ಹಿಟ್ ಆ್ಯಂಡ್ ರನ್ ಕೇಸ್‌ಗೆ ಮೇಜರ್ ಟ್ವಿಸ್ಟ್..! ಅದು ಆ್ಯಕ್ಸಿಡೆಂಟ್ ಅಲ್ಲ ಡೆಡ್ಲಿ ಮರ್ಡರ್..!

Mar 29, 2024, 5:20 PM IST

ಅದು ಪೊಲೀಸರಿಗೆ ಸವಾಲಾಗಿದ್ದ ಪ್ರಕರಣ.ಕಗ್ಗತ್ತಲ ರಾತ್ರಿಯಲ್ಲಿ ನಡುರಸ್ತೆಯಲ್ಲಿ ಅದೊಂದು ಹೆಣ ಬಿದಿತ್ತು. ಮೇಲ್ನೋಟಕ್ಕೆ ಅದೊಂದು ಅಪಘಾತದಂತೆ ಕಂಡಿತ್ತು. ಸ್ಥಳಕ್ಕೆ ಬಂದ ಪೊಲೀಸರು(Police) ಅದು ಹಿಟ್ ಅಂಡ್ ರನ್ ಅಂತಲೇ ಭಾವಿಸಿದ್ದರು. ಆದ್ರೆ ತನಿಖೆ ಕೈಗೊಂಡ ಪೊಲೀಸರಿಗೆ ಸಾವಿನ ಹಿಂದಿನ ಹಲವು ಸಂಗತಿಗಳು ಗೊತ್ತಾಗಿದ್ವು. ಅಷ್ಟೇ ಅಲ್ಲ ಅದು ಹಿಟ್ ಆ್ಯಂಡ್ ರನ್ ಕೇಸ್ ಅಲ್ಲ ಬದಲಿಗೆ ಹಾರ್ಡ್ಕೋರ್ ಮರ್ಡರ್(Murder) ಅನ್ನೋದು ಗೊತ್ತಾಗಿತ್ತು. ಸ್ನೇಹಿತ ಗೋಪಿ ಸಾವನ್ನಪ್ಪಿ ಕೆಲವೇ ಗಂಟೆಗಳಲ್ಲಿ ಉಮಾಪತಿ ವಿಷ ಸೇವಿಸಿಬಿಟ್ಟಿದ್ದ. ಆತ ಈ ಕ್ಷಣಕ್ಕೂ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ. ಆದ್ರೆ ಉಮಾಪತಿ ಗೋಪಿಯನ್ನ ಕೊಂದಿಲ್ಲ. ಗೋಪಿ ಮತ್ತು ಸ್ನೇಹಿತ ಉಮಾಪತಿ ಆವತ್ತು ಎಣ್ಣೆ ಹಾಕಲು ಬಾರ್‌ಗೆ ಹೋಗಿದ್ರು.ಇದೇ ವೇಳೆ ಪಕ್ಕದ ಟೇಬಲ್ನಲ್ಲಿ ಕೂತಿದ್ದವನ ಪರಿಚಯವಾಗಿತ್ತು. ನಂತರ ಮೂವರೂ ಒಂದೇ ಟೇಬಲ್‌ನಲ್ಲಿ ಮಧ್ಯರಾತ್ರಿವರೆಗೆ ಎಣ್ಣೆ ಹಾಕಿದ್ದಾರೆ. ನಂತರ ಅದು ಸಾಲದಾಯ್ತು ಅಂತ ಹೊರಗಡೆ ಬಂದು ಅವನ ಕಾರಿನಲ್ಲೇ ಎಣ್ಣೆ ಹಾಕಿದ್ದಾರೆ. ಈ ವೇಳೆ ಗೋಪಿ ಬಾಯಿಗೆ ಬಂದಾಗೆ ಮಾತನ್ನಾಡಿದ್ದಾನೆ. ಇದು ಮೂರನೇ ವ್ಯಕ್ತಿಯ ಕೋಪ ಜಾಸ್ತಿಯಾಗುವಂತೆ ಮಾಡುತ್ತೆ. ಇದೇ ಕೋಪದಲ್ಲಿ ಗೋಪಿ ಮತ್ತು ಉಮಾಪತಿಯನ್ನ ಕಾರಿನಿಂದ ಕೆಳಗಿಳಿಸಿ ನಂತರ ಅದೇ ಕಾರಿನಿಂದ ಗೋಪಿಗೆ ಡಿಕ್ಕಿ ಹೊಡೆದು ಅವನ ಹೆಣ ಹಾಕಿ ಅಲ್ಲಿಂದ ಎಸ್ಕೆಪ್ ಆಗಿದ್ದಾನೆ. ಇನ್ನೂ ಸ್ನೇಹಿತ ಸತ್ತ ಅನ್ನೋದು ಗೊತ್ತಾಗಿ ಫೀಲಿಂಗ್ನಲ್ಲಿ ಉಮಾಪತಿ ತನ್ನ ಗ್ರಾಮಕ್ಕೆ ಹೋಗಿ ವಿಷ ಸೇವಿಸಿಬಿಟ್ಟಿದ್ದಾನೆ. ಸದ್ಯ  ಪೊಲೀಸರು ಕಾರ್ ಚಾಲಕ ಮುನಿಕೃಷ್ಣನ ಬಂಧಿಸಿದ್ದಾರೆ. ಮುನಿಕೃಷ್ಣಗೆ ಈ ಇಬ್ಬರ ಪರಿಚಯ ಇರಲಿಲ್ಲ ಅನ್ನೊದು ಆತನ ಹೇಳಿಕೆ.. ಆದರೇ ಗೋಪಿ ಈಗಾಗಲೇ ಮೃತಪಟ್ಟಿದ್ದು, ಉಮಾಪತಿ ಸಾವು ಬದುಕಿನ ನಡುವೆ ಹೊರಾಟ ನಡೆಸುತಿದ್ದಾನೆ.

ಇದನ್ನೂ ವೀಕ್ಷಿಸಿ:  ಅನಾಹುತ ಮಾಡಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ..! ಆನೆಯ ಮೇಲೆ ಕುಳಿತು ಆ ಹಳ್ಳಿಗೆ ಇಂದಿರಾ ಬಂದದ್ದೇಕೆ..?