ಆರು ಕಿಮೀ ನಡೆದೇ ಹೋಗಿ ಪುಸ್ತಕ ವಿತರಣೆ; ಗ್ರಂಥಪಾಲಕಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

By Suvarna NewsFirst Published Aug 4, 2022, 10:30 AM IST
Highlights

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಸಾಮಾಜಿಕ ಜಾಲತಾಣದಲ್ಲಿ ಆಗಾಗ ಆಸಕ್ತಿದಾಯಕ ವಿಚಾರಗಳನ್ನು, ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಟ್ವಿಟರ್ ಖಾತೆಯನ್ನು ಇದಕ್ಕೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಸದ್ಯ ಆನಂದ್ ಮಹೀಂದ್ರಾ ಅವರು ಕೇರಳದ ಲೈಬ್ರೆರಿಯನ್ ಮಹಿಳೆಯೊಬ್ಬರು ಸ್ಫೂರ್ತಿದಾಯಕ ವೀಡಿಯೋವನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ. 

ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಆನಂದ್ ಮಹೀಂದ್ರಾ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅವರ ಟ್ವಿಟರ್ ಖಾತೆಯು ಅದಕ್ಕೆ ಪುರಾವೆಯಾಗಿದೆ. ಈ ಕೈಗಾರಿಕೋದ್ಯಮಿ ಸಾಮಾನ್ಯವಾಗಿ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂಥಾ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ಜನ ಮೆಚ್ಚುಗೆ ಪಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಈ ಬಿಲಿಯನೇರ್ ಕೇರಳದ ಈ 63 ವರ್ಷದ ಗ್ರಂಥಪಾಲಕಿಯ ಬಗ್ಗೆ ವಿವರಿಸಿದ್ದು, ಆಕೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ತಿಳಿಸಿದ್ದಾರೆ.  ದಿ ಬೆಟರ್ ಇಂಡಿಯಾ ಶೇರ್ ಮಾಡಿರುವ ಎರಡೂವರೆ ನಿಮಿಷಗಳ ಅವಧಿಯ ವೀಡಿಯೊವನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

This is inspiring beyond words. Now you know why Kerala is the most literate state. The dedication to reading stands out in today’s device-dominated world. I stand and applaud her…. https://t.co/kvdcSZmdXz

— anand mahindra (@anandmahindra)

ಪ್ರತಿ ದಿನ ಆರು ಕಿಲೋಮೀಟರ್ ನಡೆದು ಪುಸ್ತಕ ವಿತರಿಸುವ ರಾಧಾಮಣಿ
ಕೇರಳದ ಈ 63 ವರ್ಷದ ಮಹಿಳೆ ರಾಧಾಮಣಿ ಗ್ರಂಥಪಾಲಕಿ (Librarian)ಯಾಗಿದ್ದು, ದೂರದ ಹಳ್ಳಿಗಳಿಗೆ ಪುಸ್ತಕಗಳನ್ನು ಸಾಗಿಸಲು ಪ್ರತಿ ದಿನ ಆರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಾರೆ. ಕೇರಳವು ಬಹುಶಃ ರಾಷ್ಟ್ರದೊಳಗೆ ಅತ್ಯಂತ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವಾಗಿರಲು ಅನೇಕ ಕಾರಣಗಳಲ್ಲಿ ರಾಧಾಮಣಿ ಕೂಡಾ ಒಬ್ಬರು. ಇಂಥವರು ಯಾವತ್ತಿಗೂ ಸ್ಫೂರ್ತಿ (Inspiration)ಯಾಗಿರುತ್ತಾರೆ. ರಾಧಾಮಣಿಯವರ ಸಾಧನೆ ಪದಗಳನ್ನು ಮೀರಿ ಸ್ಪೂರ್ತಿದಾಯಕವಾಗಿದೆ. ಇಂದಿನ ಪ್ರಾಬಲ್ಯ ಜಗತ್ತಿನಲ್ಲಿ ಓದುವ ಸಮರ್ಪಣಾ ಭಾವ ಎದ್ದು ಕಾಣುತ್ತದೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ  2,200ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 200ಕ್ಕೂ ಹೆಚ್ಚು ಮಂದಿ ಮರುಟ್ವೀಟ್ ಮಾಡಿದ್ದಾರೆ.

10 ವರ್ಷಗಳ ಕಠಿಣ ಶ್ರಮದಿಂದ SUV ಖರೀದಿಸಿದ ಯುವಕ, ಆನಂದ್‌ ಮಹೀಂದ್ರಾ ಮೆಚ್ಚುಗೆ!

ದಿ ಬೆಟರ್ ಇಂಡಿಯಾದ ವೀಡಿಯೋ ಪ್ರಕಾರ, ರಾಧಾಮಣಿ ತನ್ನ 'ಸ್ಟ್ರೋಲಿಂಗ್ ಲೈಬ್ರರಿ'ಯಿಂದ ಪುಸ್ತಕಗಳಿಗೆ ಪ್ರವೇಶವಿಲ್ಲದ ಹಳ್ಳಿಗಳಲ್ಲಿನ ಹುಡುಗಿಯರು, ಮಕ್ಕಳು ಮತ್ತು ವಯಸ್ಸಾದವರಿಗೆ ಅನುಕೂಲವಾಗುವಂತೆ ದಿನದಿಂದ ದಿನಕ್ಕೆ ಆರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ. ವಯನಾಡ್ ನಿವಾಸಿಗಳ 10 ವರ್ಷಗಳ ಪ್ರಯತ್ನ ಸಾರ್ವಜನಿಕ ಗ್ರಂಥಾಲಯದ ಆರಂಭಕ್ಕೆ ಕಾರಣವಾಯಿತು. ಬಾಲ್ಯದಿಂದಲೂ ಅತ್ಯಾಸಕ್ತಿಯ ಓದುಗರಾಗಿದ್ದ ಗ್ರಂಥಪಾಲಕರಾದ ರಾಧಾಮನೀ ಕೈಯಲ್ಲಿ ಪುಸ್ತಕಗಳನ್ನು ತುಂಬಿದ ಭಾರವಾದ ಚೀಲವನ್ನು ಹೊತ್ತುಕೊಂಡು ದೂರದ ಸ್ಥಳಗಳಿಗೆ ಹೋಗುತ್ತಿದ್ದಾರೆ.  ಮಕ್ಕಳು, ಮಹಿಳೆಯರು, ವೃದ್ಧರು ಪುಸ್ತಕವನ್ನು ಪಡೆದುಕೊಂಡು ಆಸಕ್ತಿಯಿಂದ ಓದುತ್ತಾರೆ. 

ರಾಧಾಮಣಿ ಪ್ರತಿ ತಿಂಗಳು 500 ಪುಸ್ತಕಗಳನ್ನು ಕೈಗೆಟುಕುವ ದರದಲ್ಲಿ 5 ರೂಪಾಯಿಗೆ ತಲುಪಿಸುತ್ತಾರೆ ಎಂದು ಬೆಟರ್ ಇಂಡಿಯಾ ವರದಿ ಹೇಳಿದೆ. ಪ್ರತಿ ಬಾರಿ ಅವಳು ಇ-ಪುಸ್ತಕವನ್ನು ಜನರಿಗೆ ನೀರಿ ರಿಜಿಸ್ಟರ್‌ನಲ್ಲಿ ನಮೂದಿಸುತ್ತಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಆನಂದ್ ಮಹೀಂದ್ರಾ ಹಳ್ಳಿಯಲ್ಲಿ ನಡಿಗೆಯಲ್ಲೇ ಪ್ರಯಾಣಿಸಿ ಜನರಿಗೆ ಬುಕ್ ವಿತರಿಸುವ ರಾಧಾಮಣಿಯವರ ಕಾರ್ಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ. 

ಪ್ರತಿಸ್ಪರ್ಧಿ ಟಾಟಾ ಮೋಟಾರ್ಸ್ ಕುರಿತು ಜಗ ಮೆಚ್ಚುವ ಉತ್ತರ ನೀಡಿದ ಆನಂದ್ ಮಹೀಂದ್ರ!

ದೇವರ ನಾಡಿನಲ್ಲೊಂದು ಸುಂದರ ಬುಡಕಟ್ಟು ಗ್ರಾಮ
ಇತ್ತೀಚಿಗಷ್ಟೇ ಆನಂದ್ ಮಹೀಂದ್ರಾ ಕೇರಳದ ಸುಂದರವಾದ ಬುಡಕಟ್ಟು ಗ್ರಾಮದ ಚಿತ್ರಣದ ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಜುಲೈ 19ರಂದು, ಆನಂದ್ ಮಹೀಂದ್ರಾ ಅವರು ವಯನಾಡಿನ ಬುಡಕಟ್ಟು ಹಳ್ಳಿಯ ಪ್ರಾಚೀನ ವಾಸ್ತುಶಿಲ್ಪದ ವಿನ್ಯಾಸವನ್ನು ಉತ್ತೇಜಿಸಲು ಕೇರಳ ಪ್ರವಾಸೋದ್ಯಮಕ್ಕೆ ಮೆಚ್ಚುಗೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ 57 ಸೆಕೆಂಡ್‌ಗಳ ವೀಡಿಯೊ ‘ಎನ್ ಊರು’ ಬುಡಕಟ್ಟು ಪಾರಂಪರಿಕ ಗ್ರಾಮವಾಗಿದ್ದು, ಇದು ಪ್ರವಾಸಿಗರಿಗಾಗಿ ಸರ್ಕಾರಿ ಯೋಜನೆಯಾಗಿದೆ. ಇದು ಕೇರಳದ  ವಯನಾಡ್ ಜಿಲ್ಲೆಯ ವೈತಿರಿ ಪಟ್ಟಣದಲ್ಲಿದೆ.ಬುಡಕಟ್ಟು ವಾಸ್ತುಶೈಲಿಯನ್ನು ಅನುಭವಿಸಿ, ಸ್ಥಳೀಯ ಜೀವನಶೈಲಿಯನ್ನು ಅನ್ವೇಷಿಸಿ ಎಂದು ವೀಡಿಯೋ ಆರಂಭವಾಗುತ್ತದೆ.

ಟ್ವೀಟ್‌ನಲ್ಲಿ, ಆನಂದ್ ಮಹೀಂದ್ರಾ, 'ಇದು ಅತ್ಯಂತ ಸುಂದರವಾಗಿದೆ. ಈ ಪರಿಕಲ್ಪನೆಗಾಗಿ ಕೇರಳ ಪ್ರವಾಸೋದ್ಯಮಕ್ಕೆ (Tourism) ಅಭಿನಂದನೆಗಳು. ಹಳ್ಳಿಯ ಪ್ರಾಚೀನ ವಾಸ್ತುಶಿಲ್ಪದ ವಿನ್ಯಾಸವು ಬೆರಗುಗೊಳಿಸುತ್ತದೆ. ಸರಳತೆ ಎಷ್ಟು ಅದ್ಭುತವಾಗಿದೆ ಎಂಬುದನ್ನು ಈ ಗ್ರಾಮ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೊದಲ ಬುಡಕಟ್ಟು ಪಾರಂಪರಿಕ ಗ್ರಾಮವನ್ನುಜೂನ್  4, 2022ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಈ ಯೋಜನೆಯನ್ನು ಸಂಪೂರ್ಣವಾಗಿ ಪ್ರದೇಶದ ಬುಡಕಟ್ಟು ಸಮುದಾಯಗಳು ನಿಯಂತ್ರಿಸುತ್ತವೆ. ಪ್ರವಾಸಿಗರಿಗೆ ಬುಡಕಟ್ಟು ಜನರ ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿಯಲು ಅವಕಾಶವನ್ನು ನೀಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

click me!