
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯಳಿಗೆ ತೊಂದರೆಯೇ ತಪ್ಪುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಅವಳಿಗೆ ಸಮಸ್ಯೆ ಎದುರಾಗುತ್ತಿದೆ. ಇಷ್ಟುದಿನ ಅವಳು ಫುಡ್ ಬ್ಯುಸಿನೆಸ್ ಮಾಡ್ಕೊಂಡು ಜೀವನ ಮಾಡಬಹುದು ಎಂದುಕೊಂಡಿದ್ದಳು, ಈಗ ಲೈಸೆನ್ಸ್ ಇಲ್ಲ ಎಂದು ಇದಕ್ಕೂ ಸಮಸ್ಯೆ ಎದುರಾಗಿದೆ. ಹೊಟ್ಟೆ ಹಾಳು ಮಾಡಿಕೊಂಡಿರೋ ತಾಂಡವ್ಗೆ ಭಾಗ್ಯ ಮಾಡಿರುವ ಅಡುಗೆ ಸಿಕ್ಕಿದೆ. ಆದರೂ ಕೂಡ ಅದು ತನ್ನ ಮೊದಲ ಪತ್ನಿ ಭಾಗ್ಯ ಮಾಡಿರೋ ಅಡುಗೆ ಮಾತ್ರ ಅಂತ ಅರ್ಥ ಆಗಿಲ್ಲ. ಭಾಗ್ಯಳಿಗೆ ಒಂದಲ್ಲ ಒಂದು ಸಮಸ್ಯೆ ಬರ್ತಿರೋದು ನೋಡಿ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಕಾಮೆಂಟ್ಸ್ಗಳು ಬರುತ್ತಿವೆ.
ಆನಿವರ್ಸರಿ ಸಂಭ್ರಮದಲ್ಲಿ ರೊಮ್ಯಾಂಟಿಕ್ ಪೋಟೊ ಶೇರ್ ಮಾಡಿದ ತಾಂಡವ್.....ಆದ್ರೆ ಭಾಗ್ಯ, ಶ್ರೇಷ್ಠಾ ಜೊತೆ ಅಲ್ಲ!
ವೀಕ್ಷಕರು ಹೇಳಿದ್ದೇನು?
Bhagyalakshmi Serial: ತಾಂಡವ್-ಶ್ರೇಷ್ಠ ಬಳಿಕ ಇನ್ನೊಂದು ಮದುವೆ ಆಗೋ ಸೂಚನೆಯಿದು!
ಕಥೆ ಏನು?
ಭಾಗ್ಯ ಹಾಗೂ ತಾಂಡವ್ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿವೆ. ತಾಂಡವ್ ತಾಯಿ ಕುಸುಮ ಇಷ್ಟಪಟ್ಟು ಈ ಮದುವೆ ಮಾಡಿಸಿದ್ದಳು. ತಾಂಡವ್ಗೆ ಈ ಮದುವೆ ಇಷ್ಟವೇ ಇರಲಿಲ್ಲ. ಯಾರ ಮಾತನ್ನೂ ಕೂಡ ಕೇಳದೆ ಇವನು ಶ್ರೇಷ್ಠಳನ್ನು ಮದುವೆಯಾಗಿದ್ದಾನೆ. ಗಂಡನಿಗೆ ಬೇಕಾದ ರೀತಿಯಲ್ಲಿ ಇರಲು ಭಾಗ್ಯ ಪ್ರಯತ್ನಪಟ್ಟರೂ ಪ್ರಯೋಜನ ಆಗಲಿಲ್ಲ. ಭಾಗ್ಯಳಿಂದ ನಾನು ಸದಾ ಅವಮಾನ ಎದುರಿಸ್ತೀನಿ ಅಂತ ತಾಂಡವ್ನನ್ನು ಅವಳು ಬೆಳೆಯೋಕೆ ಬಿಡಬಾರದು ಅಂತಿದ್ದಾನೆ. ಇನ್ನು ಕನ್ನಿಕಾ ಎನ್ನುವವಳಿಗೆ ಭಾಗ್ಯಳನ್ನು ಕಂಡ್ರೆ ಆಗೋದಿಲ್ಲ. ಶ್ರೇಷ್ಠ ಹಾಗೂ ತಾಂಡವ್, ಕನ್ನಿಕಾ ಸೇರಿಕೊಂಡು ಭಾಗ್ಯಗೆ ತೊಂದರೆ ಕೊಡ್ತಿದ್ದಾರೆ.
ಪಾತ್ರಧಾರಿಗಳು
ಭಾಗ್ಯ - ನಟಿ ಸುಷ್ಮಾ ಕೆ ರಾವ್
ಶ್ರೇಷ್ಠ - ಕಾವ್ಯಾ ಗೌಡ
ತಾಂಡವ್ - ಸುದರ್ಶನ್ ರಂಗಪ್ರಸಾದ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.