ದೇಶದಲ್ಲಿ 2ನೇ ಹಂತದ ಲಾಕ್ಡೌನ್ ಆದೇಶ ಜಾರಿ ಮಾಡಲಾಗಿದೆ. ಇದೀಗ ಮೇ.3ರ ವರೆಗಿರುವ ಲಾಕ್ಡೌನ್ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇತ್ತ ಮೈಸೂರಿನಲ್ಲಿ ಕೊರೋನಾ ವ್ಯಾಪಕವಾಗಿ ಹರುತ್ತಿದೆ. ಇದಕ್ಕೆ ಕಾರಣವಾದ ಜುಬಿಲಿಯೆಂಟ್ ಕಾರ್ಖಾನೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 21 ದಿನ ಹಾಗೂ ಇನ್ನು 19 ದಿನ ಒಟ್ಟು 40 ದಿನಗಳ ಲಾಕ್ಡೌನ್ನಿಂದ ಭಾರತಕ್ಕೆ 17 ಲಕ್ಷ ಕೋಟಿ ರೂಪಾಯಿ ಲಾಸ್. ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ಸ್ಥಳ ಕೊನೆ ಕ್ಷಣದಲ್ಲಿ ಬದಲಾವಣೆ, ನಿವೇದಿತಾ ಗೌಡ ಕೂದಲಿಗೆ ಕತ್ತರಿ ಸೇರಿದಂತೆ ಏಪ್ರಿಲ್ 15ರ ಟಾಪ್ 10 ಸುದ್ದಿ ಇಲ್ಲಿವೆ.
ಕೊರೋನಾ ವಿರುದ್ಧ ಸಮರ ಸಾರಿರೋ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಕೇಸ್ ಕಂಟಕವಾಗಿದೆ. ಲಾಕ್ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿರುತ್ತಿರುವುದು ಇದೇ ತಬ್ಲಿಘಿಗಳಿಂದಲೇ. ಇದೀಗ ಮೈಸೂರಿನಲ್ಲಿ ಜಿಲ್ಲೆಯಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆ ರಾಜ್ಯ ಸರ್ಕಾರಕ್ಕೆ ನಿದ್ದೆಗೆಡಿಸಿದೆ.
ಜಂಟಲ್ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ನ ಇನ್ನೊಂದು ಮುಖವು ಅನಾವರಣಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗೆ ಕೆಲ ಕ್ರಿಕೆಟಿಗರು ಮಸಿ ಬಳಿಯುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲ ಕ್ರಿಕೆಟಿಗರು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ವೃತ್ತಿಜೀವನವನ್ನೇ ಹಾಳುಮಾಡಿಕೊಂಡವರಿದ್ದಾರೆ.
ಕೊರೋನಾ ವೈರಸ್ ಕಾಟದಿಂದ ನಿಖಿಲ್ ಕುಮಾರಸ್ವಾಮಿ- ರೇವತಿ ಮದುವೆ ಮಹೋತ್ಸವ ನಡೆಯೋ ಸ್ಥಳದ ಕುರಿತು ಒಂದಷ್ಟು ಗೊಂದಲವಿತ್ತು. ಆದ್ರೆ ಇದೀಗ ವಿವಾಹ ಸ್ಥಳ ಫೈನಲ್ ಆಗಿದ್ದು, ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ಹಾಗಾದ್ರೆ ನಿಖಿಲ್ ಮದ್ವೆ ನಡೆಯೋದು ಎಲ್ಲಿ? ಈ ಕೆಳಗಿನಂತಿದೆ ನೋಡಿ ವಿವರ...!
ಬಿಗ್ಬಾಸ್ ನಿವೇದಿತಾ ಗೌಡ ಲಾಂಗ್ ಹೇರ್ ಫೇಮಸ್. ಹೆಣ್ಮಕ್ಕಳಂತೂ ನಿವೇದಿತಾ ಲಾಂಗ್ ಹೇರ್ ಗೆ ಕಳೆದೇ ಹೋಗಿದ್ದರು. ಅಷ್ಟೇ ಯಾಕೆ ತೈಲ ಕಂಪನಿಯೂ ನಿವೇದಿತಾ ಲಾಂಗ್ ಹೇರ್ ಗೆ ಫಿದಾ ಆಗಿತ್ತು. ನಿವೇದಿತಾರಿಂದ ಒಂದು ಜಾಹೀರಾತನ್ನು ಮಾಡಿಸಿತು. ಆದ್ರೀಗ ನಿವೇದಿತಾ ಶಾಕ್ ನೀಡಿದ್ದಾರೆ.
ಕೊರೋನಾ ತಾಂಡವದಿಂದ ಪಾರಾಗಲು ರಾಷ್ಟ್ರವ್ಯಾಪಿ ಘೋಷಣೆಯಾಗಿದ್ದ ಲಾಕ್ಡೌನ್ ಅನ್ನು ಮೇ.3ರ ವರೆಗೆ ವಿಸ್ತರಿಸಿದ್ದರಿಂದ ದೇಶದ ಆರ್ಥಿಕತೆ, ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ಭೀಕರವಾಗಿ ನೆಲ ಕಚ್ಚಲಿದೆ. ಬರೋಬ್ಬರಿ 17.81 ಲಕ್ಷ ಕೋಟಿಯಷ್ಟುನಷ್ಟವಾಗಲಿದೆ ಎಂದು ಬ್ರೋಕರೇಜ್ ಸಂಸ್ಥೆ ಬಾಕ್ಲೇರ್ಸ್ ಅಂದಾಜಿಸಿದೆ.
ಬೆಂಗಳೂರನ್ನು ಗಾರ್ಡನ್ ಸಿಟಿ ಎಂದೂ ಕರೆಯುತ್ತಾರೆ. ಸುಂದರ ಉದ್ಯಾವನಗಳಿರುವ ಬೆಂಗಳೂರಿನ ರಸ್ತೆಗಳೂ ಸದ್ಯದ ಮಟ್ಟಿಗೆ ಗಾರ್ಡನ್ ರೀತಿಯೇ ಕಂಗೊಳಿಸುತ್ತಿದೆ. ವಾಹನಗಳ ಓಡಾಟ, ಧೂಳು, ಮಾಲೀನ್ಯವಿಲ್ಲದೆ ನೈಸರ್ಗಿಕ ಸೌಂದರ್ಯ ಅಧ್ಬುತವಾಗಿ ಕಾಣಿಸುತ್ತಿದೆ. ಅರೆ ಇದು ನಮ್ಮ ಬೆಂಗಳೂರಾ.. ಎಂದು ಖಂಡಿತಾ ನಿಮ್ಮನ್ನು ಅಚ್ಚರಿಗೊಳಿಸುತ್ತವೆ ಈ ಫೋಟೋಸ್
KTM ಭಾರತದಲ್ಲಿ ತನ್ನ ಬೈಕ್ಗಳನ್ನು ಬಜಾಜ್ ಸಹಯೋಗದೊಂದಿಗೆ ಮಾರಾಟ ಮಾಡುತ್ತಿದೆ. ಇದೀಗ ಈ ಎರಡೂ ಕಂಪನಿ ಜೊತೆಯಾಗಿ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆ ಮಾಡಲು ಸಜ್ಜಾಗಿದೆ. ಬಜಾಜ್ ಉತ್ಪಾದನ ಘಟಕದಲ್ಲಿ KTM ಡ್ಯೂಕ್ ತಂತ್ರಜ್ಞಾನ ಬಳಸಿ ನೂತನ ಎಲೆಕ್ಟ್ರಿಕ್ ಮೊಪೆಡ್ ಮಾರುಕಟ್ಟೆ ಪ್ರವೇಶಿಸಲಿದೆ. ವಿಶೇಷ ಅಂದರೆ ಇದು ಕಡಿಮೆ ಬೆಲೆಯ ಸ್ಕೂಟರ್ ಆಗಿರಲಿದೆ. ಈ ಮೊಪೆಡ್ ಸ್ಕೂಟರ್ ಹೆಚ್ಚಿನ ಮಾಹಿತಿ ಇಲ್ಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.