ರೋಡ್‌ಗಿಳಿದರೆ ರೂಲ್ಸ್ ಬ್ರೇಕ್ ಮಾಡುವ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು

ರೋಡ್‌ಗಿಳಿದರೆ ರೂಲ್ಸ್ ಬ್ರೇಕ್ ಮಾಡುವ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು

Published : Apr 18, 2022, 01:58 PM IST

ಹೈದರಾಬಾದ್ (Hyderabad) ಟ್ರಾಫಿಕ್ ಪೊಲೀಸರ (Traffic Police) ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು. ಯಾಕಂದ್ರೆ ಹೈದರಾಬಾದ್ನಲ್ಲಿ ಯಾವ ಸ್ಟಾರ್‌ಗಿರಿಯೂ ನಡೆಯಲು ಬಿಡುತ್ತಿಲ್ಲ. ಯಾವ ಸ್ಟಾರೇ ಆಗಿರಲಿ, ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡಿದ್ರೆ ಮುಗೀತು. ದಂಡ ಕಟ್ಟದೇ ಮುಂದೆ ಹೋಗೋ ಹಾಗಿಲ್ಲ. 

ಹೈದರಾಬಾದ್ (Hyderabad) ಟ್ರಾಫಿಕ್ ಪೊಲೀಸರ (Traffic Police) ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು. ಯಾಕಂದ್ರೆ ಹೈದರಾಬಾದ್ನಲ್ಲಿ ಯಾವ ಸ್ಟಾರ್‌ಗಿರಿಯೂ ನಡೆಯಲು ಬಿಡುತ್ತಿಲ್ಲ. ಯಾವ ಸ್ಟಾರೇ ಆಗಿರಲಿ, ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡಿದ್ರೆ ಮುಗೀತು. ದಂಡ ಕಟ್ಟದೇ ಮುಂದೆ ಹೋಗೋ ಹಾಗಿಲ್ಲ. ನಾವು ಸ್ಟಾರ್ಸ್, ಕಾರಿನೊಳಗೆ ನಾವಿದ್ದೇವೆ ಅಂತ ಗೊತ್ತಾಗಬಾರದು ಅಂತ ಕಾರಿನ ಗಾಜಿಗೆ ಟಿಂಟೆಡ್ ಹಾಕಿಕೊಂಡು ಹೈದರಾಬಾದ್ದ ರಸ್ತೆಗಿಳಿದ್ರೆ, ಹುಶಾರ್ ಫೈನ್ ಕಟ್ಟಲೇಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಹಾಗೆ ಹೈದರಾಬಾದ್ನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಫೈನ್ ಕಟ್ಟಿದ ಬಿಗ್ ಸ್ಟಾರ್ಗಳ ಲೀಸ್ಟ್ ದೊಡ್ಡದೇ ಇದೆ.

ನಾವು ಸ್ಟಾರ್ಸ್ ಅಂತ ಬೀಗುತ್ತಾ ತಮ್ಮ ಕಾರಿಗೆ ಟೆಂಟೆಡ್ ಗ್ಲಾಸ್ ಹಾಕಿಕೊಂಡು ತಿರುಗಾಡೋ ಟಾಲಿವುಡ್ ಸ್ಟಾರ್ಸ್ ವಿರುದ್ಧ ಹೈದರಾಬಾದ್ ಟ್ರಾಫಿಕ್ ಪಡೆ ಸಮರಕ್ಕಿಳಿದೆ. ಟಾಲಿವುಡ್ (Tollywood) ಟಾಪ್ ಸ್ಟಾರ್‌ಗಳಾದ ಜ್ಯೂನಿಯರ್ ಎನ್‌ಟಿಆರ್ (Jr NTR) ಹಾಗೂ ಅಲ್ಲು ಅರ್ಜುನ್ (Allu Arjun) ತಮ್ಮ ಕಾರಿಗೆ ಟಿಂಟಡ್ ಗ್ಲಾಸ್ (Tinted Glass) ಹಾಕಿಸಿಕೊಂಡು ತಿರುಗುತ್ತಿದ್ರು. ಟಿಂಟೆಡ್ ಗ್ಲಾಸ್ ಬಳಸಬಾರದು ಅಂತ ಟ್ರಾಫಿಕ್ ನಿಯಮ (Traffic Rules) ಇದೆ. ಹೀಗಾಗಿ ಹೈದರಾಬಾದ್ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದ ಅಲ್ಲು ಅರ್ಜುನ್ ಹಾಗು ಜ್ಯೂ. ಎನ್‌ಟಿಆರ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 700 ರೂ.ದಂಡ ಕಟ್ಟಿ ತಮ್ಮ ಕಾರನ್ನ ಬಿಡಿಸಿಕೊಂಡಿದ್ದಾರೆ. 

 ಅಕ್ಕಿನೇನಿ ಕುಟುಂಬದ ಕುಡಿ ಅಕ್ಕಿನೇನಿ ನಾಗ ಚೈತನ್ಯ ಕಾರನ್ನು ಹೈದರಾಬಾದ್ ಟ್ರಾಫಿಕ್ ಪೊಲೀಸರು ತಡೆದಿದ್ದಾರೆ. ಅವರ ಕಾರಿಗೆ ಟಿಂಟೆಡ್ ಗ್ಲಾಸ್‌ ಹಾಕಿರುವ ಕಾರಣ ಪೊಲೀಸರು ತಡೆದು ನಟನಿಗೆ 700 ರೂ. ದಂಡ ಹಾಕಿದ್ದಾರೆ. ನಂತರ ನಾಗಚೈತನ್ಯರ ಕಾರಿನ ಕಿಟಕಿಗಳ ಟಿಂಟೆಡ್ ಗ್ಲಾಸ್ ಅನ್ನು ತೆಗೆದು 700 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದಾರೆ.  ಅಷ್ಟೆ ಅಲ್ಲ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕೂಡ ಇದೇ ತರ ಸಿಕ್ಕಿಬಿದ್ದು ದಂಡ ಕಟ್ಟಿದವರೆ. ಇವರ ಜತೆ ನಟ ಮಂಚು ಮನೋಜ್ ಕೂಡ ಇದೇ ವಿಚಾರಕ್ಕೆ ದಂಡ ಕಟ್ಟಿದ್ದಾರೆ. 

 

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
Read more