ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!

ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!

Published : Oct 19, 2023, 02:18 PM IST

ಅವಳಿಂದ ತಂದೆಯೂ ಆತ್ಮಹತ್ಯೆ ಮಾಡಿಕೊಂಡರು..!
3 ಬಾರಿ ಮನೆ ಬಿಟ್ಟರೂ ಆತ ಆಕೆಯನ್ನ ಕ್ಷಮಿಸಿದ್ದ..!
ಮಕ್ಕಳಿಗಾಗಿ ಹೆಂಡತಿ ಮಾಡಿದ್ದನ್ನೆಲ್ಲಾ ಸಹಿಸಿಕೊಂಡ..!

ಅದು ಮೂರ್ತಿ ಕೆತ್ತನೆಯ ಶಿಲ್ಪಿಗಳ ಕುಟುಂಬ. ಊರೂರು ಸುತ್ತಿ ದೇವಸ್ಥಾನದ(Temple) ವಿಗ್ರಹಗಳನ್ನ ಕೆತ್ತನೆ ಮಾಡೋದೇ ಅವರ ಕಾಯಕ. ಆದ್ರೆ ಹೀಗೊಂದು ಒಳ್ಳೆ ಕೆಲಸ ಮಾಡ್ತಿದ್ದ ಕುಟುಂಬದಲ್ಲಿ ಇವತ್ತು ಒಂದು ಹೆಣಬಿದ್ದಿದೆ. ಮನೆಗೆ ಬೆಳಕಾಗಿದ್ದ ಸೊಸೆ ಕೊಲೆಯಾಗಿ(Murder) ಹೋಗಿದ್ದಾಳೆ. ಇನ್ನೂ ಕೊಲೆ ಮಾಡಿದವನು ಆಕೆಯ ಗಂಡನೇ. ಪ್ರೀತಿಸಿ(Love) ಮದುವೆಯಾದವಳನ್ನೇ ಆ ಪಾಪಿ ಕೊಂದು ಬಿಟ್ಟಿದ್ದ. ಲೋಕೆಶನನ್ನ ಮದುವೆಯಾದ ನಂದಿನಿ ತುಂಬು ಕುಟುಂಬಕ್ಕೆ ಎಂಟ್ರಿಯಾದಳು. ಅಲ್ಲೇ ಗಂಡನೊಂದಿಗೆ ಸುಖವಾಗಿ ಜೀವನ ಮಾಡ್ತಿದ್ಲು. ಆದ್ರೆ ಮೂರು ದಿನಗಳ ಹಿಂದಷ್ಟೇ ಮಾವನ ಮನೆ ಬಿಟ್ಟು  ಬಾಡಿಗೆ ಮನೆ ಮಾಡಿ ಹೊಸ ಜೀವನ ಆರಂಭಿಸಿದ್ರು. ಆದ್ರೆ ಮೂರೇ ದಿನ, ನಂದಿನಿಯನ್ನ ಲೋಕೇಶ ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದಾನೆ. ಪ್ರೀತಿಸಿ ಮದುವೆಯಾದ ನಂತರ ನಂದಿನಿ ಗಂಡನ ಮೇಲಿನ ಪ್ರೀತಿಯನ್ನ ಕಡಿಮೆ ಮಾಡಿಕೊಂಡಳು. ಮನೆ ಬಿಟ್ಟು ಮೂರು ಬಾರಿ ಬೇರೆಯವರ ಜೊತೆ ಹೋಗಿದ್ದಳು. ಆದ್ರೂ ಲೋಕೇಶ ಮೂರು ಬಾರಿಯೂ ಆಕೆಯನ್ನ ಕ್ಷಮಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ. ಆದ್ರೆ ಲೋಕೇಶ ಆಕೆಗೆ ಎಷ್ಟೇ ಚಾನ್ಸ್ ಕೊಟ್ಟರೂ ನಂದಿನಿ ಮಾತ್ರ ಬುದ್ಧಿ ಕಲಿಯಲೇ ಇಲ್ಲ. ನಾಲ್ಕನೇ ಬಾರಿಗೆ ಮನೆ ಬಿಟ್ಟವಳನ್ನ ವಾಪಸ್ ಕರೆತಂದು ಬೇರೆ ಮನೆ ಮಾಡಿ ಇಟ್ಟಿದ್ದ. ಆದ್ರೆ ಆವತ್ತು ಕೆಲಸದಿಂದ ಮನೆಗೆ ಲೋಕೇಶ ವಾಪಸ್ ಬಂದಾಗ ನಂದಿನಿ ಫೋನ್ನಲ್ಲಿ ಬ್ಯುಸಿ ಇದ್ಲು. ಫಾರ್ ದ ಫಸ್ಟ್ ಟೈಂ ಲೋಕೇಶ ಜಗಳ ತೆಗೆದ. ಮಾತಿಗೆ ಮಾತು ಬೆಳೆಯಿತು..ಕೊನೆಗೆ ಸಿಟ್ಟಿನಲ್ಲಿ ಲೋಕೇಶ ಹೆಂಡತಿಗೆ ಮಚ್ಚಿನ್ನೇಟು ಹಾಕೇಬಿಟ್ಟ. ಸದ್ಯ ಲೋಕೇಶ ಜೈಲು ಸೇರಿದ್ದಾನೆ. ನಂದಿನಿ ಮಸಣ ಸೇರಿದ್ದಾಳೆ.. ಆದ್ರೆ ಅವರ ಇಬ್ಬರು ಪುಟ್ಟ ಮಕ್ಕಳು ಈಗ ದಿಕ್ಕಿಲ್ಲದಂತಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more