Published : Mar 24, 2026, 05:08 AM ISTUpdated : Mar 24, 2026, 11:12 PM IST

Karnataka News Live: 'ಹಳ್ಳಿ ಹೈದ ಪ್ಯಾಟೆಗೆ ಬಂದ' ಖ್ಯಾತಿಯ ಬಾವತೀಶ್ ಇನ್ನಿಲ್ಲ; ನಿಂತಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ವಾಹನ!

ಸಾರಾಂಶ

ಬೆಳಗಾವಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈಗಾಗಲೇ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ಹಬ್ಬಿದ್ದರಿಂದ ಸೋಮವಾರ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಜನರು ಸಾಲುಗಟ್ಟಿ ತೈಲ್ ಸಂಗ್ರಹಿಸಿದ್ದಾರೆ. ಸುಳ್ಳುಸುದ್ದಿಯಿಂದ ಆತಂಕಗೊಂಡ ಜನರು ಮನೆಯಲ್ಲಿ ನೀರು ಸಂಗ್ರಹಿಸುವ ಕ್ಯಾನ್‌ ಸಮೇತ ಆಗಮಿಸಿ ಸಾಲುಗಟ್ಟಿ ನಿಂತು ಹರಸಾಹಸಪಟ್ಟು ಪೆಟ್ರೋಲ್‌, ಡಿಸೇಲ್‌ ಅನ್ನು ತುಂಬಿಸಿಕೊಂಡಿದ್ದಾರೆ. 

ಈ ವೇಳೆ ಬಂಕ್‌ ಮಾಲೀಕರು, ಪೆಟ್ರೋಲ್‌ ಮತ್ತು ಡಿಸೇಲ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರೂ ಯಾರು ಕೂಡ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ವಿವಿಧ ಸಾಧನಗಳನ್ನು ತೆಗೆದುಕೊಂಡು ಬಂದು ತೈಲ ಸಂಗ್ರಹಕ್ಕೆ ಮುಂದಾಗಿದ್ದಾರೆ.

11:12 PM (IST) Mar 24

'ಹಳ್ಳಿ ಹೈದ ಪ್ಯಾಟೆಗೆ ಬಂದ' ಖ್ಯಾತಿಯ ಬಾವತೀಶ್ ಇನ್ನಿಲ್ಲ; ನಿಂತಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ವಾಹನ!

'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಖ್ಯಾತಿಯ ಸ್ಪರ್ಧಿ ಬಾವತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಚಲಾಯಿಸುತ್ತಿದ್ದ ಮೊಫೆಡ್, ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

Read Full Story

10:56 PM (IST) Mar 24

ರೋಹಿಣಿ ನಿಲೇಕಣಿ ನೆರವಿನಿಂದ ಬನ್ನೇರುಘಟ್ಟದಲ್ಲಿ ತಲೆಎತ್ತಲಿದೆ 5 ಕೋಟಿ ರೂ. ವೆಚ್ಚದ ವೀಕ್ಷಣಾ ಗೋಪುರ!

ಬೆಂಗಳೂರು ಮೂಲದ 'ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್' ಸಂಸ್ಥೆಯು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವೀಕ್ಷಣಾ ಗೋಪುರ ನಿರ್ಮಾಣಕ್ಕಾಗಿ 5 ಕೋಟಿ ರೂ. ನೆರವು ನೀಡಿದೆ. ಈ 25 ಮೀಟರ್ ಎತ್ತರದ ಗೋಪುರವು ಪ್ರವಾಸಿಗರಿಗೆ ಉದ್ಯಾನವನದ ದಟ್ಟ ಅರಣ್ಯ ಮತ್ತು ಬೆಂಗಳೂರಿನ ಸ್ಕೈಲೈನ್‌ನ ದೃಶ್ಯಗಳನ್ನು ಒದಗಿಸಲಿದೆ.

Read Full Story

10:29 PM (IST) Mar 24

2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು

Sterling Koehn diaper case: ತಮ್ಮ ಕರುಳಕುಡಿಗಳೆಂದರೆ ಪೋಷಕರಿಗೆ ತುಸು ಜಾಸ್ತಿಯೇ ಪ್ರೀತಿ ಮಕ್ಕಳ ರಕ್ಷಣೆಗಾಗಿ ಪೋಷಕರು ಏನು ಬೇಕಾದರು ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಾಡಿದ ಅತಿಯಾದ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ. ಹಾಗಾದರೆ ಪೋಷಕರು ಮಾಡಿದ್ದೇನು?

Read Full Story

10:06 PM (IST) Mar 24

ಜೆರೋಧಾದ ನಿಖಿಲ್ ಕಾಮತ್‌ ಮದುವೆ ಆಗೋಲ್ವಂತೆ! ಕಾರಣ ಕೇಳಿ

ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್‌ (nikhil kamath) ಸದ್ಯ ರಿಷಿ ಸುನಕ್-‌ ಅಕ್ಷತಾ ಮೂರ್ತಿ ಸಂದರ್ಶನದಿಂದ ಸುದ್ದಿಯಲ್ಲಿದ್ದಾರೆ. ಈ ನಿಖಿಲ್‌ ಕಾಮತ್‌ಗೆ ಮದುವೆ ಆಗುವ ಯೋಚನೆ ಇಲ್ಲವಂತೆ. ಇದಕ್ಕೆ ಅವರು ನೀಡಿದ ಕಾರಣ ವಿಶಿಷ್ಟವಾಗಿದೆ. 

Read Full Story

09:48 PM (IST) Mar 24

Niharika Konidela - ಎರಡನೇ ಮದುವೆ ಬಗ್ಗೆ ಮೆಗಾ ಡಾಟರ್ ಸ್ಪಷ್ಟನೆ - ಟ್ರೋಲಿಗರಿಗೆ ಕೊಟ್ರೂ ಖಡಕ್ ಉತ್ತರ

ಮೆಗಾ ಡಾಟರ್ ನಿಹಾರಿಕಾ ಕೊನಿಡೇಲಾ ಅವರ ಮದುವೆ, ವಿವಾದ, ವಿಚ್ಛೇದನ ಎಲ್ಲವೂ ಮುಗಿದುಹೋಗಿದೆ. ಡಿವೋರ್ಸ್ ನಂತರ ನಿಹಾರಿಕಾ ಅವರ ಎರಡನೇ ಮದುವೆ ಬಗ್ಗೆ ನಾನಾ ಬಗೆಯ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರದಲ್ಲಿ ಟ್ರೋಲ್ ಮಾಡುವವರಿಗೆ ನಿಹಾರಿಕಾ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

Read Full Story

09:34 PM (IST) Mar 24

ಅದಾನಿ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ 850 ಕೋಟಿ ಹಣ ಬಾಕಿ!

ಕಲಬುರಗಿ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಅದಾನಿ ಸಮೂಹದ ಎಸಿಸಿ ಕಂಪನಿಯು ಸರ್ಕಾರಕ್ಕೆ ₹850 ಕೋಟಿ ರಾಜಧನ ಮತ್ತು ದಂಡವನ್ನು ಬಾಕಿ ಉಳಿಸಿಕೊಂಡಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದರೂ, ಬಾಕಿ ವಸೂಲಿಗಾಗಿ ಕ್ರಿಮಿನಲ್ ಮೊಕದ್ದಮೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

Read Full Story

08:44 PM (IST) Mar 24

ರಾಜ್ಯದ ಜನತೆಗೆ ಅಲರ್ಟ್ - ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!

ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
Read Full Story

08:02 PM (IST) Mar 24

ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ - ಬೆಂಗಳೂರಲ್ಲಿ ದಾಖಲಾಯ್ತು ಎಫ್‌ಐಆರ್‌

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವು ವ್ಯವಸ್ಥಿತ ಕೊಲೆ ಎಂದು ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.

Read Full Story

07:40 PM (IST) Mar 24

ಮಕ್ಕಳಿಗೆ ಮೊಬೈಲ್‌ ಬಳಕೆ ನಿಷೇಧ ಚರ್ಚಿಸಿ ಮಾರ್ಗಸೂಚಿ - ಸಚಿವ ಮಧು ಬಂಗಾರಪ್ಪ

ಮೊಬೈಲ್‌ ಬಳಕೆ ನಿಯಂತ್ರಿಸುವ ಸಂಬಂಧ ಪೋಷಕರು, ತಜ್ಞರ ಜೊತೆ ಚರ್ಚಿಸುವುದರೊಂದಿಗೆ ಮುಂದಿನ ಅಧಿವೇಶನದಲ್ಲೂ ಚರ್ಚಿಸಿದ ನಂತರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Read Full Story

07:31 PM (IST) Mar 24

ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮಕ್ಕೆ 3 ತಿಂಗಳ ಗಡುವು - ಸಚಿವ ಕೆ.ಜೆ.ಜಾರ್ಜ್‌

ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದಿರುವುದನ್ನು 1.50 ಲಕ್ಷ ರು. ಪಾವತಿಸಿ ಸಕ್ರಮ ಮಾಡಿಕೊಳ್ಳಲು ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

Read Full Story

07:20 PM (IST) Mar 24

ಏನೇ ಹರಸಾಹಸ ಮಾಡಿದ್ರೂ ಬಿಜೆಪಿ ಗೆಲುವು ತಡೆಯಲಾಗಲ್ಲ - ಬಿ.ವೈ.ವಿಜಯೇಂದ್ರ ವಿಶ್ವಾಸ

ಇಂದಿನ ವಾತಾವರಣ ಗಮನಿಸಿದರೆ ಬಾಗಲಕೋಟೆಯಲ್ಲಿ ಬಿಜೆಪಿ ಅರಳುವುದು ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Read Full Story

07:08 PM (IST) Mar 24

ಬೆಂಗಳೂರಿನ BEML ನಲ್ಲಿ ಉನ್ನತ ಹುದ್ದೆ - 3 ಲಕ್ಷದವರೆಗೂ ವೇತನ, ಯಾರಿಗುಂಟು? ಯಾರಿಗಿಲ್ಲ?

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಬೆಂಗಳೂರಿನಲ್ಲಿ 13 ಎಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಪದವಿ, ಡಿಪ್ಲೊಮಾ, ಮತ್ತು ಎಂ.ಟೆಕ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ₹3,00,000 ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.
Read Full Story

07:06 PM (IST) Mar 24

ಪ್ರವಾಸೋದ್ಯಮಕ್ಕೆ ಬಲ ತುಂಬಿದ ಉತ್ತರ ಕರ್ನಾಟಕ, ಕರಾವಳಿ - ಸಚಿವ ಎಚ್.ಕೆ.ಪಾಟೀಲ

ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿ ಕೊಂಡಿದ್ದು, ಆಕರ್ಷಣಿಯ ಪ್ರವಾಸಿ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.

Read Full Story

06:44 PM (IST) Mar 24

Fertility - ಬಿಗಿಯಾದ ಜೀನ್ಸ್ ಹಾಕಿದ್ರೆ ಮಕ್ಕಳಾಗಲ್ವಾ? ಇದು ಬರೀ ಸುಳ್ಳಾ? ಸಂಶೋಧನೆ ಏನು ಹೇಳುತ್ತೆ?

ಬಿಗಿಯಾದ ಜೀನ್ಸ್ ಧರಿಸಿದರೆ ಮಕ್ಕಳಾಗುವುದಿಲ್ಲವೇ? ಈ ಬಗ್ಗೆ ಹಲವರಲ್ಲಿ ಅನುಮಾನಗಳಿವೆ. ಪುರುಷರು ಮತ್ತು ಮಹಿಳೆಯರ ಫಲವತ್ತತೆಯ ಮೇಲೆ ಬಿಗಿ ಉಡುಪುಗಳು ಹೇಗೆ ಪರಿಣಾಮ ಬೀರುತ್ತವೆ? ಇಲ್ಲಿದೆ ಮಾಹಿತಿ.

Read Full Story

06:29 PM (IST) Mar 24

ಇಂದು ವಿಶ್ವ ಕ್ಷಯರೋಗ ದಿನ - ಇಲ್ಲಿದೆ ರೋಗದ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ

ಡಾ| ರಾಬರ್ಟ್ ಕ್ಷಯ ರೋಗಕ್ಕೆ ಕಾರಣವಾದ ರೋಗಾಣು ಮೈಕೊ ಬ್ಯಾಕ್ಟಿರಿಯಾ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವನ್ನು ಕಂಡು ಹಿಡಿದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ 24 ರಂದು ವಿಶ್ವ ಕ್ಷಯರೋಗ ದಿನ ಎಂದು ಆಚರಿಸಲಾಗುತ್ತಿದೆ.

Read Full Story

06:26 PM (IST) Mar 24

ಬೆಂಗಳೂರು ಮೆಟ್ರೋ ಫೇಸ್‌-3 ಕಾಮಗಾರಿಗೆ 6100 ಕೋಟಿ ಸಾಲ ನೀಡಿದ ಜಪಾನ್‌!

ಬೆಂಗಳೂರಿನ 'ನಮ್ಮ ಮೆಟ್ರೋ' ಹಂತ-3 ಯೋಜನೆಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಸುಮಾರು 6,100 ಕೋಟಿ ರೂಪಾಯಿ ಸಾಲ ನೀಡಲು ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ.  ಇದು 30 ವರ್ಷಗಳ ಅವಧಿಯ ಸಾಲವಾಗಿದೆ.

Read Full Story

06:04 PM (IST) Mar 24

Jasmine Storage - ಮಲ್ಲಿಗೆ ಹೂವು ಹೆಚ್ಚು ದಿನ ಫ್ರೆಶ್ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ!

ಮಲ್ಲಿಗೆ ಹೂವುಗಳು ತಮ್ಮ ಬಣ್ಣ, ಸುವಾಸನೆ ಮತ್ತು ಸೌಂದರ್ಯದಿಂದ ಯಾರನ್ನಾದರೂ ಸುಲಭವಾಗಿ ಸೆಳೆಯುತ್ತವೆ. ಹಬ್ಬ, ಪೂಜೆಗಳಿಗಷ್ಟೇ ಅಲ್ಲ, ಸಾಮಾನ್ಯ ದಿನಗಳಲ್ಲೂ ಮಹಿಳೆಯರು ಮಲ್ಲಿಗೆಯನ್ನು ಇಷ್ಟಪಟ್ಟು ಮುಡಿಯುತ್ತಾರೆ.

Read Full Story

06:00 PM (IST) Mar 24

ಅನಿತಾ,ಗಾಯತ್ರಿ, ಸುಧಾ, ಹೇಮಾ, ಉಮಾ... ರಾಮಾಂಜಿ ಪ್ರೇಮದಲ್ಲಿ ಸಿಕ್ಕಿವರೆಲ್ಲರೂ ಹೋಮ!

ಸೆಕ್ಯುರಿಟಿ ಏಜೆನ್ಸಿ ಹೆಸರಲ್ಲಿ, ರಾಮಾಂಜಿ ಎಂಬಾತ ಅಸಹಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ. ದೈಹಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿ, ಲಕ್ಷಾಂತರ ರೂಪಾಯಿ ಹಣ ಮತ್ತು ಒಡವೆ ಪಡೆದು ಪರಾರಿಯಾಗುತ್ತಿದ್ದ ಈತನನ್ನು ಸಂತ್ರಸ್ತೆಯೊಬ್ಬಳ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
Read Full Story

05:48 PM (IST) Mar 24

ಮಂಗಳೂರಿಗರ ನಿದ್ದೆಗೆಡಿಸಿದ ರಸ್ತೆ ಮೇಲಿನ ವಿಚಿತ್ರ ಆಕೃತಿ - ದೆವ್ವದ ರಹಸ್ಯ ಭೇದಿಸಿದ ಸ್ಥಳೀಯರು

ಮಂಗಳೂರಿನ ಮಂಜಲ್ಪಾದೆ ರಸ್ತೆಯಲ್ಲಿ ಮಧ್ಯರಾತ್ರಿ ಕಂಡ ಬಿಳಿ ಬಟ್ಟೆಯ ನಿಗೂಢ ಆಕೃತಿಯೊಂದು ಯುವಕನನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಭಯಾನಕ ಆಡಿಯೋವೊಂದು ಸೇರಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು, ಆದರೆ ಇದರ ಹಿಂದಿನ ಸತ್ಯಾಸತ್ಯತೆ ಬಯಲಾದಾಗ ಎಲ್ಲರೂ ಅಚ್ಚರಿಗೊಂಡರು.
Read Full Story

05:45 PM (IST) Mar 24

Vijay Deverakonda - ಮದುವೆನೇ ಬೇಡ ಅಂದಿದ್ದ ಹೀರೋ - ರಶ್ಮಿಕಾ ಬಗ್ಗೆ ವಿಜಯ್ ಮಾವ ಯಶ್ ಹೇಳಿದ್ದೇನು?

ವಿಜಯ್ ದೇವರಕೊಂಡ ಅವರ ಮಾವ ಯಶ್ ರಂಗಿನೇನಿ ಅವರು ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ವಿಜಯ್-ರಶ್ಮಿಕಾ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Read Full Story

05:20 PM (IST) Mar 24

ನಮ್ಮ RCB ಗೆ KMF ಬ್ರಾಂಡ್ ಅಂಬಾಸಿಡರ್, ನಂದಿನಿ ‌ಬ್ರ್ಯಾಂಡ್ ವಿಶ್ವದಾದ್ಯಂತ ಬೆಳೆಯಲು IPLಗೆ ಪ್ರಾಯೋಜಕತ್ವ

ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್, ಐಪಿಎಲ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ಈ ಸಹಭಾಗಿತ್ವದ ಮೂಲಕ ದೇಶಾದ್ಯಂತ ಮತ್ತು ಜಾಗತಿಕವಾಗಿ ಬ್ರ್ಯಾಂಡ್ ವಿಸ್ತರಿಸುವ ಗುರಿ ಹೊಂದಿದ್ದು, ವಿರಾಟ್ ಕೊಹ್ಲಿಯಂತಹ ಆಟಗಾರರ ಚಿತ್ರಗಳನ್ನು ಉತ್ಪನ್ನಗಳ ಮೇಲೆ ಬಳಸಲಿದೆ. ಇದೇ ವೇಳೆ, ಸಿಲಿಂಡರ್ ಅಭಾವದಂತಹ ಸವಾಲುಗಳು ಮತ್ತು ಟಿಟಿಡಿ ತುಪ್ಪ ಪೂರೈಕೆಯಂತಹ ಅವಕಾಶಗಳನ್ನೂ ಕೆಎಂಎಫ್ ಎದುರಿಸುತ್ತಿದೆ.
Read Full Story

04:50 PM (IST) Mar 24

Dhurandhar 2 ನೋಡಿ ರಜನಿಕಾಂತ್ ಫಿದಾ - ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಎಂದ ತಲೈವಾ

ಸೂಪರ್‌ಸ್ಟಾರ್ ರಜನಿಕಾಂತ್ ಅವರು ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು 'ಮಸ್ಟ್-ವಾಚ್' ಎಂದು ಹೊಗಳಿದ್ದಾರೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ, ವಿಶ್ವಾದ್ಯಂತ ಮೊದಲ ವಾರಾಂತ್ಯದಲ್ಲಿ ₹761 ಕೋಟಿ ಗಳಿಸಿ, ಭಾರತೀಯ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿದೆ.

Read Full Story

04:32 PM (IST) Mar 24

ಧಾರವಾಡ - ಮಾಜಿ ಶಾಸಕರ ಪುತ್ರನನ್ನು ಕಾರಿನಲ್ಲೇ ಸುಟ್ಟು ಹಾಕಿದ ದುಷ್ಕರ್ಮಿಗಳು!

ಧಾರವಾಡದ ರಾಮಾಪುರ ಗ್ರಾಮದ ಬಳಿ ಬೈಲಹೊಂಗಲ ಮಾಜಿ ಶಾಸಕರ ಪುತ್ರ ರಾಜು ಬೋಳಶೆಟ್ಟಿ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

04:32 PM (IST) Mar 24

ಶಾಲೆಗಳಲ್ಲಿ ಇನ್ನುಮುಂದೆ ‘ವಾಟ್ಸಾಪ್ ಹೋಂವರ್ಕ್’ ಬಂದ್! ಶಿಕ್ಷಣ ಇಲಾಖೆಗೆ ‘ಮಕ್ಕಳ ಹಕ್ಕುಗಳ ಆಯೋಗ’ದ ಖಡಕ್ ಸೂಚನೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಮಕ್ಕಳ ಮೇಲೆ ಆಗುತ್ತಿರುವ ಡಿಜಿಟಲ್ ದುಷ್ಪರಿಣಾಮಗಳನ್ನು ತಡೆಯಲು ಶಾಲೆಗಳಲ್ಲಿ ವಾಟ್ಸಾಪ್ ಮೂಲಕ ಹೋಂವರ್ಕ್ ನೀಡುವುದನ್ನು ನಿಷೇಧಿಸಿದೆ. ಹೋಂವರ್ಕ್‌ಗಾಗಿ ಶಾಲಾ ಡೈರಿ ಬಳಕೆಯನ್ನು ಕಡ್ಡಾಯಗೊಳಿಸಿದೆ.

Read Full Story

04:25 PM (IST) Mar 24

ಬಟ್ಟೆ ಅಂಗಡಿ, ಸ್ಟಾರ್‌ಬಕ್ಸ್‌ನಲ್ಲಿ ಕೆಲಸ, ಲ್ಯಾಪ್‌ಟಾಪ್‌ ಬಳಸೋಕೆ ಬರಲ್ಲ - ಮುಗಿಲ್‌ಪೇಟೆ ನಟಿ ಕಯಾದು ಲೋಹರ್

ಕಯಾದು ಲೋಹರ್ ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಸಿನಿಮಾ ರಂಗಕ್ಕೆ ಬರುವ ಮುನ್ನ ತಾನು ಮಾಡಿದ ಕೆಲಸಗಳ ಬಗ್ಗೆ ಕಯಾದು ಮಾತನಾಡಿದ್ದು, ಎಲ್ಲರ ಗಮನ ಸೆಳೆದಿದೆ.

Read Full Story

03:36 PM (IST) Mar 24

ಮುತ್ತಪ್ಪ ರೈ ಪುತ್ರ ರಿಕ್ಕಿ ಲಾಯರ್​ ತಲೆಗೆ ಸಲಾಂ! 'ಬಂದರೋ ಬಂದರೋ ಭಾವ ಬಂದರೋ' ಎಂದು ಪೊಲೀಸರ ಟ್ವೀಟ್​

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಆದರೆ, ರಸ್ತೆ ಸರಿ ಇಲ್ಲದ ಕಾರಣ ಕಾರು ಸ್ಕಿಡ್ ಆಗಿದೆ ಮತ್ತು ಅದನ್ನು ಚಲಾಯಿಸುತ್ತಿದ್ದುದು ಚಾಲಕ ಎಂದು ರಿಕ್ಕಿ ಪರ ವಕೀಲರು ಅಚ್ಚರಿಯ ವಾದ ಮಂಡಿಸಿದ್ದಾರೆ.
Read Full Story

03:21 PM (IST) Mar 24

ಬೆಂಗಳೂರಿನಲ್ಲಿ ಎರಡು ದಿನ ಮದ್ಯ ನಿಷೇಧ! ಪಬ್, ರೆಸ್ಟೋರೆಂಟ್, ಬಾರ್ ಎಲ್ಲೂ ಸಿಗಲ್ಲ ಎಣ್ಣೆ!

ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಮಾರ್ಚ್ 24 ಮತ್ತು 25ರಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ನಗರದ 8 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಈ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
Read Full Story

02:08 PM (IST) Mar 24

ಆನ್‌ಲೈನ್ ಗೇಮ್‌ ಸುಳಿಗೆ ಸಿಲುಕಿ ಜೀವ ಬಿಟ್ಟ ಬೀದರ್ MBBS ವಿದ್ಯಾರ್ಥಿ, ಬಡತನದಲ್ಲಿ ಓದಿಸಿದ್ದೆ ಸರ್ ತಂದೆ ಕಣ್ಣೀರು

ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸುಮಾರು ₹80,000 ನಷ್ಟವಾಗಿರುವುದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read Full Story

01:53 PM (IST) Mar 24

ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕನ್ನಡದಲ್ಲಿ ಮಸ್ತಿ

ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕನ್ನಡದಲ್ಲಿ ಮಸ್ತಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಾಡ್‌ಕಾಸ್ಟ್‌ನಲ್ಲಿ ಕನ್ನಡ ಮಾತುಕತೆ ಭಾರಿ ವೈರಲ್ ಆಗಿದೆ.

 

Read Full Story

01:07 PM (IST) Mar 24

ಕಾಲ್ತುಳಿತದಲ್ಲಿ ಮೃತ 11 ಫ್ಯಾನ್ಸ್‌ಗೆ RCB ಟ್ರಿಬ್ಯೂಟ್, 11 ಜರ್ಸಿ ನಂಬರ್‌ನಲ್ಲಿ ಪ್ರಾಕ್ಟೀಸ್, 11 ಸೀಟ್ ರಿಸರ್ವ್

ಕಾಲ್ತುಳಿತದಲ್ಲಿ ಮೃತ 11 ಫ್ಯಾನ್ಸ್‌ಗೆ RCB ಟ್ರಿಬ್ಯೂಟ್, 11 ಜರ್ಸಿ ನಂಬರ್‌ನಲ್ಲಿ ಪ್ರಾಕ್ಟೀಸ್, 11 ಸೀಟ್ ರಿಸರ್ವ್ ಮಾಡಲಾಗಿದೆ. ಈ ಕುರಿತು ಇಂದು ಕೆಎಸ್‌ಸಿಎ ಸುದ್ದಿಗೋಷ್ಠಿ ನಡೆಸಿದ ಮಹತ್ವದ ಅಪ್‌ಡೇಟ್ ನೀಡಿದೆ.

 

Read Full Story

12:54 PM (IST) Mar 24

ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ - ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ

ಬೇಸಿಗೆಯ ತಾಪಕ್ಕೆ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಕುಸಿದಿದ್ದು, ಕೇವಲ 20 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಿಂದ ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದ್ದು, ನೀರನ್ನು ಕುಡಿಯಲು ಮಾತ್ರ ಮೀಸಲಿಡಬೇಕೆಂಬ ಒತ್ತಾಯ ಹೆಚ್ಚಾಗಿದೆ.
Read Full Story

12:39 PM (IST) Mar 24

ಬೆಂಗಳೂರು ಕಮಿಷನರ್ ಸುದ್ದಿಗೋಷ್ಠಿ - ಹಲವು ನಿಯಮ, ಈ ಬಾರಿ ಆರ್‌ಸಿಬಿ ಪಂದ್ಯಕ್ಕೆ ಚಿನ್ನಸ್ವಾಮಿ ಪ್ರವೇಶ ಸುಲಭವಿಲ್ಲ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ, ಹಿಂದಿನ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಟಿಕೆಟ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗಿದ್ದು, ಟಿಕೆಟ್ ಹೊಂದಿದವರಿಗೆ ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ, ಕ್ರೀಡಾಂಗಣದ ಸುತ್ತಮುತ್ತ ಟ್ರಾಫಿಕ್ ನಿರ್ವಹಣೆ ಹಾಗೂ ಪಾರ್ಕಿಂಗ್‌ಗೆ ವಿಶೇಷ ನಿಯಮಗಳನ್ನು ಜಾರಿಗೊಳಿಸಲಾಗಿದೆ.
Read Full Story

12:38 PM (IST) Mar 24

ಕೃಷ್ಣ ಮೇಲೆ ಕಥೆ ಕದ್ದ ಆರೋಪ, ಏನಿದು ಡಾರ್ಲಿಂಗ್? ಯುವ ನಿರ್ದೇಶಕನ ಕಥೆ ಕದ್ದು ಲವ್ ಮಾಕ್ಟೇಲ್-3 ಮಾಡಿದ್ರಾ?

ಸಭ್ಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಗಂಭೀರ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಯುವ ನಿರ್ದೇಶಕ ರಾಘವೇಂದ್ರ ನಾಯಕ್, ತಮ್ಮ ಕಥೆಯನ್ನು ಕದ್ದು 'ಲವ್ ಮಾಕ್ಟೇಲ್ 3' ಸಿನಿಮಾ ಮಾಡಿದ್ದಾರೆ ಎಂದು ಕೃಷ್ಣ ವಿರುದ್ಧ ಆರೋಪಿಸಿದ್ದಾರೆ. ಈ ಹಿಂದೆ ತಾನು ಕೃಷ್ಣಗೆ ಕಥೆ ಹೇಳಿದ್ದೆ ಎಂದು ಆರೋಪಿಸಿದ್ದಾರೆ.

Read Full Story

12:25 PM (IST) Mar 24

Bigg Boss ರಕ್ಷಿತಾ ಶೆಟ್ಟಿ ಫಿಟ್​ನೆಸ್​ ಟಿಪ್ಸ್​ಗೆ ರಘು ಸುಸ್ತೋ ಸುಸ್ತು - ಇವತ್ತಿನಿಂದಲೇ ರೆಡಿ ಎಂದ ಫ್ಯಾನ್ಸ್​

ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು ಮ್ಯೂಟಂಟ್ ರಘು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಜಿಮ್‌ನಲ್ಲಿ ರಘು ಫಿಟ್ನೆಸ್ ಟಿಪ್ಸ್ ಕೇಳಿದಾಗ, 'ಇರುವುದೊಂದೇ ಜೀವನ, ಚೆನ್ನಾಗಿ ತಿನ್ನಿ, ಆಮೇಲೆ ವರ್ಕೌಟ್ ಮಾಡಿ' ಎಂದು ರಕ್ಷಿತಾ ನೀಡಿದ ಸಲಹೆ ರಘುಗೆ ಅಚ್ಚರಿ ಮೂಡಿಸಿದೆ.
Read Full Story

11:57 AM (IST) Mar 24

ಬೆಳಗಾವಿ - ಗ್ಯಾಸ್ ಸಿಲಿಂಡರ್ ಸಿಗದೆ ಮುಚ್ಚಿದ ಹೊಟೇಲ್, ಉದ್ಯಮಿ ಸಾವಿಗೆ ಶರಣು!

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ ಹೊಟೇಲ್ ಮುಚ್ಚಿ, ಸಾಲದ ಸುಳಿಗೆ ಸಿಲುಕಿದ ಹೊಟೇಲ್ ಮಾಲೀಕ ರಾಮ ಹಳ್ಳೂರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎತ್ತಿ ತೋರಿಸುತ್ತದೆ.
Read Full Story

11:42 AM (IST) Mar 24

ಸೀರಿಯಲ್​ ಕಥೆಗಿಂತ್ಲೂ ರೋಚಕ Amruthadhaare ಜೈ- ಹಳೆಯ ಮಲ್ಲಿ​ ಲವ್ ಸ್ಟೋರಿ! ಪ್ರೀತಿ ಹುಟ್ಟಿದ್ದು ಹೀಗೆ

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿಯೇ ಮೊಳಕೆಯೊಡೆದ ತಮ್ಮ ಪ್ರೀತಿ, ರಾಣವ್ ತಾಯಿಯ ಒಂದು ಫೋನ್ ಕಾಲ್ ಹಾಗೂ ತಾವು ಮೊದಲು ಪ್ರಪೋಸ್ ಮಾಡಿದ ರೋಚಕ ಕ್ಷಣವನ್ನು ನಟಿ ರಾಧಾ ಹಂಚಿಕೊಂಡಿದ್ದಾರೆ.
Read Full Story

10:02 AM (IST) Mar 24

ಹುಬ್ಬಳ್ಳಿ - ಯುವಕರ ಪಾಲಿಗೆ ಮೃತ್ಯಪಾಶವಾಯ್ತು ಕೇಬಲ್ ವೈರ್ - ಇಬ್ಬರು ಬೈಕ್ ಸವಾರರು ಸಾವು

Hubballi bike accident news: ಕಡಿದು ಬಿದ್ದ ಕೇಬಲ್ ವೈರ್‌ಗೆ ಸಿಲುಕಿ ಬೈಕ್ ಸವಾರರಿಬ್ಬರು ಸಾವಿಗೀಡಾದಂತಹ ದುರಂತ ಘಟನೆ ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರೋ ಅರ್ಬನ್ ಓಯಾಸಿಸ್ ಮಾಲ್ ಬಳಿ ಈ ದುರಂತ ನಡೆದಿದೆ.

Read Full Story

09:36 AM (IST) Mar 24

ಇನ್ಮುಂದೆ ಶಾಲಾ ಶಿಕ್ಷಕರೇ ಮೊಟ್ಟೆ ಖರೀದಿಸಿ, ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು

ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ಮೊಟ್ಟೆ ವಿತರಿಸಲು, ಸರ್ಕಾರವು ಗ್ಯಾಸ್‌ ಸಿಲಿಂಡರ್‌ ಮತ್ತು ಪಾತ್ರೆಗಳನ್ನು ಖರೀದಿಸಲು ಅನುದಾನ ನೀಡಿದೆ. ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.

Read Full Story

08:41 AM (IST) Mar 24

ವಾಣಿಜ್ಯ ಸಿಲಿಂಡರ್‌ಗೆ ನೋಂದಣಿ ಕಡ್ಡಾಯ! ಕಾಳ ಸಂತೆಯಲ್ಲಿ ಮಾರಾಟ ತಡೆಗೆ ಕ್ರಮ

ರಾಜ್ಯದ ಎಲ್ಲಾ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬಳಕೆದಾರರು ಒಂದು ವಾರದೊಳಗೆ ಗೇಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಸೂಚಿಸಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವನ್ನು ನಿಯಂತ್ರಿಸಲು ಮತ್ತು ಪೂರೈಕೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
Read Full Story

07:33 AM (IST) Mar 24

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡ್ತಿದ್ದೀರಾ? ಮಕ್ಕಳ ಆ್ಯಕ್ಸಿಡೆಂಟ್ ಕೇಸಲ್ಲಿ 1250 ಪೋಷಕರಿಗೆ ಸಂಕಷ್ಟ!

ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದ್ದಕ್ಕಾಗಿ 1250 ಪ್ರಕರಣಗಳು ದಾಖಲಾಗಿವೆ. ಈ ತಪ್ಪಿಗಾಗಿ ಅಪ್ರಾಪ್ತರ ಜೊತೆಗೆ ಅವರ ಪಾಲಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
Read Full Story

More Trending News