ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

Mar 21, 2024, 5:42 PM IST

ಆ ರಾಜ್ಯವೇ ಹಾಗೆ. ಯಾವ ಕ್ರಿಮಿನಲ್‌ಗಳು ಅಲ್ಲಿ ಬಾಲ ಬಿಚ್ಚಂಗಿಲ್ಲ. ಒಂದು ವೇಳೆ ಬಾಲ ಬಿಚ್ಚಿದ್ರೂ ಅದನ್ನ ಕಟ್ ಮಾಡಿಬಿಡ್ತಾರೆ ಆ ರಾಜ್ಯದ ದೊರೆ. ನಾವು ಮಾತನ್ನಾಡ್ತಿರೋದು ಉತ್ತರ ಪ್ರದೇಶದ(Uttar Pradesh) ಬಗ್ಗೆ. ಯೋಗಿ ಆದಿತ್ಯನಾಥ್(Yogi Adityanath) ಅಲ್ಲಿನ ಸಿಎಂ ಆದ ಮೇಲೆ ಗೂಂಡ ರಾಜ್ಯವಾಗಿದ್ದಿದ್ದು ರಾಮ ರಾಜ್ಯವಾಗುವತ್ತ ದಾಪುಗಾಲು ಇಡುತ್ತಿದೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ನಿನ್ನೆಯ ಎನ್‌ಕೌಂಟರ್‌. ಇಬ್ಬರು ಮಕ್ಕಳ ಕತ್ತು ಸೀಳಿದ್ದವನನ್ನ ಕೆಲವೇ ಗಂಟೆಗಳಲ್ಲಿ ಎನ್‌ಕೌಂಟರ್ (Encounter) ಮಾಡಲಾಗಿದೆ. ಹೆಂಡತಿಗೆ ಡೆಲವರಿ ಇದೆ ಅಂತ ಸಾಲ ಕೇಳಿಕೊಂಡು ಬಂದವನು ಅಲ್ಲಿ ಎರಡು ಹೆಣಗಳನ್ನ ಹಾಕಿಬಿಟ್ಟಿದ್ದ. ಆದ್ರೆ ಅದೇಗೋ ಮತ್ತೊಂದು ಮಗು ಅವನ ಕೈಯಿಂದ ತಪ್ಪಿಸಿಕೊಂಡು ಇವತ್ತು ಜೀವಂತವಾಗಿ ಉಳಿದಿದೆ. ಸಾಜೀದ್ ಇಬ್ಬರು ಮಕ್ಕಳನ್ನ ಕೊಂದ ವಿಷಯ ತಿಳಿದ ತಾಯಿ ಭಯದಿಂದಲೇ ಮಹಡಿ ಮೇಲೆ ಬರಲು ಹೊರಡುತ್ತಾಳೆ. ಆದ್ರೆ ಅಷ್ಟರಲ್ಲೇ ಸಾಜಿದ್ ಅಲ್ಲಿಂದ ಎಸ್ಕೇಪ್ ಆಗಲು ಮುಂದಾಗ್ತಾನೆ. ಆದ್ರೆ ಅಷ್ಟರಲ್ಲೇ ಅಕ್ಕಪಕ್ಕದ ಜನರೆಲ್ಲಾ ಸೇರಿಕೊಳ್ತಾರೆ. ಸಾಜೀದ್‌ನನ್ನ ಅಟ್ಟಾಡಿಸುತ್ತಾರೆ. ಆದ್ರೆ ಆತ ಅವರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗ್ತಾನೆ. ಇನ್ನೂ ತನಿಖೆ ನಡೆಸೋ ಪೊಲೀಸರು(Police) ಕೆಲವೇ ಗಂಟೆಗಳಲ್ಲಿ ಹಂತಕನನ್ನ ಪತ್ತೆ ಹಚ್ಚುತ್ತಾರೆ.. ಆದ್ರೆ ಬಂಧಿಸಲು ಹೋದಾಗ ಸಾಜಿದ್ ರಿಟರ್ನ್ ಫೈರ್ ಮಾಡ್ತಾನೆ. ವಿಧಿ ಇಲ್ಲದೇ ಪೊಲೀಸರು ಅವನ ಕಥೆಯನ್ನೇ ಮುಗಿಸಿಬಿಡ್ತಾರೆ.

ಇದನ್ನೂ ವೀಕ್ಷಿಸಿ:  Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!