ಸಲಾರ್‌ನಲ್ಲಿ ಯಶ್ ಹೆಸರು ಬಂದಿದ್ದೇಕೆ?: ರಾಕಿ ಭಾಯ್‌ಗೂ ಪ್ರಭಾಸ್‌ಗೂ ಇರೋ ಲಿಂಕ್ ಏನು?

ಸಲಾರ್‌ನಲ್ಲಿ ಯಶ್ ಹೆಸರು ಬಂದಿದ್ದೇಕೆ?: ರಾಕಿ ಭಾಯ್‌ಗೂ ಪ್ರಭಾಸ್‌ಗೂ ಇರೋ ಲಿಂಕ್ ಏನು?

Published : Dec 23, 2023, 12:34 PM IST

ಸಲಾರ್ ಇದು ಪ್ರಭಾಸ್ ಸಿನಿಮಾ ನಿಜಾ.. ಆದ್ರೆ ಕೆಜಿಎಫ್ ಕೋಟೆ ಕಟ್ಟಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗು ಪ್ರೊಡ್ಯೂಸರ್ ಹೊಂಬಾಳೆ ಫಿಲಮ್ಸ್ನ ವಿಜಯ್ ಕಿರಗಂದೂರು ಸಾರಥ್ಯದಲ್ಲಿ ಬಂದ ಸಿನಿಮಾ. ಹಾಗಿದ್ಮೇಲೆ ಅಲ್ಲಿ ಕೆಜಿಎಫ್ ಕಿಂಗ್ ರಾಕಿಂಗ್ ಯಶ್ ಇರಲೇ ಬೇಕಲ್ವಾ. 

ಸಲಾರ್ ಇದು ಪ್ರಭಾಸ್ ಸಿನಿಮಾ ನಿಜಾ.. ಆದ್ರೆ ಕೆಜಿಎಫ್ ಕೋಟೆ ಕಟ್ಟಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗು ಪ್ರೊಡ್ಯೂಸರ್ ಹೊಂಬಾಳೆ ಫಿಲಮ್ಸ್ನ ವಿಜಯ್ ಕಿರಗಂದೂರು ಸಾರಥ್ಯದಲ್ಲಿ ಬಂದ ಸಿನಿಮಾ. ಹಾಗಿದ್ಮೇಲೆ ಅಲ್ಲಿ ಕೆಜಿಎಫ್ ಕಿಂಗ್ ರಾಕಿಂಗ್ ಯಶ್ ಇರಲೇ ಬೇಕಲ್ವಾ. ಇಷ್ಟು ದಿನ ಆಗಿದ್ದು ಅದೇ ಚರ್ಚೆ. ಸಲಾರ್ನಲ್ಲಿ ರಾಕಿ ರಂಗಿದೆ ಅಂತ ಸಿಕ್ಕಾಪಟ್ಟೆ ಟಾಕ್ ಆಗಿತ್ತು. ಯಶ್ ಇನ್ ಸಲಾರ್.. ಈ ಸುದ್ದಿ ಕಳೆದ ಎರಡು ವರ್ಷದಿಂದಲೂ ಇದೆ. ರಾಕಿ ಸಲಾರ್ ಮಹೂರ್ಥಕ್ಕೆ ಹೋಗಿದ್ದೇ ಹೋಗಿದ್ದು. ಯಶ್ ಸಲಾರ್ ಪಾರ್ಟ್ ಆಗ್ತಾರೆ. ಗೆಸ್ಟ್ ರೋಲ್ನಲ್ಲಿ ಮಿಂಚ್ತಾರೆ ಅಂತೆಲ್ಲಾ ಕಥೆ ಕಾದಂಬರಿ ಹುಟ್ಟಿದ್ವು. ಈ ಬಗ್ಗೆ ಸಲಾರ್ ಟೀಂ ಕೂಡ ತುಟಿ ಬಿಚ್ಚದೇ ಏನೆಲ್ಲಾ ಸುದ್ದಿ ಆಗುತ್ತೋ ಎಲ್ಲವೂ ಆಗ್ಲಿ ಅಂತ ಸುಮ್ಮನಾಗಿತ್ತು. ಈಗ ಸಲಾರ್ ರಿಲೀಸ್ ಆಗಿದೆ. ಸಲಾರ್ ನೋಡಿದವರು ಯಶ್ ಬರುತ್ತಿದ್ದಂತೆ ಶಿಳ್ಳೆ ಚಪ್ಪಾಳೆ ಹೊಡೆಯುತ್ತಿದ್ದಾರೆ. 

ಹಾಗಾದ್ರೆ ಸಲಾರ್ನಲ್ಲಿ ಯಶ್ ಇದ್ದಾರಾ ಅದಕ್ಕೆ ಉತ್ತರ ಎಸ್ ಅಂತ ಹೇಳ್ಬಹುದು. ಸಲಾರ್ನಲ್ಲಿ ಯಶ್ ಇದ್ದಾರೆ. ಆದ್ರೆ ಯಶ್ ಯಾವ್ ಫ್ರೇಮ್ನಲ್ಲೂ ಕಾಣಿಸಲ್ಲ. ಹಾಗಾದ್ರೆ ಮತ್ತಿನ್ನೇಗೆ ಯಶ್ ಬಂದು ಹೋಗ್ತಾರೆ. ಅದಕ್ಕೆ ಉತ್ತರ ಸಲಾರ್ ನೋಡಿದ್ರೆ ಗೊತ್ತಾಗುತ್ತೆ. ರಾಕಿ ಸಲಾರ್ ಫಾರ್ಟ್ ಆಗಿರೋದು ನಿಜ. ಯಶ್ ಇಲ್ಲಿ ನಟಿಸಿಲ್ಲ. ಯಶ್ ಹೆಸರು ಸಲಾರ್ ಟೈಟಲ್ ಕಾರ್ಡ್ನಲ್ಲಿ ಬಂದು ಹೋಗುತ್ತೆ. ರಾಕಿಂಗ್ ಸ್ಟಾರ್ ಯಶ್ಗೆ ಸ್ಪೆಷಲ್ ಥ್ಯಾಕ್ಸ್ ಅಂತ ಸಲಾರ್ ಟೀಂ ಹೇಳಿದೆ. ಯಶ್ ಸಲಾರ್ ಪಾರ್ಟ್ ಒಂದರಲ್ಲಿ ನಟಿಸಿಲ್ಲ. ಆದ್ರೆ ಯಶ್ಗ್ಯಾಕೆ ಸಲಾರ್ನಲ್ಲಿ ವಿಶೇಷ ಧನ್ಯವಾದ ಹೇಳಿದ್ದಾರೆ.? ಇದಕ್ಕೆ ಉತ್ತರ ಸಲಾರ್ ಪಾರ್ಟ್2ನಲ್ಲಿ ಸಿಗುತ್ತೆ ಅಂತ ಟಾಕ್ ಇದೆ. ಹಾಗಾದ್ರೆ ಯಶ್ ಸಲಾರ್ ಪಾರ್ಟ್2ಗೆ ಎಂಟ್ರಿ ಕೊಡ್ತಾರಾ. ಅದಕ್ಕೂ ಪ್ರಶಾಂತ್ ನೀಲ್ ಉತ್ತರ ಕೊಟ್ಟಿಲ್ಲ. ಅಂತಹ ಯಾವ್ದೇ ಚಾಯೆಯೂ ಸಲಾರ್ನಲ್ಲಿಲ್ಲ. ಆದ್ರೆ ಯಶ್ ಹೆಸರು ಮಾತ್ರ ಬಂದು ಹೋಗುತ್ತೆ. ಈ ಮೂಲಕ ಯಶ್ ಹೆಸರು ಸಲಾರ್ ನಲ್ಲೂ ಇದ್ದಾರೆ ಅಂತ ಹೇಳ್ಬಹುದೇನೋ.

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more