ರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್’!

ರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್’!

Published : Feb 01, 2024, 09:10 AM IST

ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಟಾಪನೆ ನಂತರ ಸದ್ಯ ಸಿನಿದುನಿಯಾದಲ್ಲೂ ರಾಮನದ್ದೆ ಧ್ಯಾನ. ರಾಮ ಭಕ್ತ ಹನುಮಾನ್ ಸಿನಿಮಾ ಮಾಡಿದ್ರೂ ಜನ ಭಕ್ತಯಿಂದ ನೋಡಿ ಚಿತ್ರವನ್ನು ಗೆಲ್ಲಿಸಿದ್ರು. ಇದೀಗ ಈ ಸಿನಿಮಾದ ಸೀಕ್ವೆಲ್ ಜೈ ಹನುಮಾನ್ ಎನ್ನುವ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ ಟಾಲಿವುಡ್ ಸೂಪರ್‌ಗಳು.

ಬಿಗ್ ಬಜೆಟ್ ಚಿತ್ರ ಜೈ ಹನುಮಾನ್(Jai Hanuman movie) ರಾಮನಾಗಿ ಮಹೇಶ್‌ ಬಾಬು(Mahesh Babu), ಹನುಮಂತನಾಗಿ ಚಿರಂಜೀವಿ(Chiranjeevi) ನಟಿಸಲಿದ್ದಾರೆಂಬ ಸುದ್ದಿ ಇದೀಗ ಬಿಗ್ ಟಾಪಿಕ್ ಆಗಿದೆ.‘ಹನುಮಾನ್’ ಸಿನಿಮಾದಲ್ಲಿ ಇರುವುದು ಒಂದು ಸೂಪರ್ ಹೀರೋ ಕಥೆ. ಆಂಜನೇಯನ ಕೃಪೆಯಿಂದ ಸೂಪರ್ ಪವರ್ ಪಡೆಯುವ ಹಳ್ಳಿ ಹುಡುಗನ ಕಹಾನಿ ಈ ಸಿನಿಮಾದಲ್ಲಿ ಇದೆ. ಅದೇ ಕಥೆ ‘ಜೈ ಹನುಮಾನ್’ ಸಿನಿಮಾದಲ್ಲಿ ಮುಂದುವರಿಯಲಿದೆ. ಅದರಲ್ಲಿ ಶ್ರೀರಾಮ(Sri Rama) ಮತ್ತು ಆಂಜನೇಯನ ಪಾತ್ರಗಳು ಬರಲಿವೆ. ಆ ಪಾತ್ರಗಳನ್ನು ಯಾರು ಮಾಡಬೇಕು ಎಂಬುದರ ಬಗ್ಗೆ  ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಮಾತನಾಡಿದ್ದು ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪಾತ್ರವನ್ನೂ ರಾಮನಾಗಿ ಮಹೇಶ್ ಬಾಬು ನಟಿಸಿದರೆ ಅದ್ಭುತವಾಗಿರುತ್ತದೆ ಎಂದು ಆಸೆಪಟ್ಟಿದ್ದಾರೆ. ಇದಕ್ಕೆ ಚಿರು ಪ್ರಿನ್ ಒಪ್ಪುತ್ತಾರಾ ನೋಡಬೇಕು.

‘ಹನುಮಾನ್’ ಸಿನಿಮಾದಲ್ಲಿ ಸೂಪರ್ ಹೀರೋ ಪಾತ್ರ ಮಾಡಿದ ತೇಜ ಸಜ್ಜಾ ಅವರು ‘ಜೈ ಹನುಮಾನ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಕೇವಲ 20 30 ಕೋಟಿಯಲ್ಲಿ ರೆಡಿಯಾದ ಹನುಮಾನ್ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಇದೀ ಅದರ ಸೀಕ್ವೆಲ್ ಅತಿ ಹೆಚ್ಚು ಬಂಡವಾಳ ಹಾಕಿಯೇ ಸಿನಿಮಾ ಮಾಡೋ ಪ್ಲ್ಯಾನ್ ಚಿತ್ರತಂಡದ್ದು.ಇನ್ನು ಅದರ ಸೀಕ್ವೆಲ್ ಆಗಿರೋ ಜೈ ಹನುಮಾನ್ ಚಿತ್ರದಲ್ಲಿ ರಾಮ ಆಂಜನೇಯನ ಪಾತ್ರಗಳು ಪ್ರಮುಖವಾಗಿದ್ದುಇದಕ್ಕೆ ಸೂಪರ್ ಸ್ಟಾರ್ಗಳಿಬ್ಬರೂ ಗ್ರೀನ್ ಸಿಗ್ನಲ್ ಕೊಡ್ತಾರಾ? ಕಾದು ನೋಡಬೇಕಿದೆ. ಯಾಕಂದ್ರೆ ಮಹೇಶ್ ಬಾಬು ರಾಜ ಮೌಳಿ ಚಿತ್ರದಲ್ಲಿ ಬಿಜಿ, ಚಿರು ಅನೌನ್ಸ್ ಆಘಿರೋ 3 ಸಿನಿಮಾಗಳಲ್ಲಿ ಬಿಜಿ. ಈ ನಡುವೆ ಜೈ ಹನುಮಾನ್ಗೆ ಡೇಟ್ ಕೊಡ್ತಾರಾ..? ಕಾದು ನೋಡಬೇಕು.

ಇದನ್ನೂ ವೀಕ್ಷಿಸಿ:  ನಟ ಸುದೀಪ್‌ಗೆ ಐರೆನ್ ಲೆಗ್ ಎಂದಿದ್ದ ಚಿತ್ರರಂಗ..! ಸೋತು ಗೆದ್ದು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟ ಕಿಚ್ಚ.!

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
Read more