ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!

ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!

Published : Oct 12, 2023, 03:03 PM ISTUpdated : Oct 12, 2023, 03:05 PM IST

ಆಸ್ತಿ ವಿಚಾರಕ್ಕೆ ಎರಡು ಹೆಣ ಹಾಕಿಬಿಟ್ಟರು..!
2 ಹೆಣ ಹಾಕಿ ಆತ್ಮಹತ್ಯೆಯ ನಾಟಕವಾಡಿದ್ರು..!
ಪೊಲೀಸರಿಗೂ ದಿಕ್ಕು ತಪ್ಪಿಸಿದ್ರು ಹಂತಕರು..!

ಅದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಮಗ. ಮನೆಯಲ್ಲಿ ಬಡತನವಿದ್ರೂ ಸಖುಖವಾಗಿದ್ರು. ಆದ್ರೆ ಆವತ್ತೊಂದು ದಿನ ಹೆಂಡತಿ ಮಲಗಿದಲ್ಲೇ ಹೆಣವಾಗಿದ್ಲು. ಅವಳ ಪಕ್ಕದಲ್ಲೇ ಅವಳ ಅಣ್ಣ ಕೂಡ ಸತ್ತು ಬಿದ್ದಿದ್ದ. ಹೆಂಡತಿ ಸತ್ತು ಮಲಗಿದ್ದನ್ನ ನೋಡಿ ಗಂಡ ಸೂಸೈಡ್ ಅಂತ ಪೊಲೀಸರಿಗೆ(police) ದೂರು ನೀಡಿದ. ಆದ್ರೆ ಪೊಲೀಸರಿಗೆ ಅದು ಆತ್ಮಹತ್ಯೆಯಲ್ಲ ಅನ್ನೋ ಡೌಟ್ ಬಂದಿತ್ತು. ಇದೇ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ರು. ಆದ್ರೆ ಈ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು ಸತ್ತವಳ ಮಗ ಕೊಟ್ಟ ಒಂದು ಹೇಳಿಕೆ. ಕೊಲೆ(Murder) ಮಾಡೋದಕ್ಕೆ ಒಂದು ರೀಸನ್ ಬೇಕಿತ್ತು.. ಅದಕ್ಕೇ ಅನೈತಿಕ ಸಂಬಂಧದ ಕಥೆಯನ್ನ ಕಟ್ಟುತ್ತಿದ್ದಾರೆ ಅಂತ ಕಾವ್ಯ ಮತ್ತು ಕೊಟ್ರೇಶ್ ಆಪ್ತರು ಆರೋಪಿಸುತ್ತಿದ್ದಾರೆ. ಇವರ ಮಾತು ಕೂಡ ನಿಜ ಅನಿಸುತ್ತೆ. ಆದ್ರೆ ಪೊಲೀಸರು ಮೊದಲಿಗೆ ನಂದೀಶ ಹೇಳಿದ ಮಾತುಗಳನ್ನ ನಂಬಿ ಅದೇ ರೀಸನ್ ಅಂತ ಅಂದುಕೊಂಡಿದ್ರು.. ಆದ್ರೆ ಮತ್ತೆ ವಿಚಾರಣೆ ಮುಂದುವರೆಸಿದಾಗ ಡಬಲ್ ಮರ್ಡರ್(Double murder) ಹಿಂದಿನ ಅಸಲಿ ರೀಸನ್ ಬಯಲಾಗಿದೆ. ಅನೈತಿಕ ಸಂಬಂಧಕ್ಕೆ ಆದ ಕೊಲೆಗಳು ಅವು ಅಂತ ಕೇವಲ ಊರಿನವರಷ್ಟೇ ಅಲ್ಲ. ಪೊಲೀಸರೂ ಕೂಡ ಹಾಗೇ ತಿಳಿದಿದ್ರು. ಆದ್ರೆ ನಿಜ ಕಾರಣ ಬೇರೆನೇ ಇತ್ತು. ನಂದೀಶನ ತಂದೆಯ ಹೆಸರಲ್ಲಿ 38 ಎಕರೆ ಜಮೀನಿತ್ತು. ಆ ಜಮೀನಿನ ಮೇಲೆ ನಂದೀಶನ ಹೆಂಡತಿಯ ಕಣ್ಣು ಬಿದ್ದಿತ್ತು. ಹೇಗಾದ್ರೂ ಮಾಡಿ ಆ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ಎಂಬ ದುರಾಸೆ ಇತ್ತು. ಇದೇ ದುರಾಶೆಯಲ್ಲಿ ಲಾಯರ್ ಒಬ್ಬರನ್ನ ಆಕೆ ಸಂಪರ್ಕಿಸಿದ್ಲು. ಇದು ಅದೇಗೋ ಮಾವ ಜಾತಪ್ಪನಿಗೆ ಗೊತ್ತಾಗಿಬಿಡ್ತು. ಅಷ್ಟೇ ಅವಳ ಹೆಣ ಹಾಕಲು ಜಾತಪ್ಪ ನಿರ್ಧರಿಸಿಬಿಟ್ಟ. ಅಷ್ಟೇ ಅಲ್ಲ ಅವಳನ್ನ ಮುಗಿಸಿ ಮಗನಿಗೆ ಬೇರೆ ಮದುವೆ ಮಾಡುವ ಕನಸು ಕಂಡಿದ್ದ. ಆದ್ರೆ ಕೊಲೆ ಮಾಡಿ ನಟಕ ಮಾಡಿದವನಿಗೆ ಆತನ ಮೊಮ್ಮಗನೇ ಜೈಲಿಗೆ ಕಳಿಸಿದ್ದಾನೆ.ಪುಟ್ಟ ಬಾಲಕ ಡಬಲ್ ಮರ್ಡರ್ ಕಾರಣವನ್ನ ಬಿಚ್ಚಿಟ್ಟಿದ್ದ.

ಇದನ್ನೂ ವೀಕ್ಷಿಸಿ:  ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more