ಮಕ್ಕಳು ಶಾಲೆಗೆ ಹೋಗಿದ್ದಾರಾ.. ಪೋಷಕರೇ ಎಚ್ಚರ ! ಅಪಹರಣಕಾರರ ಪತ್ತೆ ಹಚ್ಚದ ಖಾಕಿ !

ಮಕ್ಕಳು ಶಾಲೆಗೆ ಹೋಗಿದ್ದಾರಾ.. ಪೋಷಕರೇ ಎಚ್ಚರ ! ಅಪಹರಣಕಾರರ ಪತ್ತೆ ಹಚ್ಚದ ಖಾಕಿ !

Published : Sep 12, 2023, 10:19 AM IST

ಆತ 9ನೇ ಕ್ಲಾಸ್ ಬಾಲಕ, ಶಾಲೆ ಅರ್ಧಕ್ಕೆ ಮುಗಿಸಿಕೊಂಡು ಒಂಟಿಯಾಗಿ ಮನೆ ಕಡೆಗೆ ಹೊರಟಿದ್ದ. ದಾರಿಯಲ್ಲಿ ಕುಳಿತ ಯಾರೋ ಅಪರಿಚಿತರು ಬಾಲಕನಿಗೆ ಚಾಕಲೇಟ್ ಕೊಡುವೆ ಬಾ ಅಂತ ಕರೆದರಂತೆ. ಆದ್ರೆ ಬಾಲಕ ಅವರ ಬಳಿ ಹೋಗಲಿಲ್ಲ. ಅದಕ್ಕೆ ಅವರು ಏನು ಮಾಡಿದ್ರು ಗೊತ್ತಾ ಈ ಸ್ಟೋರಿ ನೋಡಿ. 
 

ಪೋಷಕರೇ.. ನಿಮ್ಮ ಮಕ್ಕಳು ಶಾಲೆಗೆ ಹೋಗ್ತಿದ್ದಾರಾ..? ಶಾಲೆಗಷ್ಟೇ ಅಲ್ಲ ಮನೆಯಿಂದ ಮಕ್ಕಳು ಹೊರ ಹೋದರೆ ಮರಳಿ ಮನೆ ಸೇರೋವರೆಗೂ ನಿಗಾ ಇಟ್ಟಿರಿ.. ಹೌದು ರಾಯಚೂರಿನಲ್ಲಿ(Raichur) ನಡೆದ ಘಟನೆಯೊಂದು ಈಗ ಪೋಷಕರನ್ನು ಎಚ್ಚರಿಸುವಂತಾಗಿದೆ. ಈ ಬಾಲಕನ ಹೆಸರು ಅಮಾನ್. 9ನೇ ತರಗತಿ ವಿದ್ಯಾರ್ಥಿ.. ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಈತ ಸೆಪ್ಟೆಂಬರ್ 6ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಶಾಲೆಯಿಂದ(School) ಮನೆ ಕಡೆ ಬರುತ್ತಿದ್ದ. ಮಾರ್ಗ ಮಧ್ಯೆ ಅಪರಿಚಿತರ ಗ್ಯಾಂಗೊಂದು ಅಮಾನ್‌ಗೆ ಚಾಕಲೇಟ್ ಆಸೆ ತೋರಿಸಿದೆ. ಆದ್ರೆ, ಅದಕ್ಕೆಲ್ಲ ಬಾಲಕ(Boy) ಸೊಪ್ಪು ಹಾಕದಿದ್ದಾಗ ಹಿಂಬದಿಯಿಂದ ಮುಖಕ್ಕೆ ಬಟ್ಟೆಯಿಂದ ಮುಚ್ಚಿ ಪ್ರಜ್ಞೆ ತಪ್ಪಿಸಿ ವಾಹನದಲ್ಲಿ ಅಪಹರಿಸಿದ್ದಾರೆ. ಬಳಿಕ ತಿಂಥಣಿ ಬ್ರಿಜ್ ಬಳಿ ಕಾರು ಬದಲಾಯಿಸಿ, ದೇವದುರ್ಗ ತಾಲೂಕಿನ ಜಾಲಹಳ್ಳಿಗೆ  ಬಾಲಕನನ್ನು ಕರೆದೊಯ್ದಿದ್ದಾರೆ. ಅಷ್ಟೊತ್ತಿಗೆ ಬಾಲಕನಿಗೆ ಪ್ರಜ್ಞೆ ಬಂದಿದೆ. ಆದರೂ ತುಟಿ ಪಿಟಿಕ್ ಎನ್ನದ ಬಾಲಕ ಕಾರ್ನಲ್ಲಿ ಯಾರು ಇಲ್ಲದ ವೇಳೆ ಸಿನಿಮೀಯ ರೀತಿಯಲ್ಲಿ ಎಸ್ಕೇಪಾಗಿದ್ದಾನೆ. ಇತ್ತ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಷಕರಿಗೆ ಸಂಜೆ ಒಂದು ಫೋನ್ ಕಾಲ್ ಬರುತ್ತೆ. ಸಂಜೆ ವೇಳೆ ಜಾಲಹಳ್ಳಿಯಿಂದ ಬಾಲಕ ಅಮಾನ್ ಪೋಷಕರಿಗೆ ಫೋನ್ ಮಾಡಿ ವಿಷ್ಯ ತಿಳಿಸಿದ್ದಾನೆ. ಕೂಡಲೇ ಪೋಷಕರು ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ. ತನ್ನ ಚಾಣಾಕ್ಷತನದಿಂದ ಬಾಲಕ ಅಪಹರಣಕಾರರಿಂದ(Kidnappers) ತಪ್ಪಿಸಿಕೊಂಡು ಬಂದಿದ್ದಾನೆ. ಈ ಘಟನೆ ಈಗ ಹಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರನ್ನೂ ಬೆಚ್ಚಿ ಬೀಳಿಸಿದೆ. ಇನ್ನು ಘಟನೆ ನಡೆದು 5 ದಿನಗಳು ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ, ಅಪಹರಣಕಾರರ ಸುಳಿವಿಲ್ಲ. ಹೀಗಾಗಿ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ವೀಕ್ಷಿಸಿ:  ಕರ್ನಾಟಕದ ಹಾಲು ಮಹಾರಾಷ್ಟ್ರದ ಪಾಲು: ಸೈಲೆಂಟಾಗಿ ಕರುನಾಡ ಗಡಿಗೆ ‘ಮಹಾ’ ಡೈರಿಗಳ ಎಂಟ್ರಿ !

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more