ದೋಸೆನಾ ಇಡ್ಲಿನಾ ಎಂದು ಕೇಳಿದ್ದಕ್ಕೆ ರಾಗಿ ಮುದ್ದೆ ಎಂದ ಯಶ್; ನಿರೂಪಕ ಫುಲ್ ಶಾಕ್

Published : Mar 18, 2025, 11:06 AM ISTUpdated : Mar 18, 2025, 11:11 AM IST
ದೋಸೆನಾ ಇಡ್ಲಿನಾ ಎಂದು ಕೇಳಿದ್ದಕ್ಕೆ ರಾಗಿ ಮುದ್ದೆ ಎಂದ ಯಶ್; ನಿರೂಪಕ ಫುಲ್ ಶಾಕ್

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಕೆಜಿಎಫ್ 2 ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ, ನಿರೂಪಕರು ದೋಸೆ ಅಥವಾ ಇಡ್ಲಿ ಬಗ್ಗೆ ಕೇಳಿದಾಗ, ಯಶ್ ರಾಗಿ ಮುದ್ದೆ ತಮ್ಮ ನೆಚ್ಚಿನ ಆಹಾರವೆಂದು ಹೇಳಿದ್ದಾರೆ. ಕರ್ನಾಟಕದ ಆಹಾರ ಮತ್ತು ಸಂಸ್ಕೃತಿಯನ್ನು ಅವರು ಎತ್ತಿ ಹಿಡಿದಿದ್ದಾರೆ. ಅಭಿಮಾನಿಗಳು ಅವರ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಪಂಡಿತ್ ಕೂಡ ಯಶ್‌ಗಾಗಿ ರಾಗಿ ಮುದ್ದೆ ಮಾಡುವುದನ್ನು ಕಲಿತಿದ್ದಾರೆ.

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ಪ್ಯಾನ್  ಇಂಡಿಯಾ ಕೆಜಿಎಫ್‌ ಚಿತ್ರದ ಕಿಂಗ್ ಹಾಗೂ ಈಗ ಟಾಕ್ಸಿಕ್‌ ಅಂಗಳಕ್ಕೆ ಕಾಲಿಡುವ ಯಶ್ ಹಿಂದೆ ನೀಡಿದ ಸಂದರ್ಶನವೊಂದ ಸಖತ್ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಯಶ್ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ, ಆದರೆ ನೀಡಿದ ಅಷ್ಟೂ ಸಂದರ್ಶನಗಳು ಎವರ್‌ಗ್ರೀನ್ ರೀತಿಯಲ್ಲಿ ವೈರಲ್ ಆಗುತ್ತದೆ. ಹಾಗೆಯೇ ಯಶ್‌ಗೆ ಪ್ರಶ್ನೆ ಕೇಳಿದ ನಾರ್ಥ್‌ ಇಂಡಿಯಾ ನಿರೂಪಕನೇ ಶಾಕ್ ಆಗುವಂತ ಉತ್ತರ ಕೊಟ್ಟಿದ್ದಾರೆ.

ಹೌದು! ಈ ಹಿಂದೆ ಯಶ್ ಕೆಜಿಎಫ್ 2 ಸಮಯದಲ್ಲಿ ಬಾಲಿವುಡ್‌ ಕಡೆ ಮುಖ ಮಾಡಿದ್ದರು. ಸಿನಿಮಾ ಪ್ರಚಾರದ ವೇಳೆ ಸಾಕಷ್ಟು ಸಂದರ್ಶನಗನ್ನು ನೀಡಿದ್ದಾರೆ. ಆಗಲೂ ತಮ್ಮ ಕನ್ನಡ ಭಾಷೆ, ಕರ್ನಾಟಕದ ಆಹಾರ ಮತ್ತು ಕನ್ನಡಿಗರ ಪ್ರೀತಿಯನ್ನು ಎತ್ತಿಡಿದಿದ್ದಾರೆ. ರಾಪಿಡ್ ಫಯರ್ ರೌಂಡ್‌ನಲ್ಲಿ ನಿಮಗೆ ದೋಸೆ ಇಷ್ಟನಾ ಅಥವಾ ಇಡ್ಲಿ ಇಷ್ಟನಾ ಎಂದು ನಿರೂಪಕ ಪ್ರಶ್ನೆ ಮಾಡುತ್ತಾರೆ. ಆಗ ಯಶ್ 'ನನಗೆ ರಾಗಿ ಮುದ್ದೆ ಅಂದ್ರೆ ತುಂಬಾ ಇಷ್ಟ. ಅದು ನಮ್ಮ ಕರ್ನಾಟಕದ ಆಹಾರ' ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. 

ಕೊನೆವರೆಗೂ ಅಪ್ಪಾಜಿ ಅವ್ರ ಸೊಂಟದ ಅಳತೆ 32 ಇತ್ತು, ಅವರ ಫಿಟ್ನೆಸ್‌ಗೆ ನಾನು ಫ್ಯಾನ್ಸ್: ಪುನೀತ್ ಹಳೆ ವಿಡಿಯೋ ವೈರಲ್

ಎಷ್ಟೇ ಎತ್ತರಕ್ಕೆ ಬೆಳೆದರೂ ಕರ್ನಾಟಕವನ್ನು ಬಿಟ್ಟು ಕೊಡದ ಕಾರಣವೇ ನಿಮ್ಮನ್ನು ಇಷ್ಟು ದೊಡ್ಡಮಟ್ಟಕ್ಕೆ ದೇವರು ಬೆಳೆಸಿರುವುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಯಶ್‌ಗೆ ಅಮ್ಮ ಮಾಡುವ ಅಡುಗೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟಂತೆ. ರಾಧಿಕಾ ಪಂಡಿತ್‌ ತಾಯಿ ಮನೆ ಕಡೆ ಮಾಡುವ ಅಡುಗೆ ಶೈಲಿ ಬೇರೆ ಆದರೂ ಯಶ್‌ಗೋಸ್ಕರ ರಾಗಿ ಮುದ್ದು ಮಾಡುವುದನ್ನು ಕಲಿತಿದ್ದಾರೆ ಎಂದು ಯಶ್ ತಾಯಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದರು. ರಾಧಿಕಾ ಪಂಡಿತ್‌ಗೆ ಬೇಕಿಂಗ್ ಮಾಡುವುದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಯಶ್ ಹುಟ್ಟುಹಬ್ಬ, ಮಕ್ಕಳ ಹುಟ್ಟುಹಬ್ಬ ಏನೇ ಇರಲಿ ಕೈಯಾರೆ ಕೇಕ್‌ ರೆಡಿ ಮಾಡುತ್ತಾರೆ. ಮಕ್ಕಳಿಗೆ ಸಣ್ಣ ಪುಟ್ಟ ಹೇಳಿಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. 

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?