆಕೆಯ ತಂದೆ ತಾಯಿ ಕೂಡ ತಮ್ಮ ಕಷ್ಟದ ದಿನಗಳು ಮುಗೀತು ಅಂದುಕೊಂಡಿದ್ರು. ಆದ್ರೆ ಕೈಗೆ ಬಂದಿದ್ದ ಮಗಳು ಇವತ್ತು ಹೆಣವಾಗಿದ್ದಾಳೆ. ಕೆಲಸಕ್ಕೆ ಅಂತ ಹೋದ ಮಗಳು ಹೆಣವಾಗಿ ವಾಪಸ್ ಬಂದಿದ್ದಾಳೆ. ಆಕೆಯನ್ನ ಕಿರಾತಕನೊಬ್ಬ ಕೊಂದು ಮುಗಿಸಿದ್ದಾನೆ. ಮನೆಗೆ ದಿಕ್ಕಾಗಿದ್ದ ಹೆಣ್ಣುಮಗಳೇ ಅಲ್ಲಿ ಕೊಲೆಯಾಗಿ(Murder) ಹೋಗಿದ್ಲು. ಇನ್ನೂ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಪದ್ಮರಾಜ್‌ನನ್ನ ಅರೆಸ್ಟ್ ಮಾಡಿದ್ರು. ಇಷ್ಟೆಲ್ಲಾ ಆಗಿ ಮೂರು ವರ್ಷಗಳಾಗಿದೆ. ಆದ್ರೆ ಇವತ್ತು ಅದೇನಾಯ್ತೋ ಏನೋ ಇದೇ ಪದ್ಮರಾಜ್ ತಾನು ಪ್ರೀತಿಸಿದ ಹುಡುಗಿಗೇ ಚಾಕು ಹಾಕಿಬಿಟ್ಟಿದ್ದಾನೆ. ಯಾವಾಗ ಗೌರಿ ಪೊಲೀಸ್(Police) ಮೆಟ್ಟಿಲ್ಲೇರಿದ್ಲೋ ಆಗಲೇ ಪದ್ಮರಾಜ್ ಬುದ್ಧಿ ಕಲಿಬೆಕಿತ್ತು. ಆದ್ರೆ ಆತ ಏನೇ ಆಗಲಿ ನನಗೆ ಅವಳೇ ಬೇಕು ಅಂತ ಹಠ ಹಿಡಿದುಬಿಟ್ಟಿದ್ದ. ಆಕೆ ಬೇಡ ಬೇಡ ಅಂದ್ರೂ ಆಕೆಯ ಹಿಂದೆ ಬಿದ್ದಿದ್ದ. ಇನ್ನೂ ಆವತ್ತೇ ಗೌರಿ ಕಂಪ್ಲೆಂಟ್ ದಾಖಲಾಗಲು ಒಪ್ಪಿದಿದ್ರೆ ಇವತ್ತು ಗೌರಿಗೆ ಮಸಣ ಸೇರುವ ಪರಿಸ್ಥಿತಿ ಬರುತ್ತಿರಲಿಲ್ಲ ಅನಿಸುತ್ತೆ. ಆವತ್ತು ಗೌರಿ ಪದ್ಮರಾಜ್ನನ್ನ ಕ್ಷಮಿಸಬಾರದಿತ್ತು. ಆದ್ರೆ ಆಕೆ ಆವತ್ತು ಮಾಡಿದ ತಪ್ಪಿಗೆ ಇವತ್ತು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. 

ಇದನ್ನೂ ವೀಕ್ಷಿಸಿ:  ಸೂರ್ಯ ಶಿಕಾರಿ.. ಶುಕ್ರನ ಕಡೆ ಸಫಾರಿ.. ಮತ್ತೇನು ಮಾಡಲಿದೆ ಇಸ್ರೋ?

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more