ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ: ಹುಂಡಿಯಲ್ಲಿ 2.47 ಕೋಟಿಗೂ ಹೆಚ್ಚು ನಗದು ಸಂಗ್ರಹ!

Published : Jul 07, 2023, 08:24 AM IST
ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ: ಹುಂಡಿಯಲ್ಲಿ 2.47 ಕೋಟಿಗೂ ಹೆಚ್ಚು ನಗದು ಸಂಗ್ರಹ!

ಸಾರಾಂಶ

ಸರ್ವಕಾಲಕ್ಕೂ ತನ್ನದೇ ಶ್ರೇಷ್ಠಭಕ್ತ ಗಣವನ್ನು ಹೊಂದಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಮತ್ತೆ ಕೋಟ್ಯಧೀಶನಾಗಿದ್ದಾನೆ. ಹೌದು! ಮಹದೇಶ್ವರನ ಹುಂಡಿಯಲ್ಲಿ 2.47 ಕೋಟಿ ರೂಪಾಯಿಗು ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ.

ಚಾಮರಾಜನಗರ (ಜು.07): ಸರ್ವಕಾಲಕ್ಕೂ ತನ್ನದೇ ಶ್ರೇಷ್ಠಭಕ್ತ ಗಣವನ್ನು ಹೊಂದಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಮತ್ತೆ ಕೋಟ್ಯಧೀಶನಾಗಿದ್ದಾನೆ. ಹೌದು! ಮಹದೇಶ್ವರನ ಹುಂಡಿಯಲ್ಲಿ 2.47 ಕೋಟಿ ರೂಪಾಯಿಗು ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಕಳೆದ 36 ದಿನಗಳ ಅವಧಿಯಲ್ಲಿ ಒಟ್ಟು 2,47,15,655 ರೂಪಾಯಿ ನಗದು ಸಂಗ್ರಹವಾಗಿದ್ದು, ಹಣದ ಜೊತೆಗೆ 77 ಗ್ರಾಂ ಚಿನ್ನ, 2 ಕೆಜಿ 250 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ನಗದು ಹಣದ ಪೈಕಿ 12 ಲಕ್ಷ ರೂಪಾಯಿ ನಾಣ್ಯದ ರೂಪದಲ್ಲೇ ಸಂಗ್ರಹವಾಗಿರೋದು ವಿಶೇಷ.

ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ತೇರು ಲೋಕಾರ್ಪಣೆ: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಿದ್ದ ಬೆಳ್ಳಿ ತೇರು ಭಾನುವಾರ ಲೋಕಾರ್ಪಣೆಗೊಂಡಿದ್ದು. ಧಾರ್ಮಿಕ ಕ್ಷೇತ್ರದಲ್ಲಿ ಮತ್ತೊಂದು ಹಿರಿಮೆಯಾಗಿ ಬೆಳ್ಳಿಯ ತೇರು ಸೇರ್ಪಡೆಗೊಂಡಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿಯ ತೇರು ನಿರ್ಮಿಸಲು ಕಾಣಿಕೆಯಿಂದ, ಭಕ್ತರ ದಾನದಿಂದ ಬಂದ 560 ಕೆಜಿ ಬೆಳ್ಳಿ ತೇರು 17ಅಡಿ ಎತ್ತರ ತಯಾರುಮಾಡಿರುವ ತೇರನ್ನು ಭಾನುವಾರ ಶಾಸಕ ಎಂ.ಆರ್‌. ಮಂಜುನಾಥ ಲೋಕಾರ್ಪಣೆಗೊಳಿಸಿದ್ದಾರೆ.

Karnataka Budget 2023 Live Updates | ಕರ್ನಾಟಕ ಬಜೆಟ್

ಮಲೆ ಮಾದೇಶ್ವರ ಬೆಟ್ಟದಲ್ಲಿ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಉದ್ಘಾಟನೆ ವೇಳೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳ್ಳಿಯ ತೇರಿನ ಉತ್ಸವ ಶುಲ್ಕವನ್ನು 2001 ರು. ಗೆ ನಿಗದಿ ಪಡಿಸುವಂತೆ ನೀಡಿದ್ದ ಸೂಚನೆಯ ಮೇರೆಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭಕ್ತಾದಿಗಳಿಗೆ ಬೆಳ್ಳಿಯ ತೇರು ಉತ್ಸವಕ್ಕೆ ದರ ನಿಗದಿ ಮಾಡಿದ್ದಾರೆ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಬೆಟ್ಟದಲ್ಲಿ ಈಗಾಗಲೇ ಹಲವು ಉತ್ಸವಗಳು ಮಹಾರಥೋತ್ಸವ ವಿಶೇಷ ದಿನಗಳಲ್ಲಿ ನಡೆಯುತ್ತಿದೆ. ಈ ರಥೋತ್ಸವದಲ್ಲಿ ಬೆಳ್ಳಿ ತೇರು ಸಹ ಇರಬೇಕೆಂಬ ಉದ್ದೇಶದಿಂದ ಬೆಳ್ಳಿ ತೇರನ್ನು ಸಿದ್ದಪಡಿಸಲಾಗಿತ್ತು. 

ಕೊಟ್ಟ ಕುದುರೆಗಳನ್ನೆಲ್ಲ ಡಿ.ಕೆ.ಶಿವಕುಮಾರ್‌ ಏರಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ

ಇಂದಿನಿಂದ ಬೆಳ್ಳಿ ತೇರು ಸೇವೆ ಮಾದಪ್ಪನ ಭಕ್ತರಿಗೆ ದೊರೆಯಲಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬೆಳ್ಳಿಯ ತೇರು ಲೋಕಾರ್ಪಣೆಗೊಂಡು ಮಾದಪ್ಪನ ಭಕ್ತರಿಗೆ ಹರಕೆ ಹೊತ್ತು ಉತ್ಸವ ಮಾಡಿಸಲು ನಿಗದಿ ಮಾಡಿರುವ ದರ ಹೆಚ್ಚಾಗಿರುವುದರಿಂದ ಭಕ್ತರಿಂದ ದಾನವಾಗಿ ಪಡೆದ ಬೆಳ್ಳಿಯಿಂದ ನಿರ್ಮಾಣವಾಗಿರುವ ರಥಕ್ಕೂ ಸಹ ಖರ್ಚು ವೆಚ್ಚ ಸಹ ಭಕ್ತಾದಿಗಳು ನೀಡಿದ್ದಾರೆ. ಬೆಳ್ಳಿಯ ತೇರು ಉತ್ಸವಕ್ಕೆ ದರ ಕಡಿಮೆ ಮಾಡುವಂತೆ ಮಲೆ ಮಹದೇಶ್ವರ ಬೆಟ್ಟದ ಭಕ್ತರು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ