LIVE NOW
Published : Mar 24, 2026, 05:08 AM ISTUpdated : Mar 24, 2026, 07:33 AM IST

Karnataka News Live: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡ್ತಿದ್ದೀರಾ? ಮಕ್ಕಳ ಆ್ಯಕ್ಸಿಡೆಂಟ್ ಕೇಸಲ್ಲಿ 1250 ಪೋಷಕರಿಗೆ ಸಂಕಷ್ಟ!

ಸಾರಾಂಶ

ಬೆಳಗಾವಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈಗಾಗಲೇ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ಹಬ್ಬಿದ್ದರಿಂದ ಸೋಮವಾರ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಜನರು ಸಾಲುಗಟ್ಟಿ ತೈಲ್ ಸಂಗ್ರಹಿಸಿದ್ದಾರೆ. ಸುಳ್ಳುಸುದ್ದಿಯಿಂದ ಆತಂಕಗೊಂಡ ಜನರು ಮನೆಯಲ್ಲಿ ನೀರು ಸಂಗ್ರಹಿಸುವ ಕ್ಯಾನ್‌ ಸಮೇತ ಆಗಮಿಸಿ ಸಾಲುಗಟ್ಟಿ ನಿಂತು ಹರಸಾಹಸಪಟ್ಟು ಪೆಟ್ರೋಲ್‌, ಡಿಸೇಲ್‌ ಅನ್ನು ತುಂಬಿಸಿಕೊಂಡಿದ್ದಾರೆ. 

ಈ ವೇಳೆ ಬಂಕ್‌ ಮಾಲೀಕರು, ಪೆಟ್ರೋಲ್‌ ಮತ್ತು ಡಿಸೇಲ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರೂ ಯಾರು ಕೂಡ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ವಿವಿಧ ಸಾಧನಗಳನ್ನು ತೆಗೆದುಕೊಂಡು ಬಂದು ತೈಲ ಸಂಗ್ರಹಕ್ಕೆ ಮುಂದಾಗಿದ್ದಾರೆ.

07:33 AM (IST) Mar 24

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡ್ತಿದ್ದೀರಾ? ಮಕ್ಕಳ ಆ್ಯಕ್ಸಿಡೆಂಟ್ ಕೇಸಲ್ಲಿ 1250 ಪೋಷಕರಿಗೆ ಸಂಕಷ್ಟ!

ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದ್ದಕ್ಕಾಗಿ 1250 ಪ್ರಕರಣಗಳು ದಾಖಲಾಗಿವೆ. ಈ ತಪ್ಪಿಗಾಗಿ ಅಪ್ರಾಪ್ತರ ಜೊತೆಗೆ ಅವರ ಪಾಲಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
Read Full Story

07:05 AM (IST) Mar 24

ಮದುವೆ ಆಫರ್ ನೀಡಿ ಐದು ಹೆಣ್ಮಕ್ಕಳ ಜೊತೆಗೆ ಸೆ*ಕ್ಸ್..! ಕೊನೆಗೆ ಕೈಕೊಡಲು ಹೋಗಿ ಅರೆಸ್ಟ್ ಆದ ವಂಚಕ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಜೀವನ್ ವಾಸುದೇವ್ ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಯು ಇದೇ ರೀತಿ ಸುಮಾರು ಐದಾರು ಯುವತಿಯರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
Read Full Story

06:42 AM (IST) Mar 24

CBI ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್‌ - ₹5 ಕೋಟಿ ರುಪಾಯಿ ಧೋಖಾ! ಬೆಂಗಳೂರಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಪ್ರಕರಣ

ಬೆಂಗಳೂರಿನ 94 ವರ್ಷದ ಹಿರಿಯ ಸಂಶೋಧಕರೊಬ್ಬರನ್ನು ಸಿಬಿಐ ಮತ್ತು ಬಳ್ಳಾರಿ ಪೊಲೀಸರ ಹೆಸರಿನಲ್ಲಿ ಸಂಪರ್ಕಿಸಿದ ಸೈಬರ್ ವಂಚಕರು, ಡಿಜಿಟಲ್ ಬಂಧನಕ್ಕೊಳಪಡಿಸಿದ್ದಾರೆ. ಮಾನವ ಕಳ್ಳಸಾಗಣೆ ಪ್ರಕರಣದ ನಕಲಿ ಆರೋಪ ಹೊರಿಸಿ, ಬೆದರಿಸಿ ಹಂತ ಹಂತವಾಗಿ 4.9 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿರುವ ಘಟನೆ ತಡವಾಗಿ ವರದಿಯಾಗಿದೆ.
Read Full Story

06:35 AM (IST) Mar 24

ಅಪ್ಪ, ಅಮ್ಮ ಇಲ್ಲದವರು ಮಾತ್ರ ಜಾತ್ಯತೀತರು, ಹಿಂದೂಗಳು ಸಿಂಹದ ಮರಿಗಳು - ಅನಂತಕುಮಾರ

ಮದ್ದೂರಿನಲ್ಲಿ ನಡೆದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಅನಂತಕುಮಾರ ಹೆಗಡೆ, ಜಾತ್ಯತೀತರೆಂದರೆ ಅಪ್ಪ-ಅಮ್ಮ ಇಲ್ಲದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಸಿಂಹದ ಮರಿಗಳಿದ್ದಂತೆ ಮತ್ತು ಮೈಸೂರಿನಲ್ಲಿ ಟಿಪ್ಪುವಿನ ಸಮಾಧಿ ಮಾಡಲಾಯಿತು ಎಂದು ಅವರು ಪ್ರತಿಪಾದಿಸಿದರು.
Read Full Story

06:19 AM (IST) Mar 24

ಜೀವಂತ ವ್ಯಕ್ತಿ ಹೆಸರಲ್ಲಿ ಮರಣ ಪತ್ರ ನೀಡಿದ ಬಿಬಿಎಂಪಿಗೆ ಹೈಕೋರ್ಟ್‌ ತರಾಟೆ

ಜೀವಂತವಾಗಿರುವ ವ್ಯಕ್ತಿಯ ಹೆಸರಿನಲ್ಲಿ ಬಿಬಿಎಂಪಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಿದೆ. ಈ ತಪ್ಪಿನಿಂದಾಗಿ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದರು. ಕೂಡಲೇ ಪ್ರಮಾಣಪತ್ರ ರದ್ದುಪಡಿಸುವಂತೆ ನ್ಯಾಯಾಲಯವು ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
Read Full Story

06:14 AM (IST) Mar 24

ಬಾಗಲಕೋಟೆಯಲ್ಲಿ ಕೈ-ಕಮಲ ಶಕ್ತಿ ಪ್ರದರ್ಶನ; ಕಣ್ಣೀರಿಟ್ಟು ಮಂಡಿಯೂರಿ ಮತಕೇಳಿದ ಮೇಟಿ ಮಕ್ಕಳು

ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನದಂದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತ್ತು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಸಿದರು. ಬೃಹತ್ ಮೆರವಣಿಗೆಗಳನ್ನು ನಡೆಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿ, ತಮ್ಮ ಶಕ್ತಿಯನ್ನು ಪ್ರದರ್ಶಿಸಿದವು.

Read Full Story

05:54 AM (IST) Mar 24

ಹೋಟೆಲ್‌ಗಳಿಗೆ ಶೇ.50 ರಷ್ಟು ಗ್ಯಾಸ್‌ ಪೂರೈಕೆ ಪುನರಾರಂಭಿಸಲು ಕೇಂದ್ರ ಸರ್ಕಾರ ಆದೇಶ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಾಣಿಜ್ಯ ಎಲ್‌ಪಿಜಿ ಪೂರೈಕೆ ಕಡಿತಗೊಂಡಿದ್ದು, ರಾಜ್ಯದ ಹೋಟೆಲ್‌ಗಳು ಮುಚ್ಚುವ ಅಥವಾ ಸೌದೆ ಒಲೆ ಬಳಸುವ ಸ್ಥಿತಿಗೆ ತಲುಪಿವೆ. ಹೋಟೆಲ್‌ ಮಾಲೀಕರ ಸಂಘದ ಮನವಿ ಮೇರೆಗೆ, ಕೇಂದ್ರ ಸರ್ಕಾರವು ಇದೀಗ ಶೇ.50 ರಷ್ಟು ಗ್ಯಾಸ್‌ ಪೂರೈಕೆಯನ್ನು ಪುನರಾರಂಭಿಸಲು ಆದೇಶಿಸಿದೆ.
Read Full Story

05:40 AM (IST) Mar 24

ಬೆಲೆ ಏರಿಕೆ ನಡುವೆಯೂ ಗದಗ ಜಿಲ್ಲೆಯಲ್ಲಿ ಬರೋಬ್ಬರಿ ₹340 ಕೋಟಿ ಮೊತ್ತದ ಮದ್ಯ ಬಿಕರಿ

2025-26ನೇ ಆರ್ಥಿಕ ವರ್ಷದಲ್ಲಿ, ಸರ್ಕಾರದ ಬೆಲೆ ಏರಿಕೆಯ ಹೊರತಾಗಿಯೂ ಗದಗ ಜಿಲ್ಲೆಯಲ್ಲಿ ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹವಾಗಿದೆ. ಲಿಕ್ಕರ್ ಮಾರಾಟದ ಪ್ರಮಾಣ ಸ್ವಲ್ಪ ಕುಸಿದರೂ ಆದಾಯದಲ್ಲಿ ₹35 ಕೋಟಿ ಹೆಚ್ಚಳವಾಗಿದ್ದರೆ, ಬಿಯರ್ ಮಾರಾಟ ಮತ್ತು ಆದಾಯ ಎರಡರಲ್ಲೂ ಕುಸಿತ ಕಂಡುಬಂದಿದೆ. 

Read Full Story

05:27 AM (IST) Mar 24

ದಾವಣಗೆರೆ ದಕ್ಷಿಣ -ಬಾಗಲಕೋಟೆ ಉಪ ಚುನಾವಣೆ ಕಣ - ತೆರೆಮರೆಯಲ್ಲಿ ಶುರುವಾದ ಅಸಲಿ ಆಟ?

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ರಂಗೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳು ತಮ್ಮ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. 

Read Full Story

More Trending News