
ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ಮತಕ್ಕಾಗಿ ಮನವಿಯನ್ನೂ ಸಲ್ಲಿಸದೇ ಏಕೆ ರಾಜೀನಾಮೆ ಕೊಟ್ಟರು? ಅತ್ಯಂತ ಕುತೂಹಲಭರಿತ ರಾಜ್ಯ ರಾಜಕೀಯ ದೊಂಬರಾಟಕ್ಕೆ ಒಂದು ಹಂತದ ಕ್ಲೈಮ್ಯಾಕ್ಸ್ ಸಿಕ್ಕಿದೆ. ಆದರೆ, ಬಿಜೆಪಿ ಹೈ ಕಮಾಂಡ್ ಸಹ ಯಡಿಯೂರಪ್ಪ ಅವರ ಬೆಂಬಲಕ್ಕೆ ಏಕೆ ನಿಲ್ಲಲ್ಲಿಲ್ಲ?
ಸರಕಾರ ರಚಿಸುವಷ್ಟು ಅಗತ್ಯ ಕ್ಷೇತ್ರಗಳನ್ನು ಗೆಲ್ಲೆದೆಯೂ, ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸುವಲ್ಲಿ ಸಫಲವಾಗಿದೆ. ಅಕಸ್ಮಾತ್ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ರಚನೆಯಾದಲ್ಲಿ, ಆ ರಾಜ್ಯಗಳಲ್ಲಿ ಬಹುಮತ ಪಡೆದ ಸರಕಾರಗಳು ದಂಗೆ ಏಳುವುದು ಗ್ಯಾರಂಟಿ. ಒಂದು ಸರಕಾರವನ್ನು ರಚಿಸುವ ಸಲುವಾಗಿ, ನಾಲ್ಕು ಸರಕಾರಗಳನ್ನು ಕಳೆದುಕೊಳ್ಳಲು ಶಾ ಮತ್ತು ಮೋದಿ ಜೋಡಿ ಹಿಂದೇಟು ಹಾಕಿದೆ, ಎಂದೆನಿಸುತ್ತಿದೆ.
ಶೋಭಾ ಕರಂದ್ಲಾಜೆ ಅವರ ನಿರ್ಧಾರಗಳು ಹೆಚ್ಚು ಪ್ರಭಾವ ಬೀರುವುದು ಗ್ಯಾರಂಟಿ. ಅಶೋಕ್ ಹಾಗೂ ಶೋಭಾ ಅವರ ವೈಮನಸ್ಸು, ಟಿಕೆಟ್ ಹಂಚುವ ಸಂದರ್ಭದಲ್ಲಿ ಹಠ ಹಿಡಿದ ಯಡಿಯೂರಪ್ಪ...ಮುಂತಾದ ಕಾರಣಗಳಿಂದ ರಾಜ್ಯ ಸರಕಾರ ರಚನೆಯಲ್ಲಿ ಬಿಜೆಪಿ ಹಿಂದೆ ಉಳಿಯಿತು.
ಯಡಿಯೂರಪ್ಪ ಒಂಟಿಯಾಗಲು ಕಾರಣವೇನು? ಇಲ್ಲಿದೆ ಸುವರ್ಣ ನ್ಯೂಸ್ನ ರಮಾಕಾಂತ್ ಮಾಡಿರುವ ವಿಶ್ಲೇಷಣೆ....
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.