Operation 72 Movie: ಗೋಪಿನಾಥ ಶಿವಗಿರಿ ನಿರ್ದೇಶನದಲ್ಲಿ ದೇಶಭಕ್ತಿಯ ಕಥೆಯುಳ್ಳ ಹೊಸ ಚಿತ್ರ

By Kannadaprabha NewsFirst Published Jan 7, 2022, 10:45 AM IST
Highlights

ಹೊಸಬರ ತಂಡವೊಂದು ದೇಶಭಕ್ತಿಯ ಕಥಾಹಂದರದಲ್ಲಿ ‘ಆಪರೇಷನ್‌ 72’ ಎಂಬ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಿರ್ಮಾಣದ ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ಬಣ್ಣಹಚ್ಚಿರುವುದು ಗೋಪಿನಾಥ ಶಿವಗಿರಿ. ನಮ್ಮ ದೇಶದ ಭದ್ರತಾ ವ್ಯವಸ್ಥೆಯ ಮೇಲೆ ದಾಳಿಗಳು ನಡೆಯುತ್ತಲೇ ಇವೆ. 

ಹೊಸಬರ ತಂಡವೊಂದು ದೇಶಭಕ್ತಿಯ ಕಥಾಹಂದರದಲ್ಲಿ ‘ಆಪರೇಷನ್‌ 72’ (Operation 72) ಎಂಬ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಿರ್ಮಾಣದ ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ಬಣ್ಣಹಚ್ಚಿರುವುದು ಗೋಪಿನಾಥ ಶಿವಗಿರಿ (Gopinath Shivagiri). ನಮ್ಮ ದೇಶದ ಭದ್ರತಾ ವ್ಯವಸ್ಥೆಯ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ರಾಡಾರ್‌ಗಳಿಂದಲೂ ಪತ್ತೆ ಹಚ್ಚಲಾಗದ ಉನ್ನತ ಶಕ್ತಿಯ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಪ್ರಾಧ್ಯಾಪಕಿಯೊಬ್ಬರು ಸಿದ್ಧಪಡಿಸುವ, ಅದನ್ನು ರಾಷ್ಟ್ರಕ್ಕೆ ಅರ್ಪಿಸುವ ಕಥೆ ಈ ಚಿತ್ರದ್ದು. ಅರೋನ್‌ ಕಾರ್ತಿಕ್‌ ವೆಂಕಟೇಶ್‌ ಸಂಗೀತ, ನರೇಹಳ್ಳಿ ರಾಮು ಛಾಯಾಗ್ರಹಣ, ಪ್ರವೀಣ್‌, ನಾಗರಾಜ.ಡಿ.ಹೊಳ್ಳ ಸಂಕಲನ ಚಿತ್ರಕ್ಕಿದೆ.

ಹೊಸಬರ ಕೌಟುಂಬಿಕ ಚಿತ್ರ ಅನುಮಿತ: ಕೆ ದಿನೇಶ್‌ ನಾಚಪ್ಪ ಕಾಳಿಮಾಡ ನಿರ್ದೇಶನ, ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸಬರ ಚಿತ್ರ ‘ಅನುಮಿತ’ (Anumita). ‘ಕೌಟುಂಬಿಕ ಬದುಕಿನ ಏರಿಳಿತಗಳು, ಮಮತೆಯಿಂದ ಸಲಹುವ ಗುಣ ಇತ್ಯಾದಿ ಅಂಶಗಳು ಚಿತ್ರದಲ್ಲಿವೆ’ ಎಂದು ನಿರ್ದೇಶಕ ದಿನೇಶ್‌ ನಾಚಪ್ಪ ತಿಳಿಸಿದ್ದಾರೆ. ಅವರೇ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ವಿಂಪಲ್‌ ಮುತ್ತಮ್ಮ ಚಿತ್ರದ ನಾಯಕಿ. ದೇವಯ್ಯ, ಪವನ್‌ ತಮ್ಮಯ್ಯ, ಡಿಂಪಲ್‌ ನಾಚಪ್ಪ, ನರವಂಡ ಉಮೇಶ್‌ ಮೊಣ್ಣಪ್ಪ, ಪದ್ಮಾ, ವಾಂಚಿರ ಜಯ ನಂಜಪ್ಪ, ನಲ್ಲಚೇಂದ್ರ ರೇಖಾ, ಮಂದೀರ ಬೋಪಯ್ಯ, ರೀಟಾ ನಾಚಪ್ಪ ನಟಿಸಿದ್ದಾರೆ. ಶಿವಸತ್ಯ ಮೋಹನ್‌ ಮತ್ತು ಕೌಸ್ತಿಕ್‌ ಹರ್ಷ ಸಂಗೀತ, ಬದ್ರಿನಾಥ್‌ ಎಸ್‌ ಛಾಯಾಗ್ರಹಣ, ಕುಮಾರ್‌ ಸಿ ಕೆ ಸಂಕಲನ, ಸುರೇಶ್‌ ಅವರ ನೃತ್ಯ ಸಂಯೋಜನೆ ಇದೆ. ಕೆ ಸಜನಿ ಸೋಮಯ್ಯ ಚಿತ್ರದ ಕಥೆ ಹೆಣೆದಿದ್ದಾರೆ.

Puneeth Rajkumar: ಜೇಮ್ಸ್‌ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್‌

ಅಪ್ಪ ವಿಲನ್‌, ಮಗ ಹೀರೋ: ಚಿತ್ರದ ಹೆಸರು ‘ನನಗೂ ಲವ್ವಾಗಿದೆ’ ಎಂಬುದು. ವಿಜಯ್‌ ರಾಜಶೇಖರ್‌ ಇದರ ನಿರ್ದೇಶಕರು. ಸೋಮ ವಿಜಯ್‌ ಹಾಗೂ ರೋಶಿನಿ ಚಿತ್ರದ ನಾಯಕ, ನಾಯಕಿ. ಕೆ ನೀಲಕಂಠನ್‌ ಈ ಚಿತ್ರದ ನಿರ್ಮಾಪಕರು. ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತಂತೆ. ಆದರೆ, ಅವರಿಗೆ ಅಂಥ ಅವಕಾಶ ಸಿಗದ ಕಾರಣ ಈಗ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ, ತಾವು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಇರುವ, ಸಾಕಷ್ಟುಚಿತ್ರಗಳಿಗೆ ಕೆಲಸ ಮಾಡಿರುವ ವಿಜಯ್‌ ರಾಜಶೇಖರ್‌ ಅವರು ತುಂಬಾ ವರ್ಷಗಳ ಗ್ಯಾಪ್‌ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಬೆಳಗಾವಿ ಹಾಗೂ ಬೆಂಗಳೂರು ಹುಡುಗಿಯ ಪ್ರೇಮ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಹಬ್ಬದ ದಿನ ಬೆಂಗಳೂರಿನ ಶಾಂತಿನಗರದಲ್ಲಿರುವ ಹಿಂದೂ ರುದ್ರಭೂಮಿಯ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಿತು. ನಾಯಕ ನಾಯಕಿಗೆ ತಾಳಿ ಕಟ್ಟುವ ದೃಶ್ಯವನ್ನು ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. 

Namaste Ghost ಸಿನಿಮಾ ನನ್ನದು: ನಿರ್ದೇಶಕ ಭರತ್‌ ನಂದ

‘ಇದು ನನಗೆ ಐದನೇ ಸಿನಿಮಾ. ಇದೊಂದು ಯಂಗ್‌ ಜನರೇಷನ್‌ ಕತೆಯ ಚಿತ್ರ’ ಎಂಬುದು ನಿರ್ದೇಶಕರು ಕೊಟ್ಟವಿವರಣೆ. ‘ಸಿನಿಮಾಗಳಲ್ಲಿ ನಾನು ಹೀರೋ ಆಗಬೇಕು ಎಂಬುದು ನನ್ನ ಚಿಕ್ಕಂದಿನ ಕನಸಾಗಿತ್ತು. ಅದು ನನ್ನಿಂದ ಸಾಧ್ಯವಾಗಲಿಲ್ಲ. ಈಗ ನನಗೆ ವಯಸ್ಸಾಯಿತು. ಆದರೆ, ನನ್ನ ಆ ದಿನಗಳ ಸಿನಿಮಾ ಕನಸು ನನ್ನ ಮಗನ ಮೂಲಕ ಈಡೇರುತ್ತಿದೆ ಎನ್ನುವ ಖುಷಿ ಇದೆ’ ಎನ್ನುತ್ತಾರೆ ನೀಲಕಂಠನ್‌. ಚಿತ್ರದಲ್ಲಿ ಐದು ಹಾಡುಗಳಿದ್ದು, ಬಿ ಆರ್‌ ಹೇಮಂತ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾಗೇಶ್‌ ಶೆಟ್ಟಿಕ್ಯಾಮೆರಾ ಹಿಡಿಯುತ್ತಿದ್ದು, ಎರಡು ಹಂತಗಳಲ್ಲಿ ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ.

click me!