ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ

ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ

Published : Jan 16, 2025, 11:17 AM ISTUpdated : Jan 16, 2025, 11:19 AM IST

ಕೀಚಕರು ಅದೆಷ್ಟು ನೀಚರೆಂದರೆ ವಿದ್ಯಾರ್ಥಿನಿಯರನ್ನ ಅತ್ಯಾಚಾರ ಮಾಡಿದ್ದಲ್ಲದೆ ಅದನ್ನ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ವಾರ ಗೋವಾಗೆ ಹೋಗೋಣ. ಬರದಿದ್ರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯರು 10 ದಿನಗಳ ಬಳಿಕ ಈ ವಿಚಾರ ಪೋಷಕರಿಗೆ ತಿಳಿಸಿದ್ದಾರೆ. 

ಬೆಳಗಾವಿ(ಡಿ.16):  ಇದು ಸೋಷಿಯಲ್​ ಮೀಡಿಯಾ ಯುಗ.. ಅದ್ರಲ್ಲೂ ಯುವ ಜನರಂತು ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೇ ಮುಳುಗಿರುತ್ತಾರೆ. ಆನ್​ಲೈನ್​​ನಲ್ಲೇ ಸ್ನೇಹಿತರನ್ನ ಕೂಡ ಹುಡುಕಿಕೊಳ್ತಾರೆ. ಹೀಗೆ ಇನ್ಸ್​​ಸ್ಟಾಗ್ರಾಮ್​ನಲ್ಲಿ ಪರಿಚಯವಾದವನನ್ನ ನಂಬಿದ ಪಿಯು ವಿದ್ಯಾರ್ಥಿನಿ ಬದುಕು ಬರ್ಬಾದ್​ ಆಗಿದೆ. 

ಇವತ್ತು ಇನ್​ಸ್ಟಾಗ್ರಾಂ ರೀಲ್ಸ್​ ಮಾಡದವರು ಯಾರಿದ್ದಾರೆ ಹೇಳಿ. ಬಹುತೇಕರು ಇನ್ಸ್​​ಸ್ಟಾದಲ್ಲಿ ಬಗೆಬಗೆಯ ರೀಲ್ಸ್​ ಮಾಡಿ ಹೆಚ್ಚೆಚ್ಚು ಲೈಕ್ಸ್​, ಕಮೆಂಟ್​ ಬರಲಿ ಅಂತಾ ಹಂಬಲಿಸುತ್ತಾರೆ. ಅದೇ ರೀತಿ ಬೆಳಗಾವಿಯ 17 ವರ್ಷದ ಪಿಯು ವಿದ್ಯಾರ್ಥಿನಿ ಕೂಡ ಇನ್ಸ್​ಟಾಗ್ರಾಂನಲ್ಲಿ ಆಕ್ಟೀವ್​ ಆಗಿದ್ದಳು. ತರಹೇವಾರಿ ರೀಲ್ಸ್​ ಅಪಲೋಡ್​ ಮಾಡುತ್ತಿದ್ದಳು. ಆಗಲೇ ಈಕೆಯ ಮೇಲೆ ಕೀಚಕನೊಬ್ಬನ ಕಣ್ಣು ಬಿದ್ದಿತ್ತು. ಅವನೇ ಈ ಫೋಟೊದಲ್ಲಿರೋ ಅಭಿಷೇಕ್​​. ವಿದ್ಯಾರ್ಥಿನಿ ಅಪ್​ಲೋಡ್​ ಮಾಡ್ತಿದ್ದ ರೀಲ್ಸ್​ಗಳನ್ನ ಲೈಕ್​ ಮಾಡ್ತಿದ್ದ. ಕಮೆಂಟ್​ ಹಾಕ್ತಿದ್ದ. ಕೊನೆಗೆ ಕೊಕಟನೂರ ಜಾತ್ರೆಯಲ್ಲಿ ಇಬ್ಬರು ಮುಖಾಮುಖಿ ಭೇಟಿಯಾಗಿದ್ದಾರೆ. ಫೋನ್​ ನಂಬರ್ ಕೂಡ ಎಕ್ಸ್​ಚೇಂಜ್​ ಆಗಿದೆ.

ಕಾಂಗ್ರೆಸ್ ಪ್ರಧಾನ ಕಚೇರಿಯ ದ್ವಾರವನ್ನೇ ಬದಲಿಸಿದ ಆರ್‌ಎಸ್‌ಎಸ್ ವಾಸ್ತು

ಜನವರಿ 3ರಂದು ಅಭಿಷೇಕ್​ ಅಪ್ರಾಪ್ತೆಗೆ ಸವದತ್ತಿಗೆ ಹೋಗೋಣ ಬಾ ಅಂತಾ ಕರೆದಿದ್ದಾನೆ. ಅಭಿಷೇಕ್​ನನ್ನ ನಂಬಿ ವಿದ್ಯಾರ್ಥಿನಿ ತನ್ನ ಸ್ನೇಹಿತೆ ಜತೆಗೆ ಬಂದಿದ್ದಾಳೆ. ಇರ್ಟಿಗಾ ಕಾರ್​​ನಲ್ಲಿ ಇಬ್ಬರು ಯುವತಿಯರು, ಅಭಿಷೇಕ್​, ಆತನ ಸ್ನೇಹಿತ ಆದಿಲ್ ಶಾ ಹಾಗೂ ಚಾಲಕ ಕೌತುಕ್ ಸವದತ್ತಿ ಕಡೆ ಪ್ರಯಾಣ ಆರಂಭಿಸಿದ್ದಾರೆ. ಆದ್ರೆ ಸವದತ್ತಿ ಕಡೆ ಹೊರಟಿದ್ದ ಕಾರು ಏಕಾಏಕಿ ರಾಯಭಾಗ ತಾಲೂಕಿನ ಸವಸುದ್ದಿ ಕಡೆಗೆ ತಿರುಗಿದೆ. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಇನ್​ಸ್ಟಾಗ್ರಾಂ ಸ್ನೇಹಿತೆ ಮೇಲೆ ಅಭಿಷೇಕ್​ ಹಾಗೂ ಆತನ ಸ್ನೇಹಿತ ಆದಿಲ್​ ಶಾ ಅತ್ಯಾಚಾರ ಎಸಗಿದ್ದಾರೆ. ಇತ್ತ ಕಾರ್​ನಲ್ಲಿ ಪಿಯು ವಿದ್ಯಾರ್ಥಿನಿ ಸ್ನೇಹಿತೆಯನ್ನ ಚಾಲಕ ಕೌತುಕ್ ರೇಪ್​ ಮಾಡಿದ್ದಾನೆ. 

ಈ ಕೀಚಕರು ಅದೆಷ್ಟು ನೀಚರೆಂದರೆ ವಿದ್ಯಾರ್ಥಿನಿಯರನ್ನ ಅತ್ಯಾಚಾರ ಮಾಡಿದ್ದಲ್ಲದೆ ಅದನ್ನ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ವಾರ ಗೋವಾಗೆ ಹೋಗೋಣ. ಬರದಿದ್ರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯರು 10 ದಿನಗಳ ಬಳಿಕ ಈ ವಿಚಾರ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಮೂವರು ರೇಪಿಸ್ಟ್​ಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನಾದ್ರೂ ಪೂರ್ವಾಪರ ಗೊತ್ತಿಲ್ಲದ ವ್ಯಕ್ತಿಗಳ ಜತೆ ಹೋಗುವ ಮುನ್ನ ಹುಡುಗಿಯರು ಎಚ್ಚರ ವಹಿಸಬೇಕಿದೆ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more