ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?

ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?

Published : Dec 05, 2023, 01:07 PM ISTUpdated : Dec 05, 2023, 01:08 PM IST

ಸಿಪಿವೈ ಬಾವನ ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?
ಕಿಡ್ನ್ಯಾಪ್ ಮಾಡಿ ಅವರ ಕಾರಿನಲ್ಲೇ ಕರೆದುಕೊಂಡು ಹೋದ್ರು..!
ಚನ್ನಪಟ್ಟದಲ್ಲಿ ಮಿಸ್ಸಿಂಗ್,ಚಾಮರಾಜನಗರದಲ್ಲಿ ಹೆಣ ಪತ್ತೆ..!

ಅವರು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ರವರ(CP Yogeshwar) ಬಾವ.. ಬೆಂಗಳೂರಿನಲ್ಲಿ(Bengaluru) ಹೆಂಡತಿ ಮಕ್ಕಳನ್ನ ಬಿಟ್ಟು ಹೆಚ್ಚು ಕಾಲ ತಮ್ಮ ಚೆನ್ನಪಟ್ಟಣದ(Chennapattana) ತೋಟದ ಮನೆಯಲ್ಲೇ ವಾಸವಾಗಿದ್ರು. ಆದ್ರೆ ಆವತ್ತು ಅದೇ ತೋಟದ ಮನೆಯಿಂದ ಅವರು ಕಿಡ್ನ್ಯಾಪ್ ಆಗಿದ್ರು.ರಾತ್ರಿ 8 ಗಂಟೆಗೆ ಮನೆಯಲ್ಲಿದ್ದವರು 11 ಗಂಟೆ ಹೊತ್ತಿಗೆ ಮಿಸ್ಸಿಂಗ್ ಆಗಿದ್ರು. ಅವರ ಕಾರ್(Car) ಕೂಡ ಇರಲಿಲ್ಲ. ಈ ಘಟನೆಯಿಂದ ಇಡೀ ಸಿಪಿ ಯೋಗೇಶ್ವರ್ ಕುಟುಂಬ ಆತಂಕಗೊಳ್ಳುತ್ತೆ. ಪೊಲೀಸ್(Police) ಕಂಪ್ಲೆಂಟ್ ಕೂಡ ದಾಖಲಾಗುತ್ತೆ.. ಆದ್ರೆ ಏನಾಯ್ತು ಅವರಿಗೆ ಅಂತ ತಲೆಕೆಡಸಿಕೊಳ್ಳುತ್ತಿದ್ದವರಿಗೆ ಸಿಪಿವೈ ಬಾವನ ಕಾರ್ ಚಾಮರಾಜನಗರದಲ್ಲಿ ಪತ್ತೆಯಾಗುತ್ತೆ. ಅದಾಗಿ ಕೆಲವೇ ಗಂಟೆಗಳಲ್ಲಿ ಅವರ ಮೃತದೇಹ ಕೂಡ ರಾಮಾಪುರ ಕಾಡಿನಲ್ಲಿ ಸಿಗುತ್ತೆ. ಹೀಗೆ ಫೋನ್ ರಿಸೀವ್ ಮಾಡಿದವನು ತಕ್ಷಣವೇ ಕಾಲ್ ಮಾಡಿದಾಗ ಮಹದೇವಯ್ಯರಿಗೇ ಏನೋ ಆಗಿದೆ ಅನ್ನೋದು ಕನ್ಫರ್ಮ್ ಆಯ್ತು. ಇನ್ನೂ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹದೇವಯ್ಯ ಮೊಬೈಲ್ ಮತ್ತು ಕಾರ್ ಚಾಮರಾಜನಗರದಲ್ಲಿದೆ ಅನ್ನೋದು ಕಾತ್ರಿಯಾಗಿ ಅಲ್ಲಿಗೆ ತೆರಳುತ್ತಾರೆ. ಪರಿಸ್ಥಿತಿ ಹೇಗಿರುವಾಗ್ಲೇ ಚಾಮರಾಜ ನಗರದಲ್ಲಿದ್ದ ಒಬ್ಬ ಯುವಕ ಪೊಲೀಸರಿಗೆ ಒಂದು ಶಾಕಿಂಗ್ ಮಾಹಿತಿ ಕೊಡ್ತಾನೆ. ಮಹದೇವಯ್ಯರ ಕಾರ್ ಲೊಕೇಷನ್ ಪೊಲೀಸರಿಗೆ ತಿಳಿಸುತ್ತಾನೆ. ಮಹದೇವಯ್ಯ ಕಿಡ್ನ್ಯಾಪ್ ಆದ ನಂತರ ಅವರ ಸುಳಿವಿಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಮೇಜರ್ ಕ್ಲೂ ಕೊಟ್ಟಿದ್ದು ಒಂದು ವಾಟ್ಸಪ್ ಗ್ರೂಪ್.ಚೆನ್ನಪಟ್ಟಣ ಬಾಯ್ಸ್ ಗ್ರೂಪ್ನಲ್ಲಿ ಚಾಮರಾಜನಗರದ ಹುಡುಗ ಮಹದೇವಯ್ಯರ ಕಾರಿನ ಲೊಕೇಷನ್ ಕಳಿಸಿದ್ದ. ನಂತರ ಪೊಲೀಸರು ಅಲ್ಲಿಗೆ ಹೋದಾಗ ಮಹದೇವಯ್ಯರ ಕಾರ್ ಪತ್ತೆಯಾಗಿತ್ತು. ಅಷ್ಟೇ ಅಲ್ಲ ಕಾರ್ನಲ್ಲಿ ರಕ್ತದ ಕಲೆ ಕೂಡ ಕಾಣಿಸಿತ್ತು. ಇದನ್ನ ನೋಡಿದ ಪೊಲೀಸರಿಗೆ ಮಹದೇವಯ್ಯ ಬದುಕಿರೋದು ಡೌಟ್ ಅಂತನ್ನಿಓಕೆ ಶುರುವಾಯ್ತು.. ತಡಮಾಡದೇ ಆ ಕಾರ್ ಓಡಾಡಿದ ಮಾರ್ಗದ ಸಿಸಿಟಿವಿ ಪರಿಶಿಲಿಸಿದ್ರು.. ಆಗ ಸಿಕ್ಕಿದ್ದೇ ರಾಮಾಪುರ ಕಾಡು ಅದೇ ಕಾಡಿನಲ್ಲಿ ಹುಡುಕಾಡಿದಾಗ ಮಹಯದೇವಯ್ಯರ ಮೃತದೇಹ ಸಿಕ್ಕಿತ್ತು.

ಇದನ್ನೂ ವೀಕ್ಷಿಸಿ:  ಸಿಬ್ಬಂದಿ ಯಡವಟ್ಟಿನಿಂದ ಮೃತಪಟ್ಟನಾ ಅರ್ಜುನ? ಕಾಡಾನೆ ಎದುರು ಬಲ ಕಳೆದುಕೊಂಡು ಬಲಿ?

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more