ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!

ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!

Published : Oct 19, 2023, 02:18 PM IST

ಅವಳಿಂದ ತಂದೆಯೂ ಆತ್ಮಹತ್ಯೆ ಮಾಡಿಕೊಂಡರು..!
3 ಬಾರಿ ಮನೆ ಬಿಟ್ಟರೂ ಆತ ಆಕೆಯನ್ನ ಕ್ಷಮಿಸಿದ್ದ..!
ಮಕ್ಕಳಿಗಾಗಿ ಹೆಂಡತಿ ಮಾಡಿದ್ದನ್ನೆಲ್ಲಾ ಸಹಿಸಿಕೊಂಡ..!

ಅದು ಮೂರ್ತಿ ಕೆತ್ತನೆಯ ಶಿಲ್ಪಿಗಳ ಕುಟುಂಬ. ಊರೂರು ಸುತ್ತಿ ದೇವಸ್ಥಾನದ(Temple) ವಿಗ್ರಹಗಳನ್ನ ಕೆತ್ತನೆ ಮಾಡೋದೇ ಅವರ ಕಾಯಕ. ಆದ್ರೆ ಹೀಗೊಂದು ಒಳ್ಳೆ ಕೆಲಸ ಮಾಡ್ತಿದ್ದ ಕುಟುಂಬದಲ್ಲಿ ಇವತ್ತು ಒಂದು ಹೆಣಬಿದ್ದಿದೆ. ಮನೆಗೆ ಬೆಳಕಾಗಿದ್ದ ಸೊಸೆ ಕೊಲೆಯಾಗಿ(Murder) ಹೋಗಿದ್ದಾಳೆ. ಇನ್ನೂ ಕೊಲೆ ಮಾಡಿದವನು ಆಕೆಯ ಗಂಡನೇ. ಪ್ರೀತಿಸಿ(Love) ಮದುವೆಯಾದವಳನ್ನೇ ಆ ಪಾಪಿ ಕೊಂದು ಬಿಟ್ಟಿದ್ದ. ಲೋಕೆಶನನ್ನ ಮದುವೆಯಾದ ನಂದಿನಿ ತುಂಬು ಕುಟುಂಬಕ್ಕೆ ಎಂಟ್ರಿಯಾದಳು. ಅಲ್ಲೇ ಗಂಡನೊಂದಿಗೆ ಸುಖವಾಗಿ ಜೀವನ ಮಾಡ್ತಿದ್ಲು. ಆದ್ರೆ ಮೂರು ದಿನಗಳ ಹಿಂದಷ್ಟೇ ಮಾವನ ಮನೆ ಬಿಟ್ಟು  ಬಾಡಿಗೆ ಮನೆ ಮಾಡಿ ಹೊಸ ಜೀವನ ಆರಂಭಿಸಿದ್ರು. ಆದ್ರೆ ಮೂರೇ ದಿನ, ನಂದಿನಿಯನ್ನ ಲೋಕೇಶ ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದಾನೆ. ಪ್ರೀತಿಸಿ ಮದುವೆಯಾದ ನಂತರ ನಂದಿನಿ ಗಂಡನ ಮೇಲಿನ ಪ್ರೀತಿಯನ್ನ ಕಡಿಮೆ ಮಾಡಿಕೊಂಡಳು. ಮನೆ ಬಿಟ್ಟು ಮೂರು ಬಾರಿ ಬೇರೆಯವರ ಜೊತೆ ಹೋಗಿದ್ದಳು. ಆದ್ರೂ ಲೋಕೇಶ ಮೂರು ಬಾರಿಯೂ ಆಕೆಯನ್ನ ಕ್ಷಮಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ. ಆದ್ರೆ ಲೋಕೇಶ ಆಕೆಗೆ ಎಷ್ಟೇ ಚಾನ್ಸ್ ಕೊಟ್ಟರೂ ನಂದಿನಿ ಮಾತ್ರ ಬುದ್ಧಿ ಕಲಿಯಲೇ ಇಲ್ಲ. ನಾಲ್ಕನೇ ಬಾರಿಗೆ ಮನೆ ಬಿಟ್ಟವಳನ್ನ ವಾಪಸ್ ಕರೆತಂದು ಬೇರೆ ಮನೆ ಮಾಡಿ ಇಟ್ಟಿದ್ದ. ಆದ್ರೆ ಆವತ್ತು ಕೆಲಸದಿಂದ ಮನೆಗೆ ಲೋಕೇಶ ವಾಪಸ್ ಬಂದಾಗ ನಂದಿನಿ ಫೋನ್ನಲ್ಲಿ ಬ್ಯುಸಿ ಇದ್ಲು. ಫಾರ್ ದ ಫಸ್ಟ್ ಟೈಂ ಲೋಕೇಶ ಜಗಳ ತೆಗೆದ. ಮಾತಿಗೆ ಮಾತು ಬೆಳೆಯಿತು..ಕೊನೆಗೆ ಸಿಟ್ಟಿನಲ್ಲಿ ಲೋಕೇಶ ಹೆಂಡತಿಗೆ ಮಚ್ಚಿನ್ನೇಟು ಹಾಕೇಬಿಟ್ಟ. ಸದ್ಯ ಲೋಕೇಶ ಜೈಲು ಸೇರಿದ್ದಾನೆ. ನಂದಿನಿ ಮಸಣ ಸೇರಿದ್ದಾಳೆ.. ಆದ್ರೆ ಅವರ ಇಬ್ಬರು ಪುಟ್ಟ ಮಕ್ಕಳು ಈಗ ದಿಕ್ಕಿಲ್ಲದಂತಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
Read more