ನಿದ್ದೆ ಮಾಡ್ತಿದ್ದ ಡೈರೆಕ್ಟರು ಕೊನೆಗೂ ಎದ್ದುಬಿಟ್ರಾ? ಪ್ಲೀಸ್​ ಹೀಗೇ ಇರಿ ಅಂತಿರೋದ್ಯಾಕೆ ಸೀರಿಯಲ್​ ಪ್ರೇಮಿಗಳು?

By Suchethana DFirst Published Jun 23, 2024, 5:53 PM IST
Highlights

ಭಾಗ್ಯಳ ಹೊಸ ಅವತಾರಕ್ಕೆ ತಾಂಡವ್​ ಸುಸ್ತಾಗಿ ಹೋಗಿದ್ದಾನೆ. ಇದನ್ನು ನೋಡಿ ಅಭಿಮಾನಿಗಳಿಗೆ ಖುಷಿಯೋ ಖುಷಿ. ಅವರು ಹೇಳ್ತಿರೋದೇನು?
 

ಭಾಗ್ಯಲಕ್ಷ್ಮಿ ಸೀರಿಯಲ್​ಗೆ ಸಕತ್​ ಟ್ವಿಸ್ಟ್​ ಸಿಕ್ಕಿದೆ. ಅಳುಮುಂಜಿ ಆಗಿದ್ದ ಭಾಗ್ಯ ಫೀನಿಕ್ಸ್​ ಪಕ್ಷಿಯಂತೆ ಎದ್ದು ನಿಂತಿದ್ದಾಳೆ. ಅಷ್ಟಕ್ಕೂ ಭಾಗ್ಯಳ ಗೋಳು ಮುಗಿದಿದೆ. ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಅವಳ ಕೈಗೆ ಸಿಕ್ಕಿದೆ.  ಸಾಮಾನ್ಯವಾಗಿ ಸ್ಟಾರ್​ ಹೋಟೆಲ್​ಗಳ ಶೆಫ್​ಗಳಿಗೆ ನೀಡುವಂತೆ ಲಕ್ಷ ಸಂಬಳ ಪಡೆಯುತ್ತಾಳೆ ಇನ್ನುಮುಂದೆ ಭಾಗ್ಯ.  ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್​ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್​ ಬಂದಿದ್ದು, ಅದನ್ನು ಬ್ಯಾಂಕ್​ಗೆ ಹೋಗಿ ಹಣ ತಂದಿದ್ದಾಳೆ.  ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್​. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ. ಅದೇ ಇನ್ನೊಂದೆಡೆ ಶ್ರೇಷ್ಠಾಳು ಪಡೆದುಕೊಂಡಿದ್ದ ಎರಡು ಲಕ್ಷ ರೂಪಾಯಿ ಕೂಡ ಭಾಗ್ಯಳ ಕೈಸೇರಿದೆ. 

ಪತ್ನಿಯ ಬಳಿ ಇಎಂಐ ಕಟ್ಟಲು ಹಣವಿಲ್ಲ ಎಂದು ಹಂಗಿಸುತ್ತಲೇ ಆಕೆಗೆ ಅವಮಾನ ಮಾಡಲು ನೋಡುತ್ತಿದ್ದ ತಾಂಡವ್​ ಮನೆಯ ಇಐಎಂ ದುಡ್ಡು ಕೇಳಿದ್ದಾನೆ. ಒಂದು ಲಕ್ಷ ಸಂಬಳ ಕೈಯಲ್ಲಿ ಇಟ್ಟುಕೊಂಡಿರೋ ಭಾಗ್ಯ ದುಡ್ಡನ್ನು ತಾಂಡವ್​ ಕೈಯಲ್ಲಿ ಇತ್ತು ಎರಡು ತಿಂಗಳ ಇಐಎಂ ಎಂದು ಹೇಳಿದ್ದಾನೆ. ಇದನ್ನು ಕೇಳಿ ತಾಂಡವ್​ ಪೇಚಿಗೆ ಸಿಲುಕಿದ್ದಾನೆ. ಇಂಗು ತಿಂದ ಮಂಗನಂತಾಗಿದೆ ಅವನ ಸ್ಥಿತಿ. ಮಾರನೆಯ ದಿನ ಭಾಗ್ಯ ಕೆಲಸಕ್ಕೆ ಹೋಗಲು ರೆಡಿಯಾದಾಗ ಅವಳಿಗೆ ನೂರೆಂಟು ಪ್ರಶ್ನೆ ಕೇಳಿದ್ದಾನೆ. ನಾನು ಎಲ್ಲಿ ಬೇಕಾದರೂ ಹೋಗುತ್ತೇನೆ. ಕೇಳಲು ನೀವ್ಯಾರು ಎಂದು ದಿಢೀರನೆ ಕಡ್ಡಿ ಮುರಿದವರಂತೆ ಉತ್ತರ ಕೊಟ್ಟಿದ್ದಾಳೆ ಭಾಗ್ಯ. ಇದನ್ನು ಕೇಳಿ ಸೀರಿಯಲ್​ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಭೇಷ್​ ಭೇಷ್​ ಎನ್ನುತ್ತಿದ್ದಾರೆ.

Latest Videos

ಗಂಡನ ಜೊತೆ ಮದ್ವೆಯಾಗಲು ರೆಡಿಯಾದ ಶ್ರೇಷ್ಠಾಳಿಗಾಗಿ ಹೂವಿನ ಹಾಸಿಗೆ ಸಿದ್ಧಪಡಿಸ್ತಿರೋ ಭಾಗ್ಯ!

ಭಾಗ್ಯಲಕ್ಷ್ಮಿ ಸೀರಿಯಲ್​ಗೆ ಈಗ ಕಳೆ ಬಂದಿದೆ. ಭಾಗ್ಯಳ ಅಳುಮುಂಜಿ ರೂಪ ನೋಡಿ ಬೇಸತ್ತು ಹೋಗಿದ್ವಿ ಎನ್ನುತ್ತಲೇ ಅಂತೂ ಡೈರೆಕ್ಟರ್​ ಸಾಹೇಬ್ರು ದೀರ್ಘ ನಿದ್ದೆಯಿಂದ ಈಗ ಎದ್ದಂತೆ ಕಾಣಿಸುತ್ತಿದೆ ಎಂದು ನಿರ್ದೇಶಕರ ಕಾಲೆಳೆದಿದ್ದಾರೆ ಫ್ಯಾನ್ಸ್​. ಮತ್ತೆ ಪ್ಲೀಸ್​ ಮಲಗಿಕೊಳ್ಳಬೇಡಿ, ಭಾಗ್ಯಳಿಗೆ ಸದಾ ಗೆಲುವು ಆಗುತ್ತಲೇ ಇರಬೇಕು. ಹಾಗೆ ಮಾಡಿ, ಶ್ರೇಷ್ಠಾ ಮತ್ತು ತಾಂಡವ್​ ಸಂಬಂಧ ಎಲ್ಲರಿಗೂ ಬೇಗ ತಿಳಿಯವಂತೆ ಮಾಡಿ ಎಂದು ಹೇಳುತ್ತಿದ್ದಾರೆ. 

ಅಭಿಮಾನಿಗಳು ಇಷ್ಟು ಖುಷಿಯಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ,  ತಾಂಡವ್‌ ಜೊತೆ ಪ್ರೀ ವೆಡ್ಡಿಂಗ್‌ ಶೂಟ್‌ನಲ್ಲಿ ಶ್ರೇಷ್ಠಾ ಬಿಜಿಯಾಗಿದ್ದಳು.  ಅಷ್ಟೊತ್ತಿಗಾಗಲೇ ಪೂಜಾಳಿಂದ ದುಡ್ಡಿನ ವಿಷಯ ಅರಿತ ಭಾಗ್ಯ ಶೂಟಿಂಗ್‌ ಮಾಡ್ತಿರೋ ಜಾಗಕ್ಕೆ ಬಂದು ಶ್ರೇಷ್ಠಾಳ ಕೆನ್ನೆಗೆ ರಪರಪ ಬಾರಿಸಿದ್ದಾಳೆ. ಒಂದು ಹೊಡೆದ ದುಡ್ಡು ಕದ್ದಿರೋದಕ್ಕೆ, ಇನ್ನೊಂದು ಕದ್ದ ದುಡ್ಡನ್ನು ನನಗೇ ಸಾಲ ಎಂದು ಕೊಟ್ಟಿರೋದಕ್ಕೆ, ಮತ್ತೊಂದು ಮನೆಯವರ ಎದುರು ದುಡ್ಡು ಕೊಡು ಎಂದ ಬೆದರಿಕೆ ಹಾಕಿದ್ದಕ್ಕೆ... ಎನ್ನುತ್ತಲೇ ರಪರಪ ಹೊಡೆದಿದ್ದಾಳೆ. ಈ ಏಟಿಗೆ ತತ್ತರಿಸಿರೋ ಶ್ರೇಷ್ಠಾ ಕೆಳಗೆ ಬಿದ್ದಿದ್ದಾಳೆ. ಭಾಗ್ಯಳ ಈ ಕಾಳಿ ಅವತಾರ ನೋಡಿ ನೆಟ್ಟಿಗರು ಭೇಷ್‌ ಭೇಷ್‌ ಎನ್ನುತ್ತಿದ್ದಾರೆ. ಇದೀಗ ಶ್ರೇಷ್ಠಾ ಮದುವೆಯಾಗುತ್ತಿರುವುದು ತನ್ನ ಗಂಡನನ್ನೇ ಎನ್ನೋ ಸತ್ಯ ಯಾವಾಗ ಈ ಪೆದ್ದು ಭಾಗ್ಯಳಿಗೆ ಗೊತ್ತಾಗೋದು ಎಂದು ಕೇಳುತ್ತಿದ್ದಾರೆ ನೆಟ್ಟಿಗರು. 

ನಿವೇದಿತಾ ಮತ್ತೆ ಪ್ರತ್ಯಕ್ಷ! ಏನಾದ್ರೂ ಮಾಡ್ಕೋ ತಾಯಿ... ಶೆಡ್‌ ಸಹವಾಸ ಬೇಡಪ್ಪಾ ಅನ್ನೋದಾ ನೆಟ್ಟಿಗರು?

click me!