ಸಾಲ ವಾಪಸ್ ಕೇಳಲು ಹೋದವನಿಗೆ ಮಚ್ಚಿನೇಟು..! ಅವನನ್ನ ಮುಗಿಸಲು ಆಕೆ ಮಾಡಿದ ಪ್ಲ್ಯಾನ್‌ ಏನ್‌ ಗೊತ್ತಾ ?

ಸಾಲ ವಾಪಸ್ ಕೇಳಲು ಹೋದವನಿಗೆ ಮಚ್ಚಿನೇಟು..! ಅವನನ್ನ ಮುಗಿಸಲು ಆಕೆ ಮಾಡಿದ ಪ್ಲ್ಯಾನ್‌ ಏನ್‌ ಗೊತ್ತಾ ?

Published : Jan 20, 2024, 04:55 PM IST

ಅವನ ಹೆಣ ಹಾಕಿ ಅವನ ಮೇಲೆಯೇ ಕಂಪ್ಲೆಂಟ್ ಕೊಟ್ಟಳು..!
ಕಷ್ಟ ಅಂತ ಬಂದಾಗ ಸಹಾಯ ಮಾಡಿದ್ದೇ ತಪ್ಪಾಗಿಹೊಯ್ತು..!
10 ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ನವೀನ..!

ಅವನು ಆ ಊರಿನ ಶ್ರೀಮಂತ ಅಡಿಕೆ ಬೆಳೆಗಾರ, ಮನೆಯಲ್ಲಿ ಅಪ್ಪ ಅಮ್ಮ, ಹೆಂಡತಿ ಮತ್ತು ಇಬ್ಬರು ಮಕ್ಕಳು ಇನ್ನೇನು ಬೇಕು ಆ ಜೀವಕ್ಕೆ. ಆದ್ರೆ ಸುಮ್ಮನೆ ಅಡಿಕೆ ಮಾರಿದ ದುಡ್ಡು ಹಿಡ್ಕೊಂಡು ಜೀವನ ಮಾಡಿದಿದ್ರೆ ಆತ ಇವತ್ತು ಜೀವಂತವಾಗಿರುತ್ತಿದ್ದ. ಆದ್ರೆ ಆತ ಅಡಿಕೆ ತೋಟದಲ್ಲಿ(Arecanut plantation) ಬಂದ ಲಾಭದ ಹಣದಲ್ಲಿ ಬಡ್ಡಿ(Interest) ವ್ಯವಹಾರ ನಡೆಸುತ್ತಿದ್ದ. ಅದೇ ಬಡ್ಡಿ ದುಡ್ಡು ಇವತ್ತು ಅವನ ಪ್ರಾಣವನ್ನೇ ತೆಗೆದಿದೆ. ಪಡೆದ ಹಣ ವಾಪಸ್ ಕೊಡೊಬದಲು ಹಂತಕರು ಅವನ ಹೆಣವನ್ನೇ ಹಾಕಿಬಿಟ್ಟಿದ್ದಾರೆ. ಮಾದರಿ ಕುಟುಂಬ ಅನ್ನಿಸಿಕೊಂಡಿದ್ದ ಕುಟುಂಬದಲ್ಲೇ ಹೆಣಬಿದ್ದಿತ್ತು. ಇನ್ನೂ ಹೆಣ ಹಾಕಿದವರು ಅದೇ ಗ್ರಾಮದಲ್ಲಿದ್ದ ಒಬ್ಬ ಕಿರಾತಕಿ. ನವೀನ ಆ ಮಹಿಳೆಗೆ 5 ಲಕ್ಷ ಹಣವನ್ನ ಬಡ್ಡಿಗೆ ಕೊಟ್ಟಿದ್ದ. ಎರಡು ವರ್ಷದ ಹಿಂದೆ ಮನೆ ಕಟ್ಟಲು ಸಾಲ ಮಾಡಿದ್ದ ಆ ಮಹಿಳೆ ಒಂದು ವರ್ಷ ನಿಯತ್ತಾಗಿ ಬಡ್ಡಿ ಕಟ್ಟಿದ್ಲು. ಆದ್ರೆ ವರ್ಷದ ನಂತರ ಇಡೀ ಗ್ರಾಮದಲ್ಲಿ ಒಂದು ಗುಸುಗುಸು ಶುರುವಾಯ್ತು. ಅದೇನಂದ್ರೆ ಆ ಮಹಿಳೆಗೂ(Woman) ನವೀನನಿಗೂ ಅಕ್ರಮ ಸಂಬಂಧ ಇದೆ ಅಂತ. ಯಾವಾಗ ಗ್ರಾಮದಲ್ಲಿ ಈ ಮಾತುಗಳು ಹರಡೋದಕ್ಕೆ ಶುರುವಾಯ್ತೋ ಆಕೆ ಬಡ್ಡಿ ಹಣ ಕೊಡೋದನ್ನ ನಿಲ್ಲಿಸಿಬಿಟ್ಟಿದ್ಲು. ಒಂದು ವರ್ಷ ಹಣಕ್ಕಾಗಿ ನವೀನನ್ನ ಸತಾಯಿಸಿದ್ಲು. ಆದ್ರೆ ಇತ್ತಿಚೆಗೆ ನವೀನ ಹಣ(Money) ಬೇಕೆ ಬೇಕು ಅಂತ ಪಟ್ಟು ಹಿಡಿದಿದ್ದ. ಈಕೆ ಮಾತ್ರ ಅವನನ್ನೇ ಮುಗಿಸ್ತೀನೇ (Murder) ಹೊರೆತು ದುಡ್ಡು ಕೊಡೋದಿಲ್ಲ ಅನ್ನೋ ನಿರ್ಧಾರ ಮಾಡಿದ್ಲು.. ಪಕ್ಕದಲ್ಲೇ ಇದ್ದ ತನ್ನ ಸಂಬಂಧಿಕನನ್ನ ಕರೆಸಿಕೊಂಡು ಒಂದು ಪಕ್ಕಾ ಪ್ಲಾನ್ ರೆಡಿ ಮಾಡಿದ್ಲು. ಸಹಾಯ ಅಂತ ಬೇಡಿ ಬಂದಾಗ ಜ್ಯೋತಿಗೆ ನವೀನ ಲಕ್ಷ ಲಕ್ಷ ಹಣ ಕೊಟ್ಟಿದ್ದ. ಆದ್ರೆ ಅದೇ ವಾಪಸ್ ಕೊಡು ಅಂದಾಗ ಅವನನ್ನೇ ಮುಗಿಸಿಬಿಟ್ಟಳು ಈ ಕಿಲ್ಲರ್ ಲೇಡಿ ಕೊಲೆ ಮಾಡಿದ್ದಾಳೆ.

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more