ಅಕ್ಕನಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿಹೊಯ್ತಾ..? ಆಡುತ್ತಿದ್ದ ಮಕ್ಕಳನ್ನ ಕಿಡ್ನ್ಯಾಪ್ ಮಾಡಿದಳು..!

ಅಕ್ಕನಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿಹೊಯ್ತಾ..? ಆಡುತ್ತಿದ್ದ ಮಕ್ಕಳನ್ನ ಕಿಡ್ನ್ಯಾಪ್ ಮಾಡಿದಳು..!

Published : Dec 03, 2023, 03:04 PM IST

ಅಕ್ಕನಿಗೆ ಬುದ್ಧಿವಾದ ಹೇಳಿದ್ದೇ  ತಪ್ಪಾಗಿಹೊಯ್ತಾ..?
ತಂಗಿಯ ಮೇಲಿನ ಕೋಪಕ್ಕೆ ಮಗನನ್ನ ಮುಗಿಸಿದ್ಲು..!
ಚಿಕ್ಕಬಳ್ಳಾಪುರದಲ್ಲಿ ಕಿಡ್ನ್ಯಾಪ್ ಬೆಂಗಳೂರಲ್ಲಿ ಅರೆಸ್ಟ್..!


ಅವಳು ಕೂಲಿ ಮಾಡಿಕೊಂಡು ಇಬ್ಬರು ಮಕ್ಕಳನ್ನ ಸಾಕುತ್ತಿದ್ದಳು. ಗಂಡ ಆಕೆಯನ್ನ ಬಿಟ್ಟು ಹೋದಮೇಲೆ ಅವಳೇ ಕುಟುಂಬದ ಜವಾಬ್ದಾರಿ ಹೊತ್ತಿದ್ಲು. ದುಡಿಯುತ್ತಿದ್ದ ಪುಡಿಗಾಸಿನಲ್ಲೆ ಹೊಟ್ಟೆ ಬಟ್ಟೆ ಹೊಂಚಿಕೊಂಡು ಮಕ್ಕಳನ್ನೂ ಚೆನ್ನಾಗಿ ಓದಿಸುತ್ತಿದ್ದಳು. ಆದ್ರೆ ಆವತ್ತೊಂದು ದಿನ ಆಕೆ ಮನೆಯಿಂದ ಹೊರ ಹೋಗಿದ್ದಾಗ ಇಬ್ಬರು ಮಕ್ಕಳು ಕಿಡ್ನ್ಯಾಪ್(Kidnap) ಆಗಿಬಿಟ್ರು. ಎಲ್ಲಿ ಹುಡುಕಿದ್ರೂ ಮಕ್ಕಳ ಸುಳಿವು ಮಾತ್ರ ಸಿಗಲೇ ಇಲ್ಲ. ಠಾಣೆಯಲ್ಲಿ ಕೇಸ್ ಕೂಡ ದಾಖಲಾಯ್ತು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ(Police) ಮಕ್ಕಳನ್ನ ಕಿಡ್ನ್ಯಾಪ್ ಮಾಡಿದ್ದು ಒಡಹುಟ್ಟಿದ ಅಕ್ಕನೇ ಅನ್ನೋದು ಗೊತ್ತಾಗಿತ್ತು.ಕಬ್ಬನ್ ಪಾರ್ಕ್ ಪೊಲೀಸರಿಗೆ ಅಂಬಿಕಾ ಸಿಕ್ಕಿಬಿದ್ದಿದ್ಲು.ಆಕೆಯ ಜೊತೆ ಅನಿತಾಳ ಮೊದಲ ಮಗಳು ಸಿಕ್ಕಿದ್ದಾಳೆ. ಗ ಏನಾದ..? ಈ ಪ್ರಶ್ನೆಗೆ ಉತ್ತರ ಅಂಬಿಕಾಳಿಗೆ ಮಾತ್ರ ಗೊತ್ತಿತ್ತು. ಅವಳಿಂದ ಬಾಯಿಬಿಡಿಸಲು ಆಕೆಯನ್ನ ಪೆರೇಸಂದ್ರಗೆ ಕರೆತಂದ ಪೊಲೀಸರು ವಿಚಾರಣೆ ಶುರು ಮಾಡಿದ್ರು. ಅವಳು ಗಂಡನನ್ನ ಬಿಟ್ಟು ತವರು ಮನೆ ಸೇರಿದ್ಲು.. ತಾಯಿ ಮತ್ತು ತಂಗಿಯ ಜೊತೆಗೇ ವಾಸ ಮಾಡೋದಕ್ಕೆ ಶುರು ಮಾಡಿದ್ಲು. ಆದ್ರೆ ತವರು ಮನೆಯಲ್ಲಿದ್ದವಳು ಬೇರೊಬ್ಬನ ಸಹವಾಸ ಮಾಡಿದ್ಲು. ಬೆಳಗ್ಗೆ ಮನೆ ಬಿಟ್ಟು ಹೋದ್ರೆ ರಾತ್ರಿ ಆದ್ರೂ ವಾಪಸ್ ಬರುತ್ತಿರಲಿಲ್ಲ.. ಇದರ ಬಗ್ಗೆ ತಂಗಿ ಅಕ್ಕನಿಗೆ ಪ್ರಶ್ನೆ ಮಾಡಿದ್ದಾಳೆ. ಅಷ್ಟೇ.. ನನಗೇ ಪ್ರಶ್ನೆ ಮಾಡುತ್ತಿದ್ದಾಳಲ್ಲ ಅಂತ ತಿಳಿದ ಅಕ್ಕ ತಂಗಿಯ ವಿರುದ್ಧ ಕತ್ತಿ ಮಸೆಯೋಕೆ ಶುರು ಮಾಡಿದಳು. ತಂಗಿಗೆ ಬುದ್ಧಿ ಕಲಿಸಬೇಕು ಅನ್ನೋ ನಿಟ್ಟಿನಲ್ಲಿ ಆಕೆಯ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿದಳು. ಇನ್ನೂ ಮಕ್ಕಳನ್ನ ಕಿಡ್ನ್ಯಾಪ್ ಮಾಡಿದ ಆಕೆ 6 ವರ್ಷದ ಮಗನನ್ನ ಕೊಂದು (Murder) ಹೂತು ಹಾಕಿದ್ರೆ ಉಳಿದ ಮಗಳನ್ನ ಬೆಂಗಳೂರಿಗೆ ಕರೆತಂದಿದ್ಲು.. ಆದ್ರೆ ಈಕೆಯ ಅದೃಷ್ಟ ಕೆಟ್ಟಿತ್ತು.. ಆಟೋ ಡ್ರೈವರ್ ಈಕೆಯ ಮೇಲೆ ಅನುಮಾನ ಬಂದು ಸೀದಾ ಪೊಲೀಸ್ ಠಾಣೆಗೆ ದೂರು ನೀಡಿದ್ರು.

ಇದನ್ನೂ ವೀಕ್ಷಿಸಿ:  ರಾಜ್ಯದ ನಾಯಕತ್ವ ಗಟ್ಟಿಯಾಗಿ ಇದ್ದಾಗ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ: ಬಿ.ಎಸ್.ಯಡಿಯೂರಪ್ಪ

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more