ಅಪ್ಪು ಭಾವಚಿತ್ರಕ್ಕೆ 'ಚಿನ್ನದ ಪದಕ' ಅರ್ಪಿಸಿದ ಪತ್ನಿ ಅಶ್ವಿನಿ, ಪುತ್ರಿ ವಂದಿತಾ

Nov 1, 2022, 9:24 PM IST

ಬೆಂಗಳೂರು: ನಟ ಪುನೀತ್ ರಾಜ್‌ ಕುಮಾರ್ ಪರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ವಿಧಾನಸೌಧದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಲೋಕದ ಗಣ್ಯರ ಸಮ್ಮುಖದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಅಶ್ವಿನಿ ಅವರು ಪ್ರಶಸ್ತಿ ಸ್ವೀಕರಿಸಿದರು.  ಪ್ರಶಸ್ತಿ ಸ್ವೀಕರಿಸಿದ ಬಳಿಕ ಮನೆಗೆ ಆಗಮಿಸಿದ ಅಶ್ವಿನಿ ಹಾಗೂ ಪುತ್ರಿ ವಂದಿತಾ ಅವರು ಪುನೀತ್ ಫೋಟೋಗೆ ಪೂಜೆ ಮಾಡಿ ಚಿನ್ನದ ಪದಕವನ್ನು ಫೋಟೋಗೆ ಅರ್ಪಿಸಿದರು.