ಜ್ಯೋತಿಷ್ಯದ ನೆಪದಲ್ಲಿ ಮನೆಗೆ ಕನ್ನ: ಕಲಬುರಗಿಗೆ ಶುರುವಾಗಿದೆ ಮಹಾರಾಷ್ಟ್ರ ಕಂಟಕ

ಜ್ಯೋತಿಷ್ಯದ ನೆಪದಲ್ಲಿ ಮನೆಗೆ ಕನ್ನ: ಕಲಬುರಗಿಗೆ ಶುರುವಾಗಿದೆ ಮಹಾರಾಷ್ಟ್ರ ಕಂಟಕ

Published : Aug 26, 2022, 11:47 AM IST

ಅವರು ಜ್ಯೋತಿಷಿಗಳು. ಹಾಗಂತ ಹೇಳಿಕೊಂಡು ಅವರು ನಿಮ್ಮ ಮನೆ ಮುಂದೆ ಬಂದು ನಿಂತ್ರೆ ಅಲ್ಲಿ ಏನೋ ಸಂಥಿಂಗ್ ಆಗುತ್ತೆ ಅಂತಾನೇ ಅರ್ಥ. ಇಲ್ಲೊಂದಷ್ಟು ಗ್ಯಾಂಗ್ಗಳು ಸೈಲೆಂಟಾಗಿ ಬಂದು ನಮ್ಮ ಕಲಬುರ್ಗಿಗೆ ಬಂದು ನೆಲಸಿಬಿಟ್ಟಿವೆ. 

ಕಲಬುರಗಿ (ಆ.26): ಅವರು ಜ್ಯೋತಿಷಿಗಳು. ಹಾಗಂತ ಹೇಳಿಕೊಂಡು ಅವರು ನಿಮ್ಮ ಮನೆ ಮುಂದೆ ಬಂದು ನಿಂತ್ರೆ ಅಲ್ಲಿ ಏನೋ ಸಂಥಿಂಗ್ ಆಗುತ್ತೆ ಅಂತಾನೇ ಅರ್ಥ. ಇಲ್ಲೊಂದಷ್ಟು ಗ್ಯಾಂಗ್ಗಳು ಸೈಲೆಂಟಾಗಿ ಬಂದು ನಮ್ಮ ಕಲಬುರ್ಗಿಗೆ ಬಂದು ನೆಲಸಿಬಿಟ್ಟಿವೆ. ಈ ಗ್ಯಾಂಗ್‌ನ ವರ್ಕಿಂಗ್ ಸ್ಟೈಲೇ ಡಿಫರೆಂಟ್. ಬೆಳಗ್ಗೆ ಎಲ್ಲಾ ಜ್ಯೋತಿಷ್ಯ ಹೇಳ್ತಾರೆ. ರಾತ್ರಿ ಆದ್ರೆ ಬಾಗಿಲು ಮುರೀತ್ತಾರೆ. ಆದ್ರೆ ಇವರೂ ನಮ್ಮ ಕರ್ನಾಟಕದವರೇ ಅಲ್ಲ. ಪಕ್ಕದ ಮಹಾರಾಷ್ಟ್ರದಿಂದ ಬಂದು ಕಲಬುರ್ಗಿಯಲ್ಲಿ ದರೋಡೆ ಮಾಡೋದ್ರಲ್ಲಿ ಆ್ಯಕ್ಟೀವ್ ಆಗಿಬಿಟ್ಟಿವೆ. ಹೀಗೆ ಪಕ್ಕದ ರಾಜ್ಯದಿಂದ ಬಂದು ನಮ್ಮ ರಾಜ್ಯದಲ್ಲಿ ದರೋಡೆ ಮಾಡ್ತಿದ್ದ ಗ್ಯಾಂಗ್ನಮ್ಮ ಪೊಲೀಸರಿಗೆ ತಗ್ಲಾಕೊಂಡ ರೋಚಕ ಕಥೆಯೇ ಇವತ್ತಿನ ಎಫ್.ಐ.ಆರ್. 

ಯಾವಾಗ ಪುಣೆ ಮೂಲದ ಸಚಿನ್ ಅನ್ನೋನ ಹಿಡಿದು ಅವನ ಕಥೆ ಮುಗಿಸಿದ್ರೋ ಕಲಬುರಗಿ ಶಾಂತವಾಯ್ತು ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಹಾಗಾಗಿರಲಿಲ್ಲ. ಬಿದ್ದಾಪೂರ ಕಾಲೋನಿಯಲ್ಲಿ ಮತ್ತೆ ಕಳ್ಳತನ ಶುರುವಾಗಿಬಿಡ್ತು. ಪ್ರತಿನಿತ್ಯ ಒಂದಿಲ್ಲೊಂದು ಮನೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗ್ತಾನೇ ಹೊಯ್ತು. ಹಾಗಾದ್ರೆ ಕಲಬುರಗಿಯಲ್ಲಿ ಮತ್ತೆ ಕಳ್ಳತನ ಶುರು ಮಾಡಿದವರ್ಯಾರು..? ಮತ್ತೆ ಕಲಬುರಗಿಗೆ ಎಂಟ್ರಿ ಕೊಟ್ಟ ಆ ಗ್ಯಾಂಗ್ ಯಾವುದು..? ಒಬ್ಬನ ಕಥೆ ಮುಗಿಸಿದ್ರೂ ಕಲಬುರಗಿಯಲ್ಲಿ ಕಳ್ಳತನ, ದರೋಡೆ ನಿಲ್ಲಲಿಲ್ಲ. ಇದ್ರಿಂದ ಭಯಭೀತರಾದ ಜನ, ಮತ್ತೆ ನೈಟ್ ರೌಂಡ್ಸ್ ಹಾಕಲು ತೀರ್ಮಾನಿಸಿದ್ರು. ಹೀಗೆ ಮತ್ತೆ ರಾತ್ರಿ ಗಸ್ತು ತಿರುಗಿದ ಅಲ್ಲಿನ ಜನರಿಗೆ ಅವತ್ತೊಂದು ದಿನ 4 ದರೋಡೆಕೋರರು ತಗ್ಲಾಕೊಂಡ್ರು. ಹಿಡಿದು ನಾಲಕ್ಕು ತದುಕಿದ್ರು. ತದಕಿದ ನಂತರ ಏನ್ರಪ್ಪ ನಿಮ್ಮ ಕಥೆ ಅಂದಾಗ ಅವರು ಹೇಳಿದ್ದು ಜ್ಯೋತಿಷ್ಯದ ಕಥೆಯನ್ನ. 

ಪ್ರೀತ್ಸೆ..ಪ್ರೀತ್ಸೆ ಅಂತ ಹಿಂದೆ ಬಿದ್ದು ಕಾಡಿದ, ಒಲ್ಲೆ ಅಂದವಳಿಗೆ ಹಾಕಿದೆಂಥಾ ಸ್ಕೆಚ್..?

ಹೌದು! ಕಲಬುರಗಿಯ ಜನ ಮತ್ತೆ ನಿಟ್ಟಿಸುರು ಬಿಟ್ಟಿದ್ದಾರೆ. ಆದ್ರೆ ಖದೀಮರು ತಮ್ಮ ಜೊತೆಯೇ ಇದ್ದರಲ್ಲ ಅನ್ನೋ ಶಾಕ್ ಅವರಿಗೆ ಆಗಿತ್ತು. ಇನ್ನೂ ಸದ್ಯ ಮಹರಾಷ್ಟ್ರದೇ ಎರಡು ಗ್ಯಾಂಗ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. ಆದ್ರೆ ಈ ಗ್ಯಾಂಗ್‌ಗಳ ವರ್ಕಿಂಗ್ ಸ್ಟೈಲ್ ನಿಜಕ್ಕೂ ಇಂಟರೆಸ್ಟಿಂಗ್. ಅವರೆಲ್ಲಾ ಮಹಾರಾಷ್ಟ್ರದವರು. ಕಲಬುರಗಿಯನ್ನೇಏ ಟಾರ್ಗೆಟ್ ಮಾಡಿಕೊಂಡು ಬಂದಿದ್ರು. ಯಾವತ್ತು ಯಾವ ಮನೆಯನ್ನ ದರೋಡೆ ಮಾಡಬೇಕು ಅನ್ನೋ ಕನ್ಫ್ಯೂಷನ್ ಅವರಿಗೆ ಇರಲಿಲ್ಲ. ಕಾರಣ ಒಂದು ಮನೆಗೆ ನುಗ್ಗಬೇಕಾದ್ರೂ ಅವರು ಚೆನ್ನಾಗಿ ಹೋಮ್‌ವರ್ಕ್ ಮಾಡ್ತಿದ್ರು. ಆದ್ರೆ ಅವತ್ತು ಅವರ ಟೈಂ ಖರಾಬಾಗಿತ್ತು ಅಲ್ಲಿನ ನಿವಾಸಿಗಳ ಬಳಿಯೇ ತಗ್ಲಾಕೊಂಡ್ರು. ಇನ್ನೂ ಪೊಲೀಸರು ಅವರ ನೆಟ್ವರ್ಕ್ ತೋರಿಸಿ ಬನ್ನಿ ಅಂದ್ರೆ ಅಲ್ಲೂ ತಮ್ಮ ನಟೋರಿಯಸ್ ಬುದ್ಧಿಯನ್ನ ತೋರಿಸೋಕೆ ಮುಂದಾಗಿದ್ರು. ಅದ್ರೆ ಕಾಲಿಗೆ ಗುಂಡು ಹೊಡೆಸಿಕೊಳ್ಳುವಂತಾಯ್ತು.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more