ಹೋಟೆಲ್‌ನಲ್ಲಿ ರೂಂ  ಮಾಡಿ ಪರಾರಿಯಾಗ್ತಿದ್ದ ಅಜ್ಜ ಧಾರವಾಡದಲ್ಲಿ ಸಿಕ್ಕಿಬಿದ್ದ!

Aug 26, 2020, 6:57 PM IST

ಧಾರವಾಡ (ಆ 26)  ಈತ ಅಂತಿಂಥ ವಂಚಕನಲ್ಲ. ಐಷಾರಾಮಿ ಹೋಟೆಲ್ ನಲ್ಲಿ ರೂಂ ಮಾಡಿಕೊಂಡು ದಿನ ಕಳೆಯುತ್ತಿದ್ದ. ಕೊನೆಗೆ  ಬಿಲ್ ಕೊಡದೆ ಕೈಗೆ ಸಿಕ್ಕಿದ್ದು ಎತ್ತಿಕೊಂಡು ಪರಾರಿಯಾಗುತ್ತಿದ್ದ.

ಮಹಿಳೆಗೆ ಜ್ಯೋತಿಷ್ಯ ಹೇಳಿ ತನ್ನ ಹಣವನ್ನೇ ಕಳಕೊಂಡ ಜ್ಯೋತಿಷಿ

ಚಾಲಾಕಿ ವೃದ್ಧ ವಂಚಕ ಧಾರವಾಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸುಮಾರು ನಾಲ್ಕು ನೂರಕ್ಕೂ ಅಧಿಕ ಹೋಟೆಲ್ ಗಳಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.