ಪಹಲ್ಗಾಮ್-ಕನ್ನಡ ಹೋಲಿಕೆ: ಕೋರ್ಟ್‌ಗೂ ಕಿಮ್ಮತ್ತು ಕೊಡದ ಗಾಯಕ ಸೋನು ನಿಗಮ್!

ಪಹಲ್ಗಾಮ್-ಕನ್ನಡ ಹೋಲಿಕೆ: ಕೋರ್ಟ್‌ಗೂ ಕಿಮ್ಮತ್ತು ಕೊಡದ ಗಾಯಕ ಸೋನು ನಿಗಮ್!

Published : Jun 18, 2025, 01:39 PM ISTUpdated : Jun 18, 2025, 03:46 PM IST

ಕನ್ನಡ ಹಾಡು ಕೇಳಿದ್ದಕ್ಕೆ ಭಯೋತ್ಪಾದಕರ ಜೊತೆಗೆ ಹೋಲಿಕೆ ಮಾಡಿ ಕನ್ನಡಿಗರನ್ನ ಕೆರಳಿಸಿದ್ದ ಸೋನು ನಿಗಮ್ ಮೇಲೆ ದೂರು ದಾಖಲಾಗಿತ್ತು. ಸೋನು ಪೊಲೀಸರ ಕೈಗೆ ಸಿಕ್ತಾ ಇಲ್ಲ. ಸೋ ಸೋನುಗೆ ಪಾಠ ಕಲಿಸೋದಕ್ಕೆ ಕೋರ್ಟ್ ಮೆಟ್ಟಿಲೇರೋದಕ್ಕೆ ಪೊಲೀಸರು ಮುಂದಾಗಿದ್ದಾರೆ.

ಗಾಯಕ ಸೋನು ನಿಗಮ್ ಮೇಲೆ ದೂರು ದಾಖಲಾಗಿ ಒಂದೂವರೇ ತಿಂಗಳಾಯ್ತು. ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಅಂತ ಕೇಳಿದ್ದಕ್ಕೆ ಪೆಹಲ್ಗಾಮ್ ದಾಳಿಯ ಜೊತೆಗೆ ಸೋನು ಹೋಲಿಕೆ ಮಾಡಿದ್ರು. ಇದು ಕನ್ನಡಿಗರನ್ನೆಲ್ಲಾ ಕೆರಳಿಕೆಂಡವಾಗುವಂತೆ ಮಾಡಿತ್ತು. ಸೋನು ನಿಗಮ್ ವಿರುದ್ದ ಪ್ರತಿಭಟನೆ ನಡೆದಿದ್ವು. ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ಈ ಬಗ್ಗೆ ಕಂಪ್ಲೆಂಟ್ ಕೂಡ ದಾಖಲಾಗಿತ್ತು. ಇಷ್ಟೆಲ್ಲಾ ಆದ್ರೂ ತನ್ನ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದ ಸೋನು , ಹೈಕೋರ್ಟ್​ ಮೆಟ್ಟಿಲೇರಿ ತನ್ನ ವಿರುದ್ದ ಹಾಕಿರೋ ಎಫ್​​ಐಆರ್ ರದ್ದು ಮಾಡುವಂತೆ ಕೇಳಿಕೊಂಡಿದ್ರು. ಸೋನು ನಿಗಮ್ ವಿರುದ್ದ ಬಲವಂತದ ಕ್ರಮ ಬೇಡ.  ಆದರೆ ಸೋನು ನಿಗಂ ಪೊಲೀಸರ ಮುಂದೆ ನೇರವಾಗಿ ಅಥವಾ ಆನ್​ಲೈನ್ ಮೂಲಕ ಹೇಳಿಕೆ ದಾಖಲಿಸುವಂತೆ ಕೋರ್ಟ್ ಸೂಚಿಸಿತ್ತು. ಸೋನು ಹೇಳಿಕೆ ಪಡೆಯೋದಕ್ಕೆ ಪೊಲೀಸರು ಪ್ರಯತ್ನ ಪಟ್ರೆ ಸೋನು ಸಂಪರ್ಕಕ್ಕೆ ಸಿಕಿಲ್ಲ. ಸೋನು ಮ್ಯಾನೇಜರ್ ಅವರು ಬ್ಯುಸಿ ಇದ್ದಾರೆ ಮುಂದೆ ತಿಳಿಸ್ತಿನಿ ಅಂತ ಹೇಳ್ತಾ ಇದ್ದಾರೆ. ಹೀಗೆ ಮುಂದುವರೆದರೆ ಹೈಕೋರ್ಟ್ ಗಮನಕ್ಕೆ ತರ್ತೀವಿ ಅಂತ ಪೊಲೀಸರು ಎಚ್ಚರಿಸಿದರೂ ಸೋನು ಕ್ಯಾರೇ ಅಂದಿಲ್ಲ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more