ಕಣ್ಣಪ್ಪ ಸಿನಿಮಾಗೆ ಪ್ರೇಕ್ಷಕರಿಂದ ಮಸ್ತ್ ರೆಸ್ಪಾನ್ಸ್: ಪ್ರಭಾಸ್ ಎಂಟ್ರಿಗೆ ಫಿದಾ ಆದ ಫ್ಯಾನ್ಸ್!

ಕಣ್ಣಪ್ಪ ಸಿನಿಮಾಗೆ ಪ್ರೇಕ್ಷಕರಿಂದ ಮಸ್ತ್ ರೆಸ್ಪಾನ್ಸ್: ಪ್ರಭಾಸ್ ಎಂಟ್ರಿಗೆ ಫಿದಾ ಆದ ಫ್ಯಾನ್ಸ್!

Published : Jun 28, 2025, 04:25 PM IST

ವಿಷ್ಣು ಮಂಚು ಕಣ್ಣಪ್ಪನಾಗಿ ಮಿಂಚಿರೋ ಕಣ್ಣಪ್ಪ ಸಿನಿಮಾದಲ್ಲಿ ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್ ಸೇರಿದಂತೆ ದೊಡ್ಡ ತಾರಾಬಳಗ ಇದೆ.

ಕಣ್ಣಪ್ಪ.. ಈ ಮಲ್ಟಿಸ್ಟಾರರ್ ಮೈಥಾಲಾಜಿಕಲ್ ಸಿನಿಮಾ ಇವತ್ತು ಪ್ಯಾನ್ ಇಂಡಿಯಾ ತೆರೆಗೆ ಬಂದಿದೆ. ವಿಷ್ಣು ಮಂಚು ಕಣ್ಣಪ್ಪನಾಗಿ ಮಿಂಚಿರೋ ಈ ಸಿನಿಮಾದಲ್ಲಿ ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಆಂಧ್ರ, ತೆಲಂಗಾಣ ಸೇರಿದಂತೆ ಚಿತ್ರಕ್ಕೆ ಎಲ್ಲೆಡೆ ಒಳ್ಳೆ ಓಪನಿಂಗ್ ಸಿಕ್ಕಿದ್ದು, ಚಿತ್ರ ನೋಡಿದ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣ್ಣಪ್ಪನಾಗಿ ವಿಷ್ಣು ಆಕ್ಟಿಂಗ್, ರುದ್ರನಾಗಿ ಫ್ರಬಾಸ್ ಎಂಟ್ರಿ ಸಿನಿಮಾದ ಹೈಲೈಟ್ ಅಂತಿದ್ದಾರೆ.

ರಜನಿಕಾಂತ್ ಭೇಟಿ ಮಾಡಿದ ಡಾ.ರಾಜ್ ಮೊಮ್ಮಗಳು: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್-2 ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೀತಾ ಇರೋ ವಿಷ್ಯ ಗೊತ್ತೇ ಇದೆ. ಸದ್ಯ ಮೈಸೂರಿನಲ್ಲಿ ಬೀಡು ಬಿಟ್ಟಿರೋ ರಜನಿಕಾಂತ್​ರನ್ನ ಡಾ.ರಾಜ್ ಮೊಮ್ಮಗಳಾದ ನಟಿ ಧನ್ಯಾ ರಾಮ್​ಕುಮಾರ್ ಭೇಟಿ ಮಾಡಿದ್ದಾರೆ. ತಾಯಿ ಪೂರ್ಣಿಮಾ ಅವರ ಜೊತೆಗೆ ಜೈಲರ್-2 ಸೆಟ್​ಗೆ ವಿಸಿಟ್ ಕೊಟ್ಟಿರೋ ಧನ್ಯಾ ತಲೈವಾ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಧನ್ಯರಾಗಿದ್ದಾರೆ.

ಗೆಲುವಿನ ಖುಷಿಯಲ್ಲಿ ಯುವನಟ ಭರತ್ ಸಾಗರ್: ಯುವನಟ ಭರತ್ ಸಾಗರ್ ತಮ್ಮ ಸಿನಿಮಾಗೆ ಸಿಕ್ತಾ ಇರೋ ರೆಸ್ಪಾನ್ಸ್​ನಿಂದ ಖುಷಿಯಲ್ಲಿದ್ದಾರೆ. ರಂಗಭೂಮಿ ಪ್ರತಿಭೆಯಾದ ಭರತ್ ಸಾಗರ್ ಈ ಹಿಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲ, ಮಾಯಾನಗರಿ ಚಿತ್ರಗಳಲ್ಲಿ ಗಮನ ಸೆಳೆಯೋ ಪಾತ್ರಗಳಲ್ಲಿ ಮಿಂಚಿದ್ರು. ಇದೀಗ ನಾಯಕನಟನಾಗಿ ಅಭಿನಯಿಸಿರೋ ಕಾಲವೇ ಮೋಸಗಾರ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಾ ಇದ್ದು, ಮತ್ತಷ್ಟು ಪ್ರೇಕ್ಷಕರನ್ನ ಸೆಳೆಯೋ ನಿಟ್ಟಿನಲ್ಲಿ ವಿಧ್ಯಾರ್ಥಿಗಳನ್ನ ಭೇಟಿ ಮಾಡ್ತಾ ಸಿನಿಮಾಗೆ ಪ್ರಚಾರ ಮಾಡ್ತಾ ಇದ್ದಾರೆ. ಭರತ್ ಸಾಗರ್ ಮೊದಲ ಬಾರಿ ಹೀರೋ ಆಗಿ ನಟಿಸಿರೋ ಈ ಚಿತ್ರಕ್ಕೆ ಸಂಜಯ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ.

ಶಿವಣ್ಣನ ಮನೆ ಗೇಟ್ ಕಾದಿದ್ದೇಕೆ ಮನು ಫ್ಯಾಮಿಲಿ?: ಇತ್ತೀಚಿಗೆ ಮಡೆನೂರು ಮನು ತಮ್ಮ ತಾಯಿ, ಪತ್ನಿ, ಮಗು ಸಮೇತ ಶಿವಣ್ಣನ ಮನೆ ಗೇಟ್ ಬಳಿ ಕಾಯ್ತಿರೋ ವಿಡಿಯೋ ವೈರಲ್ ಆಗಿತ್ತು. ಈಗ ಇದರ ಬಗ್ಗೆ ಮತ್ತೊಂದು ವಿಡಿಯೋ ಮಾಡಿ ಮನು ಸ್ಪಷ್ಟನೆ ಕೊಟ್ಟಿದ್ದಾನೆ. ಶಿವಣ್ಣ ವಿದೇಶದಕ್ಕೆ ಹೋಗಿದ್ದು ಗೊತ್ತಿಲ್ಲದೇ ಅವರ ಮನೆಗೆ ಹೋಗಿದ್ದೆ, ಅದಕ್ಕೆ ಹಾಗೆ ಕಾಯಬೇಕಾಯ್ತು ಅಂದಿದ್ದಾನೆ. ಶಿವಣ್ಣ ಮನೆಯಲ್ಲಿ ಇದ್ರೆ ಇವನನ್ನ ಕರೆಸಿ ಸನ್ಮಾನ ಮಾಡ್ತಾ ಇದ್ರಾ ಅಂತ  ಫ್ಯಾನ್ಸ್ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ.  ಸುದ್ದಿಯಲ್ಲಿರೋದಕ್ಕೆ ಎಂತೆಂಥಾ ಗಿಮಿಕ್ ಮಾಡ್ತಿಯಾ ಅಂತ ರಾಂಗ್ ಆಗಿದ್ದಾರೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more