'ಮುದ್ದು ಸರೋಜಾ ವದ್ದು ಸರೋಜಾ..' ಅಂದ್ಕೊಂಡು ಹೋದ ಡಾಬಾ ಹುಡ್ಗ ನಡುರಸ್ತೆಯಲ್ಲೇ ಹೆಣವಾದ!

'ಮುದ್ದು ಸರೋಜಾ ವದ್ದು ಸರೋಜಾ..' ಅಂದ್ಕೊಂಡು ಹೋದ ಡಾಬಾ ಹುಡ್ಗ ನಡುರಸ್ತೆಯಲ್ಲೇ ಹೆಣವಾದ!

Published : Dec 09, 2022, 09:33 PM IST

ಡಾಬಾ ಮಾಲೀಕನ ಜೊತೆ ಬಟ್ಟೆ ಅಂಗಡಿಯ ಆಂಟಿಯ ಲವ್ವಿಡವ್ವಿ ಕಥೆ ಇದು. ತೆಗೆದುಕೊಂಡ ಸಾಲವನ್ನು ವಾಪಾಸ್‌ ಕೇಳಿದಾಗ ರಾಂಗ್‌ ಆಗಿದ್ದ ಆಂಟಿ, ಆತನನ್ನೇ ಸಾಯಿಸೋಕೆ ತೀರ್ಮಾನ ಮಾಡಿದ್ಲು. ಅಷ್ಟಕ್ಕೂ ಅವನನ್ನು ಎಷ್ಟು ಭೀಕರವಾಗಿ ಹತ್ಯೆ ಮಾಡಿದ್ದರೆಂದರೆ, ಮುಖದ ಮೇಲೆ 20 ಬಾರಿ ಕಲ್ಲು ಎತ್ತುಹಾಕಿದ್ದರು.
 

ಬೆಂಗಳೂರು (ಡಿ. 9): ಆತ ಡಾಬಾ ಓನರ್. ಬಾಗಲಕೋಟೆಯ ಬಾದಾಮಿಯಲ್ಲಿ ತನ್ನ ವ್ಯವಹಾರ ನೋಡಿಕೊಂಡು ಹಾಯಾಗಿದ್ದ. ಇನ್ನೂ ಜಸ್ಟ್ 21 ವರ್ಷ ಅಷ್ಟೇ. ಚಿಕ್ಕವಯಸ್ಸಿನಲ್ಲೇ ತನ್ನ ಕಾಲ ಮೇಲೆ ತಾನು ನಿಂತಿದ್ದ. ಆದರೆ, ಬಾದಾಮಿಯಲ್ಲಿ ಡಾಬಾ ನೋಡಿಕೊಂಡಿದ್ದ ಆತ ಆವತ್ತು ಇದ್ದಕ್ಕಿದಂತೆ ಮರ್ಡರ್ ಆಗಿ ಹೋಗಿದ್ದ. ಅದೂ ಕೂಡ ಬೆಂಗಳೂರಿನಲ್ಲಿ. 
ಬೆಂಗಳೂರಿಗೂ ಈ ಡಾಬಾ ಮಾಲೀಕನಿಗೂ ಲಿಂಕೇ ಇದ್ದಿರಲಿಲ್ಲ. ಆದರೂ, ಬೆಂಗಳೂರಿನ ನಟ್ಟ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದ. ಇದೇ ಕೊಲೆಯ ಬೆನ್ನುಬಿದ್ದ  ಪೊಲೀಸರಿಗೆ ಬೆಚ್ಚಿ ಬೀಳೀಸುವ ವಿಷಯಗಳು ಸಿಗುತ್ತಾ ಹೋದವು.

ಇನ್ನು ಯುವಕ 21 ವಯಸ್ಸಿಗಾಗಲೇ ಎರಡೆರಡು ಕೇಸ್‌ಗಳನ್ನ ಮಾಡಿಕೊಂಡಿದ್ದ. ಬಾದಾಮಿಯಲ್ಲಿ ಡಾಬಾ ಇಟ್ಟುಕೊಂಡಿದ್ದ ಮಂಜುನಾಥ ಅಲ್ಲೇ ಒಂದು ಕೇಸ್ನಲ್ಲಿ ಫಿಟ್ ಆದ್ರೆ ದಾವಣಗೆರೆಯಲ್ಲಿ ಒಂದು ಕೇಸ್ ಇವನ ಮೇಲೆ ಬುಕ್ ಆಗಿತ್ತು. ಆದ್ರೆ ಅಲ್ಲಿ ಹವಾ ಮೆಂಟೇನ್ ಮಾಡ್ತಿದ್ದವನು ಬೆಂಗಳೂರಿನಲ್ಲಿ ಹಂತಕರ ಕೈಗೆ ಲಾಕ್ ಆಗಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಬೇಕಿತ್ತು. 

Bengaluru: 20 ಬಾರಿ ಕಲ್ಲು ಎತ್ತಿಹಾಕಿ ಯುವಕನ ಭೀಕರ ಹತ್ಯೆ: 6 ಮಂದಿ ಬಂಧನ

ಪೊಲೀಸರಿಗೆ ಸಿಕ್ಕ ಸಿಸಿಟಿವಿ ದೃಶ್ಯಗಳು ಬೆಚ್ಚಿ ಬೀಳೀಸಿದ್ವು. ಅದೇ ದೃಶ್ಯಗಳಿಂದ ಪೊಲೀಸರಿಗೆ ಗೊತ್ತಾಗಿದ್ದು ಮಂಜುನಾಥನ ಕೊಲೆಯಲ್ಲಿ ಮೂರು ಹೆಂಗಸರು ಇದ್ದಾರೆ ಅನ್ನೋದು. ಅಷ್ಟೇ ಅಲ್ಲ ಈ ಕೊಲೆ ರಿವೇಂಜ್‌ಗಾಗಿಯೇ ನಡೆದಿರಬಹುದು ಅನ್ನೋ ತೀರ್ಮಾನಕ್ಕೆ ಪೊಲೀಸರು ಬರ್ತಾರೆ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more