Published : Apr 26, 2025, 07:20 AM ISTUpdated : Apr 26, 2025, 10:45 PM IST

Karnataka News Live: 25ನೇ ಜನ್ಮದಿನಕ್ಕೆ 2 ದಿನ ಮುನ್ನವೇ ಸಾವು ಕಂಡ ಪ್ರಖ್ಯಾತ ಕಂಟೆಂಟ್‌ ಕ್ರಿಯೇಟರ್‌!

ಸಾರಾಂಶ

ಬೆಂಗಳೂರು: ಸಹಕಾರ ಬ್ಯಾಂಕ್‌ಗಳಿಗೆ 439.12 ಕೋಟಿ ರು. ವಂಚನೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ಆರೋಪಪಟ್ಟಿ ಸಲ್ಲಿಕೆ ಬೆನ್ನಲ್ಲೇ ದಿಢೀರ್ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಬ್ಯಾಂಕಿಗೆ 120 ಕೋಟಿ ರುಪಾಯಿ ಸಾಲ ಮರುಪಾವತಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಹೇಳಿ ಕೊಂಡು ಐಶ್ವರ್ಯಗೌಡ ಎಂಬಾಕೆ ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ವಿನಯ್ ಕುಲಕರ್ಣಿಗೆ ಜಾರಿ ನಿರ್ದೇಶನಾಲಯದಿಂದ ಇದೀಗ ಬಂಧನ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಇಂದು ನಡೆಯುವ ಪ್ರತಿಯೊಂದು ಬೆಳವಣಿಗೆಯ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

Karnataka News Live: 25ನೇ ಜನ್ಮದಿನಕ್ಕೆ 2 ದಿನ ಮುನ್ನವೇ ಸಾವು ಕಂಡ ಪ್ರಖ್ಯಾತ ಕಂಟೆಂಟ್‌ ಕ್ರಿಯೇಟರ್‌!

10:45 PM (IST) Apr 26

25ನೇ ಜನ್ಮದಿನಕ್ಕೆ 2 ದಿನ ಮುನ್ನವೇ ಸಾವು ಕಂಡ ಪ್ರಖ್ಯಾತ ಕಂಟೆಂಟ್‌ ಕ್ರಿಯೇಟರ್‌!

ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್ 25ನೇ ವರ್ಷಕ್ಕೆ ಕಾಲಿಟ್ಟ ಕೆಲವೇ ದಿನಗಳ ಮೊದಲು ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಕುಟುಂಬವು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಆಘಾತ ತಂದಿದೆ.

ಪೂರ್ತಿ ಓದಿ

10:37 PM (IST) Apr 26

ಟೂರ್‌ ಗೈಡ್‌ಗಳು ಸೇನೆಗೆ ಮಾಹಿತಿ ನೀಡದ್ದೇ ನರಮೇಧಕ್ಕೆ ಕಾರಣವಾಯ್ತಾ?

ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಏಕೆ ಉಪಸ್ಥಿತರಿರಲಿಲ್ಲ ಎಂಬ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಿದೆ. ಪ್ರವಾಸ ನಿರ್ವಾಹಕರು ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ಪ್ರವಾಸಿಗರ ಭೇಟಿಗೆ ಆ ಪ್ರದೇಶವನ್ನು ತೆರೆದಿದ್ದರಿಂದ ಭದ್ರತಾ ಲೋಪ ಉಂಟಾಗಿದೆ ಎಂದು ತಿಳಿದುಬಂದಿದೆ.

ಪೂರ್ತಿ ಓದಿ

10:23 PM (IST) Apr 26

ಬೆಂಗಳೂರಿನಲ್ಲಿ ಮೇ 3ರಂದು ಎಜುಕೇಷನ್ ಎಕ್ಸ್‌ಪೋ ಮತ್ತು ಉದ್ಯೋಗ ಮೇಳ

ಅಚಾರ್ಯ ಪಾಠ ಶಾಲೆ ಶಿಕ್ಷಣ ಸಂಸ್ಥೆಯು ಮೇ 3 ರಂದು ಬೆಂಗಳೂರಿನ ಬಸವನಗುಡಿಯ ಆಚಾರ್ಯ ಕ್ಯಾಂಪಸ್‌ನಲ್ಲಿ ಎಜುಕೇಷನ್ ಎಕ್ಸ್‌ಪೋ ಮತ್ತು ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ. ವಿವಿಧ ವಿದ್ಯಾಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 10 ನೇ ತರಗತಿ ಪಾಸಾದವರಿಂದ ಪದವೀಧರರಿಗೆ ಉದ್ಯೋಗಾವಕಾಶಗಳಿವೆ.

ಪೂರ್ತಿ ಓದಿ

10:06 PM (IST) Apr 26

Viral Video: ಪಾಕಿಸ್ತಾನದಲ್ಲಿ ಅಡಗಿರುವ ಲಷ್ಕರ್ ಉಗ್ರ ಫಾರೂಕ್ ತೀಡ್ವಾ ಮನೆ ಧ್ವಂಸ ಮಾಡಿದ ಸೇನೆ!

ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಫಾರೂಕ್ ಅಹ್ಮದ್ ತೀಡ್ವಾ ಮನೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಪಾಕಿಸ್ತಾನದಲ್ಲಿ ಅಡಗಿರುವ ಫಾರೂಕ್, ನಾಗರಿಕರ ಮೇಲಿನ ದಾಳಿಗಳನ್ನು ಯೋಜಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಇದು ಪಹಲ್ಗಾಮ್ ದಾಳಿಯ ನಂತರದ ಕಾರ್ಯಾಚರಣೆಯ ಭಾಗವಾಗಿದೆ.

ಪೂರ್ತಿ ಓದಿ

09:49 PM (IST) Apr 26

ಪಾಕ್ ವಾಯುಮಾರ್ಗ ಬಂದ್: ಭಾರತದ ಏರ್‌ಲೈನ್‌ಗಳಿಗೆ ಮಾರ್ಗಸೂಚಿ ಬಿಡುಗಡೆ

ಪಾಕಿಸ್ತಾನದ ವಾಯುಮಾರ್ಗ ಬಂದ್ ಆದ ಹಿನ್ನೆಲೆಯಲ್ಲಿ, ಭಾರತೀಯ ವಿಮಾನಯಾನ ಸಚಿವಾಲಯವು ವಿಮಾನ ಕಂಪನಿಗಳಿಗೆ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗಳ ಬಗ್ಗೆ ಸರಿಯಾಗಿ ತಿಳಿಸಲು, ವೈದ್ಯಕೀಯ ನೆರವು ಮತ್ತು ಆಹಾರವನ್ನು ಒದಗಿಸಲು ನಿರ್ದೇಶನಗಳನ್ನು ನೀಡಿದೆ. ಟಿಕೆಟ್ ದರ ಏರಿಕೆಯ ಬಗ್ಗೆ ಸರ್ಕಾರದ ಮಧ್ಯಪ್ರವೇಶ ಇನ್ನೂ ಸ್ಪಷ್ಟವಾಗಿಲ್ಲ.

ಪೂರ್ತಿ ಓದಿ

09:38 PM (IST) Apr 26

ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಟೋರ್‌ ವಿಸ್ತರಣೆ ಮಾಡಲಿರುವ Apple, ಹೊಸ ಸ್ಟೋರ್‌ ಎಲ್ಲೆಲ್ಲಾ ಆಗಲಿದೆ ಗೊತ್ತಾ?

ಆಪಲ್ ಭಾರತದಲ್ಲಿ ತನ್ನ ಚಿಲ್ಲರೆ ವ್ಯಾಪಾರವನ್ನು ವಿಸ್ತರಿಸಲು ನೋಯ್ಡಾ, ಪುಣೆ, ಬೆಂಗಳೂರು ಮತ್ತು ಮುಂಬೈನಲ್ಲಿ ನಾಲ್ಕು ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸಿದೆ. ಈ ವಿಸ್ತರಣೆಯು ದೇಶದಲ್ಲಿ ಆಪಲ್‌ನ ಒಟ್ಟು ಮಳಿಗೆಗಳ ಸಂಖ್ಯೆಯನ್ನು ಆರಕ್ಕೆ ತರುತ್ತದೆ. ಈ ಹೊಸ ಮಳಿಗೆಗಳಿಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಪೂರ್ತಿ ಓದಿ

08:54 PM (IST) Apr 26

'ಮಕ್ಕಳಿಗೆ ಅಪ್ಪ ಜೈಲಲ್ಲಿದ್ದಾರೆ ಅಂತಾ ಹೇಳು..' ಪಾಕಿಸ್ತಾನದ ಜೈಲಿನಿಂದಲೇ ಪತ್ನಿಗೆ ಫೋನ್‌ ಮಾಡಿ ತಿಳಿಸಿದ್ರು ಅಭಿನಂದನ್‌!

ಫೆಬ್ರವರಿ 2019 ರಲ್ಲಿ ಪಾಕಿಸ್ತಾನದ ವಶದಲ್ಲಿದ್ದಾಗ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ತಮ್ಮ ಪತ್ನಿ ತನ್ವಿ ಮಾರ್ವಾ ಅವರೊಂದಿಗೆ ಮಾತನಾಡಿದ್ದರು. ಕಷ್ಟದ ಸಮಯದಲ್ಲೂ, ಅವರು ತಮ್ಮ ಮಕ್ಕಳಿಗೆ "ಅಪ್ಪ ಜೈಲಿನಲ್ಲಿದ್ದಾರೆ" ಎಂದು ಹೇಳುವಂತೆ ತನ್ವಿಗೆ ತಿಳಿಸಿದರು ಮತ್ತು ಪಾಕಿಸ್ತಾನಿ ಚಹಾದ ಬಗ್ಗೆ ತಮಾಷೆ ಮಾಡಿದರು.

ಪೂರ್ತಿ ಓದಿ

07:48 PM (IST) Apr 26

ವಿಜಯ್ ಸೇತುಪತಿ ಮಗ ಸೂರ್ಯನ ಸಿನಿಮಾಗೆ ಕಾಯ್ತಾ ಇದೀರಾ? ಬರ್ತಿದೆ ಈ ಡೇಟ್‌ಗೆ!

ಸೂರ್ಯ ಸೇತುಪತಿ ಈ ಹಿಂದೆ ತಮ್ಮ ತಂದೆ ವಿಜಯ್ ಸೇತುಪತಿ ಅಭಿನಯದ 'ಸಿಂಧುಬಾದ್' (2019) ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು, 'ನಾನುಮ್ ರೌಡಿ ಧಾನ್'...

ಪೂರ್ತಿ ಓದಿ

06:53 PM (IST) Apr 26

ಜನ ಸಾಮಾನ್ಯರಿಗೆ ಶಾಕ್​! ರ‍್ಯಾಪಿಡೋ, ಉಬರ್ ಬೈಕ್ ಸೇವೆ ಸ್ಥಗಿತ

ರ‍್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಹೊರಟಿದ್ದು ಯಾಕೆ? ಡಿಟೇಲ್ಸ್​ ಇಲ್ಲಿದೆ... 
 

ಪೂರ್ತಿ ಓದಿ

06:44 PM (IST) Apr 26

ಮೋಹನ್ ಬಗಾನ್ ವಿರುದ್ಧ ಕೇರಳ ಬ್ಲಾಸ್ಟರ್ಸ್‌ಗೆ ಮತ್ತೆ ಸೋಲು

ಕಳಿಂಗ ಸೂಪರ್ ಕಪ್ 2025ರ ಕ್ವಾರ್ಟರ್ ಫೈನಲ್‌ನಲ್ಲಿ ಮೋಹನ್ ಬಗಾನ್ ತಂಡವು ಕೇರಳ ಬ್ಲಾಸ್ಟರ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಯುವ ಆಟಗಾರರ ಬಲದ ಮೋಹನ್ ಬಗಾನ್ ತಂಡವು ಕೇರಳದ ವಿರುದ್ಧ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಪೂರ್ತಿ ಓದಿ

06:19 PM (IST) Apr 26

ಎಲ್ಲರಲ್ಲೂ ಒಂದಾಗಿ ನಿನ್ನ ನೀ ಅರಿ ಎಂದ ಡಿವಿಜಿ

ಡಿವಿಜಿಯವರ ಕಗ್ಗವು ವಿನಮ್ರತೆ, ಸಹಾನುಭೂತಿ ಮತ್ತು ಧೃಢತೆಯ ಮಹತ್ವವನ್ನು ಸಾರುತ್ತದೆ.

ಪೂರ್ತಿ ಓದಿ

06:09 PM (IST) Apr 26

ಸೂಚನೆ ನೀಡದೆ ಝೇಲಂ ನದಿ ನೀರನ್ನು ಪಾಕ್‌ಗೆ ಬಿಟ್ಟ ಭಾರತ, ಮುಜಾಫರಬಾದ್‌ನಲ್ಲಿ ಎಮರ್ಜೆನ್ಸಿ!

ಯಾವುದೇ ಸೂಚನೆಯಿಲ್ಲದೆ ಭಾರತವು ಝೇಲಂ ನದಿ ನೀರನ್ನು ಪಾಕಿಸ್ತಾನಕ್ಕೆ ಬಿಟ್ಟಿದ್ದು, ಮುಜಫರಾಬಾದ್ ಬಳಿ ನೀರಿನ ಮಟ್ಟ ಏರಿಕೆಯಾಗಿದೆ. ಸ್ಥಳೀಯ ಆಡಳಿತವು ತುರ್ತು ಪರಿಸ್ಥಿತಿ ಘೋಷಿಸಿದ್ದು, ಪಾಕಿಸ್ತಾನ ಭಾರತದ ಕ್ರಮವನ್ನು 'ಜಲ ಭಯೋತ್ಪಾದನೆ' ಎಂದು ಕರೆದಿದೆ.

ಪೂರ್ತಿ ಓದಿ

06:03 PM (IST) Apr 26

ವಿಶ್ವದ ದೊಡ್ಡ ಅನಕೊಂಡಾ ಪತ್ತೆ: ಕನಸಲ್ಲೂ ಬೆಚ್ಚಿಬೀಳೋ ದೈತ್ಯ ಇದು!

ವಿಶ್ವದ ದೊಡ್ಡ ಅನಕೊಂಡಾ ಪತ್ತೆ ಮಾಡಲಾಗಿದೆ. ಏನಿದರ ವಿಶೇಷತೆ? ಸಿಕ್ಕಿರೋದು ಎಲ್ಲಿ? ಸಂಪೂರ್ಣ ವಿವರ..
 

ಪೂರ್ತಿ ಓದಿ

05:47 PM (IST) Apr 26

ಸನ್‌ರೈಸರ್ಸ್ ಎದುರು ಮ್ಯಾಚ್ ಸೋತರೂ ಧೋನಿ ಮನಗೆದ್ದ ಮರಿ ಎಬಿಡಿ!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ CSK ಸೋಲಿನ ನಂತರ, ನಾಯಕ ಎಂಎಸ್ ಧೋನಿ ತಮ್ಮ ತಂಡದ ಕಡಿಮೆ ಸ್ಕೋರ್ ಮತ್ತು ಸ್ಪಿನ್ ಬೌಲರ್‌ಗಳನ್ನು ಎದುರಿಸುವಲ್ಲಿನ ವೈಫಲ್ಯವನ್ನು ಒಪ್ಪಿಕೊಂಡರು. ಡೆವಾಲ್ಡ್ ಬ್ರೆವಿಸ್ ಅವರ ಫಿಯರ್‌ಲೆಸ್‌ ಬ್ಯಾಟಿಂಗ್‌ ಅನ್ನು ಅವರು ಶ್ಲಾಘಿಸಿದರು.

ಪೂರ್ತಿ ಓದಿ

05:44 PM (IST) Apr 26

ಒಂದೂವರೆ ಗಂಟೆ ಬದುಕಿದ್ದ, ಯಾರೂ ಸಹಾಯ ಮಾಡಲಿಲ್ಲ: ವಿನಯ್​ ಸಹೋದರಿ

ಗುಂಡಿನ ದಾಳಿಗೆ ಸಿಲುಕಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರು ಒಂದೂವರೆ ಗಂಟೆ ಬದುಕಿದ್ದರೂ ಸ್ಥಳೀಯರು ಯಾರೂ ನೆರವಿಗೆ ಬರಲಿಲ್ಲ ಎಂದಿದ್ದಾರೆ ಸಹೋದರಿ. ಅವರು ಹೇಳಿದ್ದು ಕೇಳಿ...
 

ಪೂರ್ತಿ ಓದಿ

05:42 PM (IST) Apr 26

ಪಾಕಿಸ್ತಾನದ ಜೊತೆ ಯುದ್ಧ ಬೇಡ, ನಾನು ಯುದ್ಧದ ಪರವಿಲ್ಲ ಎಂದ ಸಿಎಂ ಸಿದ್ಧರಾಮಯ್ಯ!

ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕರೆ ನೀಡಿದ ಅವರು, ಕೇಂದ್ರ ಸರ್ಕಾರ ಶಾಂತಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪೂರ್ತಿ ಓದಿ

05:14 PM (IST) Apr 26

ಪಾಂಡ್ಯ ಮಾಜಿ ಪತ್ನಿ ನತಾಶಾ ಹಾಟ್ ವಿಡಿಯೋ ನೋಡಿ ಮದುವೆ ಪ್ರಸ್ತಾಪವಿಟ್ಟ ಅಭಿಮಾನಿ!

ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಕಪ್ಪು ಉಡುಪಿನಲ್ಲಿ ಅವರ ವಿಡಿಯೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾರ್ದಿಕ್ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿರುವ ವದಂತಿಗಳಿವೆ.

ಪೂರ್ತಿ ಓದಿ

05:07 PM (IST) Apr 26

ಇರಾನ್ ಬಂದರಿನಲ್ಲಿ ಭಾರಿ ಸ್ಫೋಟ: 400ಕ್ಕೂ ಹೆಚ್ಚು ಮಂದಿ ಗಾಯ

ಇರಾನ್‌ನ ಬಂದರ್ ಅಬ್ಬಾಸ್ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವು ಕಂಟೇನರ್‌ಗಳು ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ.

ಪೂರ್ತಿ ಓದಿ

04:52 PM (IST) Apr 26

ಒಂದೇ ಚಾರ್ಜ್‌ನಲ್ಲಿ 136 ಕಿ.ಮೀ ರೈಡ್‌: ಬಡ-ಮಧ್ಯಮ ವರ್ಗಕ್ಕೆ ಇವೇ ಬೆಸ್ಟ್‌ ಇ-ಸ್ಕೂಟರ್ಸ್‌!

ಇಂಧನ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಆರಾಮದಾಯಕ ಸವಾರಿಯನ್ನು ನೀಡುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿಯೋಣ. ಸಣ್ಣ ಪ್ರಯಾಣಗಳಿಗೆ ಸೂಕ್ತವಾದ ಈ ಸ್ಕೂಟರ್‌ಗಳು ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳಿಂದ ಚಾಲಿತವಾಗಿದ್ದು, ಏರುತ್ತಿರುವ ಇಂಧನ ಬೆಲೆಗಳಿಂದ ಪರಿಹಾರವನ್ನು ಒದಗಿಸುತ್ತವೆ.

ಪೂರ್ತಿ ಓದಿ

04:14 PM (IST) Apr 26

ರನ್‌ ಗಳಿಸಲು ಮತ್ತೆ ಪರದಾಡಿದ ದೀಪಕ್ ಹೂಡಾ! ಸಿಎಸ್‌ಕೆ ಬ್ಯಾಟರ್‌ಗೆ ಮತ್ತೆ ನಿರಾಸೆ!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ದೀಪಕ್ ಹೂಡಾ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. 21 ಎಸೆತಗಳಲ್ಲಿ ಕೇವಲ 22 ರನ್ ಗಳಿಸಿದ ಹೂಡಾ, ಐಪಿಎಲ್ 2023ರಲ್ಲಿ ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಹೂಡಾ ಅವರ ಕಳಪೆ ಫಾರ್ಮ್ ಚೆನ್ನೈ ತಂಡದ ಸೋಲಿಗೆ ಕಾರಣವಾಗಿದೆ.

ಪೂರ್ತಿ ಓದಿ

04:09 PM (IST) Apr 26

ಸರ್ಕಾರದ ದಿಟ್ಟ ಕ್ರಮ: ಜು.1 ರಿಂದ ಈ ರಾಜ್ಯದ ಹಳೆಯ ವಾಹನಗಳಿಗೆ ಸಿಗೋದಿಲ್ಲ ಪೆಟ್ರೋಲ್‌, ಡೀಸೆಲ್‌!

ಜುಲೈ 1 ರಿಂದ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳಿಗೆ ಇಂಧನ ಮಾರಾಟವನ್ನು ನಿಷೇಧಿಸಲಾಗುವುದು. ಪೆಟ್ರೋಲ್ ಪಂಪ್‌ಗಳಲ್ಲಿ ANPR ಕ್ಯಾಮೆರಾಗಳನ್ನು ಅಳವಡಿಸಿ ಹಳೆಯ ವಾಹನಗಳನ್ನು ಗುರುತಿಸಲಾಗುತ್ತದೆ.

 

ಪೂರ್ತಿ ಓದಿ

04:05 PM (IST) Apr 26

ಪಾಕ್​ ಬೆಂಬಲಿತ ಭಾರತೀಯರ ಲಿಸ್ಟ್​ ಕೊಟ್ಟ ಪಾಕ್​ ಮೀಡಿಯಾ! ಶಾಕಿಂಗ್​ ವಿಡಿಯೋ ವೈರಲ್

ಭಾರತ  ಮತ್ತು ಪಾಕ್​ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಪಾಕ್​ ಬೆಂಬಲಿತ ಭಾರತೀಯರ ಲಿಸ್ಟ್​ ಕೊಟ್ಟ ಪಾಕಿಸ್ತಾನದ ಹಳೆಯ ಸಂದರ್ಶನವೊಂದು ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. 
 

ಪೂರ್ತಿ ಓದಿ

03:17 PM (IST) Apr 26

ವಿಂಗ್ ಕಮಾಂಡರ್‌ ಹಲ್ಲೆ ಪ್ರಕರಣ, ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್‌

ಬೆಂಗಳೂರಿನಲ್ಲಿ ನಡೆದ ಮಾರಾಮಾರಿ ಪ್ರಕರಣದಲ್ಲಿ ವಾಯುಪಡೆ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ವಿರುದ್ಧದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಬೋಸ್ ಅವರು ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್‌ ಮೊರೆ ಹೋಗಿದ್ದರು.

ಪೂರ್ತಿ ಓದಿ

02:58 PM (IST) Apr 26

ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್​

ರೀಲ್ಸ್​ ಮೂಲಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿರೋ ರೇಷ್ಮಾ ಆಂಟಿ ಮತ್ತು ಅವರ ಅಪ್ಪನ ಮೇಲೆ ಗಂಡನಿಂದ ಚೂರಿ ಇರಿತ? ವಿಡಿಯೋದಲ್ಲಿ ಹೇಳಿದ್ದೇನು ಕೇಳಿ...
 

ಪೂರ್ತಿ ಓದಿ

02:29 PM (IST) Apr 26

ಪಾಕಿಸ್ತಾನ ತಯಾರಿದೆ......? ಪಾಕ್‌ ಪ್ರಧಾನಿಯಿಂದ ಮೊದಲ ಪ್ರತಿಕ್ರಿಯೆ!

ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿತೆಗೆದುಕೊಂಡ ಉಗ್ರರ ದಾಳಿಯ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಘಟನೆ ಸಂಬಂಧ ತಟಸ್ಥ ತನಿಖೆಗೆ ಪಾಕಿಸ್ತಾನ ಮುಕ್ತವಾಗಿದೆ ಎಂದು ಹೇಳಿದ್ದಾರೆ. ದಾಳಿಯ ಹಿಂದೆ ಪಾಕಿಸ್ತಾನದ ಪಾತ್ರವಿದೆ ಎಂಬುದಕ್ಕೆ ಭಾರತ ಪುರಾವೆಗಳನ್ನು ಸಂಗ್ರಹಿಸುತ್ತಿದೆ.

ಪೂರ್ತಿ ಓದಿ

01:36 PM (IST) Apr 26

7 ಮ್ಯಾಚ್ ಸೋತರೂ ಸಿಎಸ್‌ಕೆಗಿದೆ ಇನ್ನೂ ಇದೇ ಪ್ಲೇ ಆಫ್‌ಗೇರುವ ಲಾಸ್ಟ್‌ ಚಾನ್ಸ್! ಇಲ್ಲಿದೆ ಲೆಕ್ಕಾಚಾರ

ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳನ್ನು ಸೋತಿದ್ದು, ಪ್ಲೇ ಆಫ್ ಪ್ರವೇಶಿಸಲು ಉಳಿದ 5 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಹೊರಬಿದ್ದಿರುವುದು ತಂಡಕ್ಕೆ ಹೊಡೆತ ನೀಡಿದೆ. ಧೋನಿ ನಾಯಕತ್ವದಲ್ಲಿ ತಂಡ ಗೆಲುವಿನ ಹಾದಿಗೆ ಮರಳಬೇಕಿದೆ.

ಪೂರ್ತಿ ಓದಿ

01:24 PM (IST) Apr 26

ಬೆಂಗಳೂರಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ ಅರ್ಜುನ್

ಪಹಲ್ಗಾಮ್ ದಾಳಿಯ ನಂತರ, ಕಾಶ್ಮೀರಿ ವಿದ್ಯಾರ್ಥಿಗಳು ಭಯಭೀತರಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಅರ್ಜುನ್ ತಮ್ಮ ಮನೆಯಲ್ಲಿ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿದ್ಯಾರ್ಥಿಗಳು ಬೆದರಿಕೆ ಕರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕೆಲವು ಸ್ಥಳಗಳಲ್ಲಿ ದಾಳಿಗಳನ್ನು ಎದುರಿಸುತ್ತಿದ್ದಾರೆ.

ಪೂರ್ತಿ ಓದಿ

01:07 PM (IST) Apr 26

ಕ್ಯಾಂಟೀನ್​ಗೆ ಭಾಗ್ಯಳ ಎಂಟ್ರಿ: ತಾಂಡವ್​- ಶ್ರೇಷ್ಠಾ ಕೆಲಸದಿಂದ ವಜಾ; ನೆಟ್ಟಿಗರಿಂದ ಹೀಗೊಂದು ಧಮ್ಕಿ!

ತಾಂಡವ್​ ಕಚೇರಿಯ ಕ್ಯಾಂಟೀನ್​ಗೆ ಈಗ ಭಾಗ್ಯ ಓನರ್​ ಆಗುತ್ತಿದ್ದಂತೆಯೇ, ತಾಂಡವ್​ ಮತ್ತು ಶ್ರೇಷ್ಠಾಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮುಂದೇನು?
 

ಪೂರ್ತಿ ಓದಿ

12:58 PM (IST) Apr 26

ಜನಾರ್ದನ ರೆಡ್ಡಿ ಚಾರ್ಜ್‌ಶೀಟ್‌: ಗವರ್ನರ್‌ - ಲೋಕಾಯುಕ್ತ ಹಗ್ಗಜಗ್ಗಾಟ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಸಂಬಂಧ ಅಭಿಯೋಜನೆಗೆ  ಅನುಮತಿ ನೀಡಿಕೆ ವಿಚಾರವಾಗಿ ರಾಜ್ಯಪಾಲರು ಲೋಕಾಯುಕ್ತ ಪೊಲೀಸರ ಮಧ್ಯೆ ಹಗ್ಗಾಜಗ್ಗಾಟ ಮುಂದುವರೆದಿದೆ. 

ಪೂರ್ತಿ ಓದಿ

12:10 PM (IST) Apr 26

ಚಾಮರಾಜನಗರ ಭೇಟಿಯಿಂದ ಸಿಎಂ ಸ್ಥಾನ ಗಟ್ಟಿ: ಸಿದ್ದರಾಮಯ್ಯ

ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದ ನನ್ನ ಸಿಎಂ ಸ್ಥಾನ ಗಟ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪೂರ್ತಿ ಓದಿ

11:46 AM (IST) Apr 26

ಮೆಟ್ರೋ ದರ ಏರಿಕೆ: ಚಿಲ್ಲರೆ ವ್ಯಾಪಾರಿಗಳಿಗೆ ಸಂಕಷ್ಟ

ಬೆಂಗಳೂರು ಮೆಟ್ರೋ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಆರ್ಥಿಕ ಹೊಡೆತ ಬಿದ್ದಿದೆ. ಮಾರಾಟ ಕುಸಿತದಿಂದ ಅನೇಕ ಅಂಗಡಿಗಳು ಮುಚ್ಚುವ ಭೀತಿಯಲ್ಲಿದ್ದು, ಬಾಡಿಗೆ ಹೊರೆಯೂ ಹೆಚ್ಚಾಗಿದೆ.

ಪೂರ್ತಿ ಓದಿ

11:39 AM (IST) Apr 26

ಅನಧಿಕೃತ ಲೇಔಟ್‌ ನಿರ್ಮಿಸಿದರೆ ಮುಟ್ಟುಗೋಲು: ಸಚಿವ ಕೃಷ್ಣ ಬೈರೇಗೌಡ

ಇನ್ನು ಮುಂದೆ ನಿಯಮ ಮೀರಿ ಅನಧಿಕೃತ ಬಡಾವಣೆ ನಿರ್ಮಿಸಿದರೆ ಸರ್ಕಾರದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. 

ಪೂರ್ತಿ ಓದಿ

11:27 AM (IST) Apr 26

ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ 1 ವರ್ಷ ಜೈಲೇ ಗತಿ

ರಾಜ್ಯದ ಗೂಂಡಾ ಕಾಯ್ದೆ ಮಾದರಿಯ ಈ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಪರಿಣಾಮ ಆರೋಪಿ ರನ್ಯಾ ರಾವ್, ಆಕೆಯ ಸ್ನೇಹಿತರಾದ ನಟ ತರುಣ್ ಹಾಗೂ ಸಾಹಿಲ್ ಜೈನ್‌ ಅವರು ಒಂದು ವರ್ಷ ಜಾಮೀನು ಸಿಗದೆ ಜೈಲಿನಲ್ಲೇ ಇರಬೇಕಾಗುತ್ತದೆ. 
 

ಪೂರ್ತಿ ಓದಿ

11:19 AM (IST) Apr 26

ಭಾರತದ ಬಗ್ಗೆ ಬದ್ಧತೆ ಪ್ರಶ್ನಿಸಿದ್ದಕ್ಕೆ ನೀರಜ್ ಚೋಪ್ರಾ ಖಡಕ್ ಉತ್ತರ!

ಕ್ಲ್ಯಾಸಿಕ್ ಜಾವೆಲಿನ್ ಥ್ರೋ ಕ್ರೀಡಾಕೂಟಕ್ಕೆ ಪಾಕಿಸ್ತಾನದ ಅರ್ಷದ್ ನದೀಂರನ್ನು ಆಹ್ವಾನಿಸಿದ್ದಕ್ಕೆ ನೀರಜ್ ಚೋಪ್ರಾ ಟೀಕೆಗೆ ಗುರಿಯಾಗಿದ್ದಾರೆ. ದೇಶಪ್ರೇಮವನ್ನು ಪ್ರಶ್ನಿಸುವುದು ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್ ದಾಳಿಗೂ ಮುನ್ನ ಆಹ್ವಾನ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಪೂರ್ತಿ ಓದಿ

10:56 AM (IST) Apr 26

Firefly Movie Review: ಆಂತರ್ಯ ಕಂಡುಕೊಳ್ಳುವ ಹುಡುಕಾಟದ ಕಥನ

ಇದ್ದಕ್ಕಿದ್ದಂತೆ ಅಲ್ಲಿ ಬಣ್ಣ ಬಣ್ಣದ ದೀಪಗಳು ಬೆಳಗಿ ಇಡೀ ವಾತಾವರಣ ಕಲರ್‌ಫುಲ್ ಆಗಿ ಬದಲಾಗುತ್ತದೆ.- ಇಂಥಾ ಚಂದದ ದೃಶ್ಯಗಳ ಸರಮಾಲೆಯೇ ಈ ಸಿನಿಮಾದಲ್ಲಿದೆ. 
 

ಪೂರ್ತಿ ಓದಿ

10:44 AM (IST) Apr 26

Film Review: ಲವಲವಿಕೆಯ ಪ್ರೇಮಕತೆಯಲ್ಲಿ ವಿರಹ, ವಿಷಾದ, ನಿಟ್ಟುಸಿರು

ಅವನಿಗೊಬ್ಬ ತರಲೆ ಸ್ನೇಹಿತ. ಅವರ ದೈನಂದಿನ ಬದುಕು ತೆರೆದುಕೊಳ್ಳುತ್ತದೆ. ಹರೆಯದ ಹುಡುಗರ ಪ್ರೇಮ ಗೀಮ ಇತ್ಯಾದಿ ಕತೆಗಳು ನಡೆಯುತ್ತಿರುತ್ತವೆ.

ಪೂರ್ತಿ ಓದಿ

10:33 AM (IST) Apr 26

Koppal: ಯುವಕರಿಗೆ ಕನ್ಯೆಯರ ಅಭಾವ, ಮಕ್ಕಳ ಕೊರಳಿಗೆ ಮಾಂಗಲ್ಯ!

ಯುವಕರಿಗೆ ಕನ್ಯೆ ಸಿಗದೇ ಮದುವೆಯಾಗುವ ವಯಸ್ಸು ಮುಗಿಯುತ್ತಿದೆ. ಹೀಗೆ ಎದುರಾದ ಕನ್ಯಾ ಅಭಾವದಿಂದ ಮಕ್ಕಳ (ಅಪ್ರಾಪ್ತ ಬಾಲಕಿಯರು) ಕೊರಳಿಗೆ ಮಾಂಗಲ್ಯ ಬೀಳುತ್ತಿದೆ! 

ಪೂರ್ತಿ ಓದಿ

10:25 AM (IST) Apr 26

IPL 2025: ಸಿಎಸ್‌ಕೆಗೆ ಮತ್ತೊಂದು ಸೋಲು, ಧೋನಿ ಟೀಂ ಪ್ಲೇ-ಆಫ್‌ ಕನಸು ಭಗ್ನ?

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್‌ಗಳಿಂದ ಸೋತಿದ್ದು, ಐಪಿಎಲ್ 2025ರ ಪ್ಲೇ-ಆಫ್ ಹಂತ ತಲುಪುವ ಕನಸು ಕಮರಿದೆ. ಚೆನ್ನೈ 9 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಪೂರ್ತಿ ಓದಿ

10:06 AM (IST) Apr 26

ಜೈಲು ಸೇರಿದ ಫ್ರೆಂಡ್ಸ್ ಪತ್ನಿಯರ ಮದ್ವೆ ಆಗ್ತಿದ್ದವನ ಹತ್ಯೆ!

ನಾಲ್ಕು ದಿನಗಳ ಹಿಂದೆ ನಡೆದಿದ್ದ ಎಸ್‌ಡಿಪಿಐ ಕಾರ್ಯಕರ್ತ ಇರ್ಫಾನ್‌ ಖಾನ್ ಕೊಲೆ ಪ್ರಕರಣ ಸಂಬಂಧ ಮೃತನ ಮೂವರು ಸ್ನೇಹಿತರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಪೂರ್ತಿ ಓದಿ

09:58 AM (IST) Apr 26

ಬಲೂಚಿಸ್ತಾನ ದಾಳಿ: ಪಾಕ್ ಸೇನೆಯ 10 ಯೋಧರು ಉಡೀಸ್‌!

ಬಲೂಚಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 10 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಿಎಲ್‌ಎ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈ ಘಟನೆ ಪಾಕಿಸ್ತಾನದ ಭದ್ರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೂರ್ತಿ ಓದಿ

More Trending News