ಸೀತಾರಾಮ ಸೀರಿಯಲ್ ಸಿಹಿ ಮತ್ತು ಸೀತಾಳ ಬಾಂಡಿಂಗ್ಗೆ ಜನರು ಸಿಕ್ಕಾಪಟ್ಟೆ ಮೆಚ್ಚುಕೊಂಡಿದ್ದಾರೆ. ಇದೀಗ ಸಿಹಿ ಪಾತ್ರಧಾರಿ ರೀತು ಸಿಂಗ್, ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರಿಗೆ ಪ್ರಶ್ನೆ ಕೇಳಿದ್ದಾಳೆ. ನಿಮಗೆ ಅದರ ಉತ್ತರ ಏನಾದ್ರೂ ಗೊತ್ತಾ?
ಸೀತಾ ರಾಮ ಸೀರಿಯಲ್ನಲ್ಲಿ ಸದ್ಯ ಸಿಹಿಯ ವಿಷಯ ಮುನ್ನೆಲೆಗೆ ಬಂದಿದೆ. ಸೀತಾ ಬಾಡಿಗೆ ತಾಯಿ ಎಂದು ತಿಳಿದಿದೆ. ಇನ್ನು ಮೇಘಶ್ಯಾಮ್ ಮತ್ತು ಶಾಲಿನಿ ಆಕೆಯ ಅಪ್ಪ-ಅಮ್ಮ ಎಂದು ಹೇಳಲಾಗುತ್ತಿದೆ. ಇದೀಗ ಸೀರಿಯಲ್ ಟ್ವಿಸ್ಟ್ಗೆ ಬಂದಿದ್ದು, ನಿಜವಾಗಿಯೂ ಯಾರು, ಏನು, ಎತ್ತ ಎನ್ನುವ ಸತ್ಯ ತಿಳಿಯಬೇಕಿದೆ. ಇದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್ ಮಾಡುತ್ತಾರೆ. ಟೈಂ ಸಿಕ್ಕಾಗಲೆಲ್ಲಾ ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್ ಮಾಡುತ್ತಾರೆ. ಬಿಜಿ ಷೆಡ್ಯೂಲ್ ನಡುವೆ ಒಂದಿಷ್ಟು ರಿಲ್ಯಾಕ್ಸ್ ಮೂಡಿಗೆ ಬರುತ್ತದೆ ಟೀಂ. ಅಷ್ಟಕ್ಕೂ, ಸೀತಾ ಮತ್ತು ಸಿಹಿಯ ಜೋಡಿ ಮಾತ್ರ ಥೇಟ್ ಅಮ್ಮ-ಮಗಳಂತೆಯೇ ಇದೆ. ಸೀರಿಯಲ್ನಲ್ಲಿ ಇವರಿಬ್ಬರೂ ಅಮ್ಮ-ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿಯೂ ಇವರು ಅಮ್ಮ-ಮಗಳು ಇದ್ದಿರಬಹುದು ಎಂದು ಹಲವರಿಗೆ ಎನ್ನಿಸುವುದು ಉಂಟು. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮತ್ತು ಸಿಹಿ ಪಾತ್ರಧಾರಿ ರೀತು ಸಿಂಗ್ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ, ಇವಳು ನಿಮ್ಮ ಮಗಳು ಅಲ್ಲ ಎಂದು ಮನಸ್ಸು ಒಪ್ಪಿಕೊಳ್ಳುವುದೇ ಇಲ್ಲ ಎನ್ನುತ್ತಲೇ ಇರುತ್ತಾರೆ.
ಇದೀಗ ಸಿಹಿ, ಸೀತಮ್ಮಂಗೆ ಒಂದು ಪ್ರಶ್ನೆ ಕೇಳಿದ್ದಾಳೆ. ಅದೇನೆಂದರೆ ಮೂರು ಸೊಳ್ಳೆ ಇರುತ್ತೆ. ಒಂದು ಮಲಗಿರುತ್ತೆ. ಇನ್ನೊಂದು ಮಲಗಿರಲ್ಲ ಯಾಕೆ ಎಂದು. ಇದಕ್ಕೆ ನನಗೆ ಉತ್ತರ ಗೊತ್ತಿಲ್ಲಮ್ಮಾ, ನೀನೇ ಹೇಳು ಎಂದಿದ್ದಾಳೆ ಸೀತಮ್ಮಾ. ಆಗ ಸಿಹಿ, ಅದು ಯಾಕೆ ಅಂದ್ರೆ ಇನ್ನೆರಡು ಸೊಳ್ಳೆಗಳು ಆಡವಾಡುತ್ತಾ ಇರುತ್ತವೆ ಎಂದಿದ್ದಾಳೆ. ಉತ್ತರ ಇಷ್ಟೇ. ಇದನ್ನು ಕೇಳಿ ಸೀತಾ, ನಿನ್ನ ಪ್ರಶ್ನೆಗೆ ಯಾರಿಂದಲೂ ಉತ್ತರ ಗೆಸ್ ಮಾಡಕ್ಕೆ ಆಗಲ್ಲ ಬಿಡಿ ಎಂದಿದ್ದಾಳೆ. ಅಷ್ಟಕ್ಕೂ ಸೀತಾ ಪಾತ್ರಧಾರಿಯ ಹೆಸರು ವೈಷ್ಣವಿ ಗೌಡ ಮತ್ತು ಸಿಹಿ ಪಾತ್ರಧಾರಿಯ ಹೆಸರು ರೀತು ಸಿಂಗ್. ಇವರಿಬ್ಬರ ಬಾಂಡಿಂಗ್ ತುಂಬಾ ಚೆನ್ನಾಗಿದ್ದು, ಸದಾ ರೀಲ್ಸ್ ಮಾಡುತ್ತಲೇ ಇರುತ್ತಾರೆ.
ನಿಮ್ ಕಡೆ ಸೊಳ್ಳೆಗೆ ಏನಂತ ಕರೀತಾರೆ? ಅಂಜಲಿ ಪ್ರಶ್ನೆ ಕೇಳಿದ್ರೆ ಸಿಹಿ ಹೀಗೆಲ್ಲಾ ಹೇಳೋದಾ?
ಇದನ್ನು ನೋಡಿದ ನೆಟ್ಟಿಗರು ನಿಜಕ್ಕೂ ನಿಮ್ಮದು ಹೋದ ಜನ್ಮದಲ್ಲಿ ಅಮ್ಮ-ಮಗಳ ಬಾಂಧವ್ಯವೇ ಆಗಿರಬಹುದು. ಇಲ್ಲದಿದ್ದರೆ ನಿಮ್ಮಿಬ್ಬರ ಕೆಮೆಸ್ಟ್ರಿ ಹೀಗೆ ಆಗುವುದು ಕಷ್ಟವಾಗಿತ್ತು. ಸಿಹಿ ನಿಮ್ಮ ಜೊತೆ ಇರುವಾಗಲೆಲ್ಲಾ ಅವಳು ನಿಮ್ಮದೇ ಮಗಳು ಎನಿಸುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೇಗ ಮದ್ವೆಯಾಗಿ ಮೇಡಂ, ನಿಮಗೂ ಹೀಗೆಯೇ ಸಿಹಿ ಹುಟ್ಟುತ್ತಾಳೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ನಿಮಗೆ ಮಗಳು ಹುಟ್ಟಿದ್ರೆ ಸಿಹಿ ಅಂತಾನೇ ಹೆಸರು ಇಡಿ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಹಲವರು ಇವರು ಸೀರಿಯಲ್ ಅಮ್ಮ-ಮಗಳು ಎನ್ನುವುದನ್ನೇ ಮರೆತು, ಸೀತಾರಾಮ ನಿರ್ದೇಶಕರಿಗೆ ಪ್ಲೀಸ್ ಅಮ್ಮ-ಮಗಳನ್ನು ಬೇರೆ ಮಾಡಬೇಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಅಮ್ಮ-ಮಗಳು ಬೇರೆಯಾದರೆ ಸೀರಿಯಲ್ ನೋಡೋದನ್ನೇ ನಿಲ್ಲಿಸ್ತೀವಿ ಅನ್ನುತ್ತಿದ್ದಾರೆ. ಸೀರಿಯಲ್ ನೋಡಬೇಕೋ, ಬೇಡ್ವೋ ನೀವೇ ಡಿಸೈಡ್ ಮಾಡಿ ಎಂದು ಧಮ್ಕಿಯನ್ನೂ ಕಮೆಂಟ್ನಲ್ಲಿ ಹಾಕುತ್ತಿದ್ದಾರೆ!
ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.‘
ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್ ಮಾಡ್ಬೇಕು... ಏನದು? ಸೀತಾಳ ಪ್ರಶ್ನೆಗೆ ನಿಮ್ಗೆ ಗೊತ್ತಾ ಉತ್ತರ?