ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

Published : Aug 01, 2023, 09:18 AM IST

ಆತ ಸಿರಿವಂತ ಮತ್ತಷ್ಟು ಹಣ ಮಾಡಬೇಕು ಅನ್ನೊ ಹುಚ್ಚು ಅದ್ಯಾಕೋ ಆತನ ಮನಸ್ಸನ್ನೇ ಅಡ್ಡದಾರಿ ಹಿಡಿಯುವಂತೆ ಮಾಡಿತ್ತು. ಕೋಟ್ಯಾಂತರ ಲೆಕ್ಕದಲ್ಲಿ ಚಿನ್ನದ ವ್ಯವಹಾರ ಮಾಡುವ ಆತ ಇನ್ನೂ ಹೆಚ್ಚಿನ ಹಣ ಮಾಡಲು ವಂಚನೆ ದಾರಿ ಹಿಡಿದಿದ್ದ. ಆದ್ರೆ ಆತ ಇಟ್ಟ ವಂಚಕ ಹೆಜ್ಜೆ ನೇರವಾಗಿ ಕಂಬಿ ಹಿಂದೆ ಸೇರುವಂತೆ ಮಾಡಿದೆ.
 

ತನ್ನದೇ ಅಂಗಡಿಗೆ ಕನ್ನ ಹಾಕುವ ಇವನೆಂಥಾ ಹುಚ್ಚ ಅನ್ಕೊಂಡ್ರಾ. ಇಲ್ಲ ರೀ.. ಹುಚ್ಚನಲ್ಲ.. ಈತ ಖತರ್ನಾಕ್ ಖದೀಮ. ಬೆಂಗಳೂರಿನ(Bengaluru) ನಗರಥ್ ಪೇಟೆಯಲ್ಲಿರುವ ತನ್ನದೇ ಚಿನ್ನದ ಅಂಗಡಿಗೆ (Jewelery shop) ಕನ್ನ ಹಾಕಿದ ಈ ಕಿಲಾಡಿ ಕೃತ್ಯದ ಹಿಂದೆ ಇನ್ಶುರೆನ್ಸ್ ಕ್ಲೈಮ್ ಪ್ಲಾನ್ ಇದೆ. ಹೌದು, ಗ್ರೀನ್ ಬೋರ್ಡ್ ಸ್ಕೂಟಿಯಲ್ಲಿ  ಬಂದು ಚಿನ್ನ ಕದಿಯುತ್ತಿರೋ ಇವರು ಕಿಲಾಡಿ ರಾಜ್ ಜೈನ್ ಕಳುಹಿಸಿರುವ ಹುಡುಗರು. ಜುಲೈ  12ರಂದು ತನ್ನದೇ ಹುಡುಗರಿಂದ ಕಳ್ಳತನ(Theft) ಮಾಡಿಸಿ, ಠಾಣೆಗೆ ಕಣ್ಣೀರು ಹಾಕುತ್ತ ಓಡೋಡಿ ಬಂದಿದ್ದಾನೆ. ಚಿನ್ನ ಕಳ್ಳತನದ ಕಥೆ ಕಟ್ಟಿದ್ದಾನೆ. ಮೈಸೂರು ರಸ್ತೆ ಫ್ಲೈ ಓವರ್‌ನಲ್ಲಿ 3.7 ಕೆಜಿ ಚಿನ್ನ ತೆಗೆದುಕೊಂಡು ನಮ್ಮ ಕೆಲಸಗಾರರು  ಹೋಗುವಾಗ ಚಿನ್ನದ ಬ್ಯಾಗ್ ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದ. ಆದ್ರೆ, ಕಾಟನ್ ಪೇಟೆ ಪೊಲೀಸರು ತನಿಖೆಯಲ್ಲಿ ಇನ್ಸ್ಯೂರೆನ್ಸ್ ಕ್ಲೈಂ ಮಾಡಿಸಿಕೊಳ್ಳಲು ಮಾಲೀಕ ರಾಜ್ ಜೈನನೇ ಕುತಂತ್ರ ನಡೆಸಿದ್ದು ಬಯಲಾಗಿದೆ. ಸದ್ಯ ಮಾಲೀಕ ರಾಜ್ ಜೈನ್ ಹಾಗೂ ಇಬ್ಬರು ಬಾಲಾಪರಾಧಿಗಳ ಬಂಧಿಸಿದ ಕಾಟನ್ ಪೇಟೆ ಪೊಲೀಸರು(CottonPete Police) ಬಂಧಿತರಿಂದ 2.7ಕೆಜಿ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ದುಟ್ಟು ಮಾಡಲು ಅಡ್ಡದಾರಿ ಹಿಡಿದಿದ್ದ ಉದ್ಯಮಿ ಈಗ ಕಂಬಿ ಹಿಂದೆ ಸೇರಿದ್ದಾನೆ.

ಇದನ್ನೂ ವೀಕ್ಷಿಸಿ:  Today Rashibhavishy: ಮೇಷ ರಾಶಿಯವರಿಗೆ ಇಂದು ಸಂಗಾತಿ ವಿಚಾರದಲ್ಲಿ ಅಸಮಾಧಾನ..ಪರಿಹಾರಕ್ಕೆ ಹೀಗೆ ಮಾಡಿ

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!