ಕಮಿಷನ್ ಕೋಲಾಹಲದ ಮಧ್ಯೆ ಬಿಬಿಎಂಪಿ ಕಚೇರಿಗೆ ಬೆಂಕಿ: ಈ ದುರಂತಕ್ಕೆ ‘ಆ’ ಅಧಿಕಾರಿಯೇ ಕಾರಣನಾ..?

Aug 17, 2023, 10:07 AM IST

ಬಿಬಿಎಂಪಿ ಗುತ್ತಿಗೆ ಬಿಲ್ ಬಾಕಿ ವಿಚಾರದಲ್ಲಿ ಕಮಿಷನ್ ಕದನ ನಡೆಯುತ್ತಿರುವ ಹೊತ್ತಲ್ಲೇ ಬಿಬಿಎಂಪಿ(BBMP) ಕಚೇರಿಯಲ್ಲಿ ನಡೆದ  ಬೆಂಕಿ ದುರಂತ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಬೆಂಕಿ ದುರಂತ(Fire incident) ಆಕಸ್ಮಿಕವೋ..? ಉದ್ದೇಶ ಪೂರ್ವಕವೋ ಅನ್ನೋ ಅನುಮಾನ ಈಗಲೂ ಕಾಡುತ್ತಿದೆ. ಆದ್ರೆ, ಮೇಲ್ನೋಟಕ್ಕೆ ಒಂದಿಷ್ಟು ಕಾರಣಗಳು ಗೋಚರಿಸುತ್ತಿವೆ. ಬಿಬಿಎಂಪಿ ಬೆಂಕಿ ಪ್ರಕರಣಕ್ಕೆ‌ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ಲಕ್ಷ್ಯ ಕಾರಣವಾಯ್ತಾ ಅನ್ನೋ ಅನುಮಾನ ಮೂಡಿದೆ. ಪ್ರಯೋಗಾಲಯಕ್ಕೆ ಬೇಕಾದ ಸೌಲಭ್ಯ ಒದಗಿಸದ ಬಿಬಿಎಂಪಿ ಮುಖ್ಯ ಇಂಜಿನಿಯರ್(BBMP Chief Engineer) ಪ್ರಹ್ಲಾದ್‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಿಬಿಎಂಪಿ ಗುಣನಿಯಂತ್ರಣ ವಿಭಾಗದಲ್ಲಿ ಅಗತ್ಯ ಸಲಕರಣೆ, ಮುಂಜಾಗ್ರತೆ ಭದ್ರತೆ ಇಲ್ಲದ್ದೇ ಬೆಂಕಿಗೆ ಅವಘಡಕ್ಕೆ ಕಾರಣ ಅನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ. ಸಿಬ್ಬಂದಿ, ಸಲಕರಣೆಗಾಗಿ 2022ರಲ್ಲೇ ಗುಣನಿಯಂತ್ರಣ ವಿಭಾಗದಿಂದ ಆಯುಕ್ತರಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿರಲಿಲ್ವಂತೆ. ಒಂದೆಡೆ ಬೆಂಕಿ ದುರಂತದ ತನಿಖೆ ಚುರುಕು ಪಡೆದರೆ, ಮತ್ತೊಂದೆಡೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಜ್ಯೋತಿ ಮತ್ತು ಇಇ ಕಿರಣ್ ಸ್ಥಿತಿ ಗಂಭೀರವಾಗಿದ್ದು, ಡಯಾಲಿಸಿಸ್ ಕೂಡ ಮಾಡಲಾಗ್ತಿದೆ. 

ಇದನ್ನೂ ವೀಕ್ಷಿಸಿ:  ಹಳೇ ಸಂಜೂ ಹೊಸ ಗೀತಾ: ರೊಮ್ಯಾಂಟಿಕ್ ಮೂಡ್‌ನಲ್ಲಿ ಕಿಟ್ಟಿ- ರಚ್ಚು ಡಾನ್ಸ್ !