ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?

ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?

Published : Dec 05, 2023, 01:07 PM ISTUpdated : Dec 05, 2023, 01:08 PM IST

ಸಿಪಿವೈ ಬಾವನ ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?
ಕಿಡ್ನ್ಯಾಪ್ ಮಾಡಿ ಅವರ ಕಾರಿನಲ್ಲೇ ಕರೆದುಕೊಂಡು ಹೋದ್ರು..!
ಚನ್ನಪಟ್ಟದಲ್ಲಿ ಮಿಸ್ಸಿಂಗ್,ಚಾಮರಾಜನಗರದಲ್ಲಿ ಹೆಣ ಪತ್ತೆ..!

ಅವರು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ರವರ(CP Yogeshwar) ಬಾವ.. ಬೆಂಗಳೂರಿನಲ್ಲಿ(Bengaluru) ಹೆಂಡತಿ ಮಕ್ಕಳನ್ನ ಬಿಟ್ಟು ಹೆಚ್ಚು ಕಾಲ ತಮ್ಮ ಚೆನ್ನಪಟ್ಟಣದ(Chennapattana) ತೋಟದ ಮನೆಯಲ್ಲೇ ವಾಸವಾಗಿದ್ರು. ಆದ್ರೆ ಆವತ್ತು ಅದೇ ತೋಟದ ಮನೆಯಿಂದ ಅವರು ಕಿಡ್ನ್ಯಾಪ್ ಆಗಿದ್ರು.ರಾತ್ರಿ 8 ಗಂಟೆಗೆ ಮನೆಯಲ್ಲಿದ್ದವರು 11 ಗಂಟೆ ಹೊತ್ತಿಗೆ ಮಿಸ್ಸಿಂಗ್ ಆಗಿದ್ರು. ಅವರ ಕಾರ್(Car) ಕೂಡ ಇರಲಿಲ್ಲ. ಈ ಘಟನೆಯಿಂದ ಇಡೀ ಸಿಪಿ ಯೋಗೇಶ್ವರ್ ಕುಟುಂಬ ಆತಂಕಗೊಳ್ಳುತ್ತೆ. ಪೊಲೀಸ್(Police) ಕಂಪ್ಲೆಂಟ್ ಕೂಡ ದಾಖಲಾಗುತ್ತೆ.. ಆದ್ರೆ ಏನಾಯ್ತು ಅವರಿಗೆ ಅಂತ ತಲೆಕೆಡಸಿಕೊಳ್ಳುತ್ತಿದ್ದವರಿಗೆ ಸಿಪಿವೈ ಬಾವನ ಕಾರ್ ಚಾಮರಾಜನಗರದಲ್ಲಿ ಪತ್ತೆಯಾಗುತ್ತೆ. ಅದಾಗಿ ಕೆಲವೇ ಗಂಟೆಗಳಲ್ಲಿ ಅವರ ಮೃತದೇಹ ಕೂಡ ರಾಮಾಪುರ ಕಾಡಿನಲ್ಲಿ ಸಿಗುತ್ತೆ. ಹೀಗೆ ಫೋನ್ ರಿಸೀವ್ ಮಾಡಿದವನು ತಕ್ಷಣವೇ ಕಾಲ್ ಮಾಡಿದಾಗ ಮಹದೇವಯ್ಯರಿಗೇ ಏನೋ ಆಗಿದೆ ಅನ್ನೋದು ಕನ್ಫರ್ಮ್ ಆಯ್ತು. ಇನ್ನೂ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹದೇವಯ್ಯ ಮೊಬೈಲ್ ಮತ್ತು ಕಾರ್ ಚಾಮರಾಜನಗರದಲ್ಲಿದೆ ಅನ್ನೋದು ಕಾತ್ರಿಯಾಗಿ ಅಲ್ಲಿಗೆ ತೆರಳುತ್ತಾರೆ. ಪರಿಸ್ಥಿತಿ ಹೇಗಿರುವಾಗ್ಲೇ ಚಾಮರಾಜ ನಗರದಲ್ಲಿದ್ದ ಒಬ್ಬ ಯುವಕ ಪೊಲೀಸರಿಗೆ ಒಂದು ಶಾಕಿಂಗ್ ಮಾಹಿತಿ ಕೊಡ್ತಾನೆ. ಮಹದೇವಯ್ಯರ ಕಾರ್ ಲೊಕೇಷನ್ ಪೊಲೀಸರಿಗೆ ತಿಳಿಸುತ್ತಾನೆ. ಮಹದೇವಯ್ಯ ಕಿಡ್ನ್ಯಾಪ್ ಆದ ನಂತರ ಅವರ ಸುಳಿವಿಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಮೇಜರ್ ಕ್ಲೂ ಕೊಟ್ಟಿದ್ದು ಒಂದು ವಾಟ್ಸಪ್ ಗ್ರೂಪ್.ಚೆನ್ನಪಟ್ಟಣ ಬಾಯ್ಸ್ ಗ್ರೂಪ್ನಲ್ಲಿ ಚಾಮರಾಜನಗರದ ಹುಡುಗ ಮಹದೇವಯ್ಯರ ಕಾರಿನ ಲೊಕೇಷನ್ ಕಳಿಸಿದ್ದ. ನಂತರ ಪೊಲೀಸರು ಅಲ್ಲಿಗೆ ಹೋದಾಗ ಮಹದೇವಯ್ಯರ ಕಾರ್ ಪತ್ತೆಯಾಗಿತ್ತು. ಅಷ್ಟೇ ಅಲ್ಲ ಕಾರ್ನಲ್ಲಿ ರಕ್ತದ ಕಲೆ ಕೂಡ ಕಾಣಿಸಿತ್ತು. ಇದನ್ನ ನೋಡಿದ ಪೊಲೀಸರಿಗೆ ಮಹದೇವಯ್ಯ ಬದುಕಿರೋದು ಡೌಟ್ ಅಂತನ್ನಿಓಕೆ ಶುರುವಾಯ್ತು.. ತಡಮಾಡದೇ ಆ ಕಾರ್ ಓಡಾಡಿದ ಮಾರ್ಗದ ಸಿಸಿಟಿವಿ ಪರಿಶಿಲಿಸಿದ್ರು.. ಆಗ ಸಿಕ್ಕಿದ್ದೇ ರಾಮಾಪುರ ಕಾಡು ಅದೇ ಕಾಡಿನಲ್ಲಿ ಹುಡುಕಾಡಿದಾಗ ಮಹಯದೇವಯ್ಯರ ಮೃತದೇಹ ಸಿಕ್ಕಿತ್ತು.

ಇದನ್ನೂ ವೀಕ್ಷಿಸಿ:  ಸಿಬ್ಬಂದಿ ಯಡವಟ್ಟಿನಿಂದ ಮೃತಪಟ್ಟನಾ ಅರ್ಜುನ? ಕಾಡಾನೆ ಎದುರು ಬಲ ಕಳೆದುಕೊಂಡು ಬಲಿ?

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more