ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

Published : Aug 01, 2023, 09:18 AM IST

ಆತ ಸಿರಿವಂತ ಮತ್ತಷ್ಟು ಹಣ ಮಾಡಬೇಕು ಅನ್ನೊ ಹುಚ್ಚು ಅದ್ಯಾಕೋ ಆತನ ಮನಸ್ಸನ್ನೇ ಅಡ್ಡದಾರಿ ಹಿಡಿಯುವಂತೆ ಮಾಡಿತ್ತು. ಕೋಟ್ಯಾಂತರ ಲೆಕ್ಕದಲ್ಲಿ ಚಿನ್ನದ ವ್ಯವಹಾರ ಮಾಡುವ ಆತ ಇನ್ನೂ ಹೆಚ್ಚಿನ ಹಣ ಮಾಡಲು ವಂಚನೆ ದಾರಿ ಹಿಡಿದಿದ್ದ. ಆದ್ರೆ ಆತ ಇಟ್ಟ ವಂಚಕ ಹೆಜ್ಜೆ ನೇರವಾಗಿ ಕಂಬಿ ಹಿಂದೆ ಸೇರುವಂತೆ ಮಾಡಿದೆ.
 

ತನ್ನದೇ ಅಂಗಡಿಗೆ ಕನ್ನ ಹಾಕುವ ಇವನೆಂಥಾ ಹುಚ್ಚ ಅನ್ಕೊಂಡ್ರಾ. ಇಲ್ಲ ರೀ.. ಹುಚ್ಚನಲ್ಲ.. ಈತ ಖತರ್ನಾಕ್ ಖದೀಮ. ಬೆಂಗಳೂರಿನ(Bengaluru) ನಗರಥ್ ಪೇಟೆಯಲ್ಲಿರುವ ತನ್ನದೇ ಚಿನ್ನದ ಅಂಗಡಿಗೆ (Jewelery shop) ಕನ್ನ ಹಾಕಿದ ಈ ಕಿಲಾಡಿ ಕೃತ್ಯದ ಹಿಂದೆ ಇನ್ಶುರೆನ್ಸ್ ಕ್ಲೈಮ್ ಪ್ಲಾನ್ ಇದೆ. ಹೌದು, ಗ್ರೀನ್ ಬೋರ್ಡ್ ಸ್ಕೂಟಿಯಲ್ಲಿ  ಬಂದು ಚಿನ್ನ ಕದಿಯುತ್ತಿರೋ ಇವರು ಕಿಲಾಡಿ ರಾಜ್ ಜೈನ್ ಕಳುಹಿಸಿರುವ ಹುಡುಗರು. ಜುಲೈ  12ರಂದು ತನ್ನದೇ ಹುಡುಗರಿಂದ ಕಳ್ಳತನ(Theft) ಮಾಡಿಸಿ, ಠಾಣೆಗೆ ಕಣ್ಣೀರು ಹಾಕುತ್ತ ಓಡೋಡಿ ಬಂದಿದ್ದಾನೆ. ಚಿನ್ನ ಕಳ್ಳತನದ ಕಥೆ ಕಟ್ಟಿದ್ದಾನೆ. ಮೈಸೂರು ರಸ್ತೆ ಫ್ಲೈ ಓವರ್‌ನಲ್ಲಿ 3.7 ಕೆಜಿ ಚಿನ್ನ ತೆಗೆದುಕೊಂಡು ನಮ್ಮ ಕೆಲಸಗಾರರು  ಹೋಗುವಾಗ ಚಿನ್ನದ ಬ್ಯಾಗ್ ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದ. ಆದ್ರೆ, ಕಾಟನ್ ಪೇಟೆ ಪೊಲೀಸರು ತನಿಖೆಯಲ್ಲಿ ಇನ್ಸ್ಯೂರೆನ್ಸ್ ಕ್ಲೈಂ ಮಾಡಿಸಿಕೊಳ್ಳಲು ಮಾಲೀಕ ರಾಜ್ ಜೈನನೇ ಕುತಂತ್ರ ನಡೆಸಿದ್ದು ಬಯಲಾಗಿದೆ. ಸದ್ಯ ಮಾಲೀಕ ರಾಜ್ ಜೈನ್ ಹಾಗೂ ಇಬ್ಬರು ಬಾಲಾಪರಾಧಿಗಳ ಬಂಧಿಸಿದ ಕಾಟನ್ ಪೇಟೆ ಪೊಲೀಸರು(CottonPete Police) ಬಂಧಿತರಿಂದ 2.7ಕೆಜಿ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ದುಟ್ಟು ಮಾಡಲು ಅಡ್ಡದಾರಿ ಹಿಡಿದಿದ್ದ ಉದ್ಯಮಿ ಈಗ ಕಂಬಿ ಹಿಂದೆ ಸೇರಿದ್ದಾನೆ.

ಇದನ್ನೂ ವೀಕ್ಷಿಸಿ:  Today Rashibhavishy: ಮೇಷ ರಾಶಿಯವರಿಗೆ ಇಂದು ಸಂಗಾತಿ ವಿಚಾರದಲ್ಲಿ ಅಸಮಾಧಾನ..ಪರಿಹಾರಕ್ಕೆ ಹೀಗೆ ಮಾಡಿ

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!