ಅವನಿಗಿತ್ತು ತನ್ನ ಹೆಂಡತಿಯನ್ನ ಕೊಂದ ಅನುಭವ..! ಸೂಸೈಡ್ ಅಂತ ಬಂದ್ರು, ಆದ್ರೆ ಅದು ಕೊಲೆ..!

ಅವನಿಗಿತ್ತು ತನ್ನ ಹೆಂಡತಿಯನ್ನ ಕೊಂದ ಅನುಭವ..! ಸೂಸೈಡ್ ಅಂತ ಬಂದ್ರು, ಆದ್ರೆ ಅದು ಕೊಲೆ..!

Published : Feb 10, 2024, 05:57 PM IST

ಸುಪಾರಿ ಪಡೆದವನು ಅನುಭವಿ ಕಿಲ್ಲರ್..!
ಪೊಲೀಸರಿಗೆ ಬಡಿದಿತ್ತು ಅನುಮಾನದ ವಾಸನೆ
ಕೊಲ್ಲೋದಕ್ಕೂ ಮುನ್ನ ಸಿಸಿ ಕ್ಯಾಮರಾ ಆಫ್..!

ಅದು ಚಿಕ್ಕ ಕುಟುಂಬ..ಗಂಡ(Husband) ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ಬಟ್ಟೆ ವ್ಯಾಪಾರ ಮಾಡ್ತಿದ್ರೆ ಹೆಂಡತಿ(Wife)ಮಕ್ಕಳನ್ನ ಸ್ಕೂಲ್‌ಗೆ ಕಳಿಸಿ ಮನೆಗೆಲಸ ಮಾಡಿಕೊಂಡು ಇರುತ್ತಿದ್ದಳು. ಮನೆಯಲ್ಲಿ ಬಡತನವಿದ್ದರೂ ಸುಖವಾಗಿ ಜೀವನ ಮಾಡ್ತಿದ್ರು. ಆದ್ರೆ ಆವತ್ತೊಂದು ದಿನ ಹೆಂಡತಿ ತನ್ನದೇ ಮನೆಯಲ್ಲಿ ನೇಣಿಗೆ ಶರಣಾಗಿಬಿಟ್ಟಿದ್ದಳು. ಕೆಲಸಕ್ಕೆ ಹೋಗಿ ಬಂದ ಗಂಡನಿಗೆ ಹೆಂಡತಿಯ ಸಾವು ಕುಸಿದು ಬೀಳುವಂತೆ ಮಾಡಿತ್ತು. ಇನ್ನೂ ಸ್ಪಾಟ್‌ಗೆ ಬಂದ ಪೊಲೀಸರಿಗೆ(Police) ಅನುಮಾನ ಶುರುವಾಗಿತ್ತು. ಅಲ್ಲಿ ನೇಣಿಗೆ ನೇತಾಡುತ್ತಿದ್ದ ಶವ ನೋಡಿ ಇದು ಸೂಸೈಡ್ ಆಗಲಿಕ್ಕೆ ಸಾಧ್ಯವೇ ಇಲ್ಲ ಅಂತೆನ್ನಿಸಿತ್ತು. ಹಾಗಾದ್ರೆ ಹೇಮಲತಾಳನ್ನ ಗೊತ್ತಿದ್ದವನೇ ಕೊಂದಿರೋದು ಅನ್ನೋದು ಕನ್ಫರ್ಮ್. ಬರೋಬ್ಬರಿ 200 ಸಿಸಿ ಕ್ಯಾಮರಾಗಳನ್ನ ಹುಡುಕಿದ ಮೇಲೆ ಹಂತಕ ತಗ್ಲಾಕಿಕೊಂಡಿದ್ದ. ಅವಳನ್ನ ಮದುವೆಯಾಗಿ 15 ವರ್ಷಗಳೇ ಕಳೆದಿದ್ರೂ, ಇಬ್ಬರು ಮಕ್ಕಳಿದ್ರೂ ಹೆಂಡತಿ ಮೇಲಿನ ಅನುಮಾನ ಮಾತ್ರ ಗಂಡನಿಗೆ ಕಡಿಮೆಯಾಗಿರಲಿಲ್ಲ. ಅವಳ ಮೇಲಿನ ಅನುಮಾನದಿಂದಲೇ ಪುಟ್ಟ ಮನೆಗೆ ಸಿಸಿ ಕ್ಯಾಮರಾವನ್ನೂ ಹಾಕಿಸಿದ್ದ. ಆದ್ರೆ ಆವತ್ತು ಆತನಿಗೆ ಅದೇನಾಯ್ತೋ ಏನೋ ಹೆಂಡತಿಯನ್ನೇ ಮುಗಿಸುವ ನಿರ್ಧಾರಕ್ಕೆ ಬಂದುಬಿಟ್ಟ. ಇದಕ್ಕಾಗಿ ಆತ ಆಯ್ದುಕೊಂಡಿದ್ದು ಆತನ ಸ್ನೇಹಿತ. ತನ್ನ ಸ್ನೇಹಿತನಿಗೇ ಗಂಡ, ಹೆಂಡತಿಯನ್ನ ಕೊಲ್ಲಲು(Murder) ಸುಪಾರಿ ಕೊಟ್ಟಿದ್ದ. ಸದ್ಯ ಸುಪಾರಿ ಪಡೆದು ಹೇಮಲತಾ ಕಥೆ ಮುಗಿಸಿದ ವಿನಯ್ ಜೈಲು ಸೇರಿ ತನ್ನ ಹಳೆ ಕಥೆಯನ್ನೂ ಬಾಯಿಬಿಟ್ಟರೆ, ಹೆಂಡತಿಯ ಕಥೆ ಮುಗಿಸಿ ಗಂಡನೂ ಸ್ನೇಹಿತನ ಜೊತೆಗೆ ಒಳಗೆ ಹೋಗಿದ್ದಾನೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಕಡೆಗಣಿಸಿದವರಿಗೆ ಸನ್ಮಾನ ಮಾಡಿತಾ ಕಮಲಪಡೆ..? ಎದುರಾಳಿಗಳಿಗೆ ಮೋದಿ ರವಾನಿಸಿದ ಸಂದೇಶವೇನು..?

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more