ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?

ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?

Published : May 19, 2026, 05:47 PM IST

ನಟ ದರ್ಶನ್​ ವಿವಾಹ ವಾರ್ಷಿಕೋತ್ಸವ ಒಂದು ಕಡೆ ಆದ್ರೆ, ಜೈಲಿನಿಂದ ಹೊರ ಬರೋ ಪರದಾಟ ಮತ್ತೊಂದು ಕಡೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮೀ ತನ್ನಲ್ಲಿದ್ದ ಶತ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ.

ಕಷ್ಟ ಸುಖದಲ್ಲಿ ಸದಾ ಕಾಲ ಜೊತೆಗಿರೋದು ಹೆಂಡತಿ ಒಬ್ಬಳೇ ಅನ್ನೋದು ದರ್ಶನ್ ವಿಷಯದಲ್ಲಿ ಮತ್ತೆ ಪ್ರ್ಯೂ ಆಗಿದೆ. ದರ್ಶನ್ ಎಷ್ಟೇ ಭಾರಿ ಜೈಲು ಸೇರಿದ್ರು, ದಾಸನ ಬೆನ್ನ ಹಿಂದೆ ನಿಂತು ಧೈರ್ಯ ತುಂಬಿ ಹೊರಗೆ ಕರೆದುಕೊಂಡು ಬರೋದಕ್ಕೆ ವಿಜಯಲಕ್ಷ್ಮೀ ಪ್ರಯತ್ನಿಸುತ್ತಾನೆ ಇದ್ದಾರೆ. ಹಾಗಾದ್ರೆ ದಾಸ ಮತ್ತೆ ಜೈಲಿನಿಂದ ಹೊರ ಬರೋದಕ್ಕೆ ಆಗುತ್ತಾ.? ಇದಕ್ಕೆ ವಿಜಯಲಕ್ಷ್ಮೀ ಏನೆಲ್ಲಾ ಪ್ರಯತ್ನ ಪಡಬೇಕು.

ನಟ ದರ್ಶನ್​ ವಿವಾಹ ವಾರ್ಷಿಕೋತ್ಸವ ಒಂದು ಕಡೆ ಆದ್ರೆ, ಜೈಲಿನಿಂದ ಹೊರ ಬರೋ ಪರದಾಟ ಮತ್ತೊಂದು ಕಡೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮೀ ತನ್ನಲ್ಲಿದ್ದ ಶತ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ. ಆದ್ರೆ ಇನ್ನೊಂದು ವರ್ಷದಲ್ಲಿ ಪ್ರಕರಣದ ವಿಚಾರಣೆ ಮುಗಿಯಲಿ ಆಮೇಲೆ ಜಾಮೀನು ಬಗ್ಗೆ ಮಾತಾಡೋಣ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇದು ದಾಸನ ಚಿಂತೆಗೆ ಮತ್ತೆ ತುಪ್ಪ ಸುರಿದಂಗಾಗಿದೆ.

ಇನ್ನು ನಟ ದರ್ಶನ್​​ ಜೈಲಿನಲ್ಲಿ ಒಬ್ಬೊಂಟಿ ಅನ್ನೋದು ನಿಜ. ಆಗಸ್ಟ್ 2025 ರಿಂದ 2026 ಮೇ ವರೆಗೆ ದರ್ಶನ್ ಬರೋಬ್ಬರಿ 70 ಬಾರಿ ಕುಟುಂಬದವರನ್ನ ಭೇಟಿ ಮಾಡಿದ್ದಾರೆ.  ಅಷ್ಟೇ ಅಲ್ಲ 73 ಸಾರಿ ಫೋನ್​ನಲ್ಲಿ ಮಾತನಾಡೋದಕ್ಕೂ ಅವಕಾಶ ಸಿಕ್ಕಿದೆ. ಜೊತೆಗೆ  2025 ಆಗಸ್ಟ್‌ ನಿಂದ 28 ಬಾರಿ ವಕೀಲರ ಭೇಟಿಗೂ ಅವಕಾಶ ನೀಡಲಾಗಿದೆ. ಇಷ್ಟು ಬಾರಿ ಭೇಟಿಗೆ ಅವಕಾಶ ಸಿಕ್ಕಿದ್ರೂ ದಾಸ ಕುಟುಂಬದ ಬೇಟಿಗೆ ಮುಕ್ತ ಅವಕಾಶ ಬೇಕು ಅಂತ ಕೇಳುತ್ತಿದ್ದಾರೆ.

ದರ್ಶನ್ ಬ್ಯಾರಕ್ ನಲ್ಲಿ  ಕಾರ್ಪೆಟ್‌, ಕಂಬಳಿ, ಬೆಡ್ ಶೀಟ್‌, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್ ಗಳಿವೆಯಂತೆ. ಕೋರ್ಟ್ ಆದೇಶದಂತೆ  ಕಂಬಳಿ ವ್ಯವಸ್ಥೆ ಮಾಡಲಾಗಿದೆ. ಸೋ ಜೈಲು ಮ್ಯಾನುವೆಲ್​ನಲ್ಲಿರೋದನ್ನೆಲ್ಲಾ ದರ್ಶನ್​ಗೆ ನೀಡಲಾಗಿದೆ. ದಾಸ ಇರೋ ಬ್ಯಾರಕ್​​ಗೆ ಸಂಪೂರ್ಣ ಸೆಕ್ಯರಿಟಿ ಇದೆ. ದಚ್ಚು  ಜೈಲು ಊಟ ಇನ್ನೂ ಒಂದು ವರ್ಷ ಖಾಯಂ ಅನ್ನೋದಂತು ಕಾತ್ರಿ. ಏನೇ ಖುಷಿ ಕ್ಷಣಗಳನ್ನೂ ಕಳೆಯಬೇಕು ಅಂದ್ರೆ ಅದು ಜೈಲನ್ನೇ ಅನ್ನೋದು ನಿಜ.

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more