ಒಟ್ಟಿಗೆ ಆಡಿ ಬೆಳೆದವರು ಹೆಣ್ಣಿಗಾಗಿ ಕಾದಾಟ: ಅವಳಿಗಾಗಿ ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ್ದ

Sep 26, 2024, 12:23 PM IST

ಬೆಂಗಳೂರು(ಸೆ.26):  ಅವರೆಲ್ಲಾ ಸ್ನೇಹಿತರು.. ಒಟ್ಟಿಗೆ ಓದಿ, ಆಡಿ ಬೆಳೆದವರು.. ಆದರೆ ಓದೆಲ್ಲಾ ಮುಗಿಸಿ ಕೆಲಸಕ್ಕೆ ಶೆರುವಾಗ್ಲೂ ಅವರೆಲ್ಲ ಒಟ್ಟಿಗೆ ಬೆಂಗಳೂರು ಸೇರಿದ್ರು.. ವೀಕೆಂಡ್​​ ಮಸ್ತಿ ನೈಟ್​​ಔಟ್​​, ಪಾರ್ಟಿ  ಎಲ್ಲವೂ ಇತ್ತು.. ಆದ್ರೆ ಆವತ್ತೊಂದು ದಿನ ಗೆಳೆಯನೊಬ್ಬನ ಪಾರ್ಟಿ ಇತ್ತು.. ಎಲ್ಲರೂ ಸಿಟಿ ರೌಂಡ್ಸ್​​ ಮಾಡಿ, ಪಾರ್ಟಿ ಮಾಡಿ ನಿದ್ದೆ ಮಾಡಿದ್ರೆ ಆದ್ರೆ ಬೆಳಗ್ಗೆ ನೋಡಿದ್ರೆ ಬರ್ತಡೇ ಮಾಡಿಕೊಂಡವನೇ ಹೆಣವಾಗಿದ್ದ.. ಅವನನ್ನ ತನ್ನ ಚಡ್ಡಿ ದೋಸ್ತೇ ಕೊಲೆ ಮಾಡಿಬಿಟ್ಟಿದ್ದ.. ಅಷ್ಟಕ್ಕೂ ಗೆಳೆಯನೇ ಅವನನ್ನ ಕೊಂದಿದ್ದೇಕೆ..? ಅಂಥಹ ತಪ್ಪು ಆತ ಮಾಡಿದ್ದಾದ್ರೂ ಏನು..? ಆವತ್ತು ಬರ್ತಡೇ ಪಾರ್ಟಿಯಲ್ಲಿ ನಡೆದಿದ್ದಾದರೂ ಏನು..? ಯುವಕನೊಬ್ಬ ತನ್ನ ಗೆಳೆಯನಿಂದಲೇ ಕೊಲೆಯಾದ ಕಥೆ ಮತ್ತು ಆ ಕೊಲೆಯ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​. 

ಯಸ್​​.. ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತನೇ ವರುಣ್​ನ ಕಥೆ ಮುಗಿಸಿದ್ದ.. ಇನ್ನೂ ಗೆಳೆಯನನ್ನೇ ಕೊಲೆ ಮಾಡಲು ಕಾರಣವಾಗಿದ್ದು ಮತ್ತೊಬ್ಬ ಸ್ನೇಹಿತೆ ಸನಾ.. ಅಷ್ಟಕ್ಕೂ ಆ ಮೂವರು ಗೆಳೆಯರ ಮಧ್ಯೆ ಏನ್ ನಡೀತು.. ದಿವೇಶಾ, ವರುಣ್​​ನನ್ನ ಕೊಂದಿದ್ದೇಕೆ..? ಆ ಕೊಲೆಗೆ ಸನಾ ಹೇಗೆ ಕಾರಣಳಾದಳು..? ಆವತ್ತು ಆ ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು..? 

ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

ಇದೊಂಥರ ವಿಚಿತ್ರವಾದ ಪ್ರೇಮ್ ಕಹಾನಿ..ಮೂವರು ಒಟ್ಟಿಗೆ ಆಡಿ ಬೆಳೆದರೂ ವರುಣ್​​ ಮತ್ತು ಸನಾ ನಡುವೆ ಪ್ರೇಮ ಹುಟ್ಟಿತ್ತು.. ಮತ್ತೊಬ್ಬ ಗೆಳೆಯ ದಿವೇಶನಿಗೂ ತನ್ನ ಗೆಳತಿ ಸನಾ ಮೇಲೆ ಲವ್​​. ಆದ್ರೆ ಈತನದ್ದು ಒನ್​ ಸೈಡಡ್​​.. ಅದ್ರೆ ವರುಣ್​ ಮತ್ತು ಸನಾಳದ್ದು ಟೂ ವೇ.. ಇಬ್ಬರೂ ಲವ್​ನಲ್ಲಿ ಬಿದ್ದಿರೋದು ದಿವೇಶನಿಗೆ ಗೊತ್ತಿದ್ರೂ ಸನಾಳನ್ನ ಪ್ರೀತಿಸೋಕೆ ಶುರು ಮಾಡಿದ.. ಇದೇ ವಿಚಾರವಾಗಿ ವರುಣ್​ ಮತ್ತು ದಿವೇಶ್​ ಆಗ್ಗಾಗ ಕಿತ್ತಾಡಿಕೊಳ್ತಿದ್ರು.. ಆದ್ರೆ ಅದು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ.. ಆದ್ರೆ ಆವತ್ತು ವರುಣನ ಬರ್ತಡೇ ಇತ್ತು.. ಸನಾ ಮತ್ತು ದಿವೇಶ್​ ಇಬ್ಬರೂ ಸೇರಿ ಸ್ನೇಹಿತನ ಬರ್ತಡೇ ಆಚರಿಸಿದ್ರು.. ನಂತರ ಮೂವರು ಬೆಂಗಳೂರು ಸುತ್ತಿದ್ರೆ ಬಳಿಕ ಮನೆಗೆ ಬಂದು ಮಲಗಿದ್ರು.. ಆದ್ರೆ ಬೆಳಗ್ಗೆ ಏಳುತ್ತಿದ್ದಂತೆ ಮತ್ತೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಇದೇ ಜಗಳ ವರುಣನ ಹೆಣ ಬೀಳಿಸುವಂತೆ ಮಾಡಿದೆ.

ಸ್ನೇಹಿತನ ಕೊಂದು ದಿವೇಶ್ ಜೈಲು ಪಾಲಾದ್ರೆ..ಪ್ರೀತಿಸಿದ ಯುವಕ ಸ್ನೇಹಿತನಿಂದಲೇ ಕೊಲೆಯಾದ.. ಇನ್ನೂ ಮತ್ತೊಬ್ಬ ಗೆಳತಿ ಗೆಳೆಯರ ಕೃತ್ಯದಿಂದ ನೊಂದು ಹೋಗಿದ್ದಾಳೆ.