UPSCಯಲ್ಲಿ ರ‍್ಯಾಂಕ್‌ ಪಡೆದು ದೊಡ್ಡ ಹುದ್ದೆಯಲ್ಲಿದ್ದಾರೆ ಈ ಪ್ರಸಿದ್ಧ ತಮಿಳು ನಟನ ಮಗ!

Published : Aug 28, 2023, 04:16 PM ISTUpdated : Aug 28, 2023, 04:22 PM IST
UPSCಯಲ್ಲಿ  ರ‍್ಯಾಂಕ್‌  ಪಡೆದು ದೊಡ್ಡ ಹುದ್ದೆಯಲ್ಲಿದ್ದಾರೆ ಈ ಪ್ರಸಿದ್ಧ ತಮಿಳು ನಟನ ಮಗ!

ಸಾರಾಂಶ

ತಂದೆ ಸ್ಟಾರ್ ಆಗಿದ್ದರೂ ಮಗ, ನಟನೆಯನ್ನು ಆಯ್ಕೆ ಮಾಡಿಕೊಳ್ಳಲ್ಲಿಲ್ಲ. ಚಲನಚಿತ್ರೋದ್ಯಮಕ್ಕೆ ದಾರಿಯನ್ನು ಆರಿಸಿಕೊಳ್ಳದ ಪ್ರಸಿದ್ಧ ನಟನ ಮಗ UPSCಯ 100ನೇ ರ್ಯಾಂಕ್‌ ಪಟ್ಟಿಯೊಳಗೆ ಬಂದರು. ಸಿನಿಮಾವನ್ನು ಆರಿಸಿಕೊಳ್ಳದ ಪ್ರಸಿದ್ಧ ನಟನ ಮಗ ಯಾರು? ತಮಿಳಿನ ಈ ಸ್ಟಾರ್ ನಟನ ಹೆಸರೇನು?

ಇಂಜಿನಿಯರ್‌ಗಳ ಮಕ್ಕಳ ಇಂಜಿನಿಯರ್‌, ಡಾಕ್ಟರ್ಸ್‌ ಮಕ್ಕಳು ಡಾಕ್ಟರ್‌ ಆಗೋ ಹಾಗೆ ನಟರ ಮಕ್ಕಳೂ ಹೆಚ್ಚಾಗಿ ನಟನೆಯತ್ತವೇ ಮುಖ ಮಾಡುತ್ತಾರೆ. ಆದ್ರೆ ಅಪರೂಪವೆಂಬಂತೆ ತಮಿಳಿನ ಈ ಸ್ಟಾರ್ ನಟನ ಮಗ ಆಕ್ಟಿಂಗ್ ಬದಲು  UPSCಯನ್ನು ಆಯ್ಕೆ ಮಾಡಿಕೊಂಡರು. ತಂದೆ ಸ್ಟಾರ್ ಆಗಿದ್ದರೂ ಮಗ, ನಟನೆಯನ್ನು ಆಯ್ಕೆ ಮಾಡಿಕೊಳ್ಳಲ್ಲಿಲ್ಲ. ಚಲನಚಿತ್ರೋದ್ಯಮಕ್ಕೆ ದಾರಿಯನ್ನು ಆರಿಸಿಕೊಳ್ಳದ ಪ್ರಸಿದ್ಧ ನಟನ ಮಗ UPSCಯ 100ನೇ ರ್ಯಾಂಕ್‌ ಪಟ್ಟಿಯೊಳಗೆ ಬಂದರು. ಸಿನಿಮಾವನ್ನು ಆರಿಸಿಕೊಳ್ಳದ ಪ್ರಸಿದ್ಧ ನಟನ ಮಗ ಯಾರು? ತಮಿಳಿನ ಈ ಸ್ಟಾರ್ ನಟನ ಹೆಸರೇನು?

ತಮಿಳು ನಟ ಚಿನ್ನಿ ಜಯಂತ್ (ನಿಜವಾದ ಹೆಸರು ಕೃಷ್ಣಮೂರ್ತಿ ನಾರಾಯಣನ್) ತಮ್ಮ ಮಗ ಯುಪಿಎಸ್‌ಸಿ ಪಾಸಾಗಿದ್ದಕ್ಕೆ ಅತ್ಯಂತ ಹೆಮ್ಮೆಪಟ್ಟರು. ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ, ಶ್ರುತಂಜಯ ನಾರಾಯಣನ್ ಅವರು ಸ್ನೇಹಿತ (Friends)ರೊಂದಿಗೆ ನಾಟಕಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ (Programme) ನಟಿಸಲು ಇಷ್ಟಪಡುತ್ತಿದ್ದರು.

ಅಮೆರಿಕದಲ್ಲಿ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಂ. 1 ರ‍್ಯಾಂಕ್ ಪಡೆದ ಐಐಟಿ ವಿದ್ಯಾರ್ಥಿಯ ಯಶಸ್ಸಿನ ಸೂತ್ರ ಹೀಗಿದೆ..

ಸಿನಿಮಾ ಬಿಟ್ಟು ಯುಪಿಎಸ್‌ಸಿ ಆರಿಸಿಕೊಂಡ ತಮಿಳು ನಟನ ಮಗ
ಪಾಲಕರು ಸಾಮಾನ್ಯವಾಗಿ ತಮ್ಮ ಮಕ್ಕಳು ತಾವು ಯಶಸ್ಸನ್ನು ಕಂಡುಕೊಂಡ ವೃತ್ತಿ ಮಾರ್ಗವನ್ನು ಆರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಅವರು ವಯಸ್ಸಾದಂತೆ, ಅವರಿಗೆ ಆಸಕ್ತಿಯಿರುವ ಮಾರ್ಗವನ್ನು ಆಯ್ಕೆ (Selection) ಮಾಡುವಂತೆ ಸೂಚಿಸುತ್ತಾರೆ.. ಹೆಚ್ಚಿನ ಚಲನಚಿತ್ರ ತಾರೆಯರ ಮಕ್ಕಳು ಉದ್ಯಮ (Business)ದೊಂದಿಗೆ ಕೆಲವು ರೀತಿಯ ಸಂಪರ್ಕವನ್ನು ಹೊಂದಿರುತ್ತಾರೆ. ಕೆಲವು ಪ್ರಸಿದ್ಧ ಮಕ್ಕಳು ಇದೆಲ್ಲವನ್ನೂ ಮೀರಿ ಸಾಧನೆಯನ್ನು ಕಂಡುಕೊಳ್ಳುತ್ತಾರೆ. ಹೆಸರಾಂತ ನಟನ ಮಗ ಶ್ರುತಂಜಯ ಚಿತ್ರರಂಗದ ಹೊರಗೆ ಯಶಸ್ಸು ಗಳಿಸಿರುವುದು ಕುತೂಹಲಕಾರಿಯಾಗಿದೆ.

IAS ಶ್ರುತಂಜಯ ನಾರಾಯಣನ್ ಯಾರು?
UPSC ಫಲಿತಾಂಶಗಳ ಟಾಪ್ 100 ರ ಯಾಂಕ್ ಪಟ್ಟಿಯಲ್ಲಿ ಮಗನ ಹೆಸರು ಬಂದಾಗ ತಮಿಳು ನಟ ಚಿನ್ನಿ ಜಯಂತ್ (ನಿಜವಾದ ಹೆಸರು ಕೃಷ್ಣಮೂರ್ತಿ ನಾರಾಯಣನ್) ಅತ್ಯಂತ ಹೆಮ್ಮೆಪಟ್ಟರು. ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ, ಶ್ರುತಂಜಯ ನಾರಾಯಣನ್ ಅವರು ಸ್ನೇಹಿತರೊಂದಿಗೆ ನಾಟಕಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ನಟಿಸಲು ಇಷ್ಟಪಡುತ್ತಿದ್ದರು. ಪ್ರತಿ ಪ್ರದರ್ಶನವನ್ನು ಅವರ ತಂದೆ ಚಿನ್ನಿ ಜಯಂತಿ ನೋಡುತ್ತಿದ್ದರು. ಶ್ರುತಂಜಯ ರಂಗಭೂಮಿಯನ್ನು ತನ್ನನ್ನು ತಾನು ವ್ಯಕ್ತಪಡಿಸಲು ಮತ್ತು ವೇದಿಕೆಯಲ್ಲಿ ಹೊಸ ಜನರನ್ನು ಭೇಟಿ ಮಾಡಲು ಒಂದು ಅವಕಾಶವಾಗಿ ನೋಡಿದರು. ಪ್ರಸ್ತುತ ಶ್ರುತಂಜಯ ತಮಿಳುನಾಡು ಜಿಲ್ಲೆಯ ತಿರುಪ್ಪೂರ್‌ನಲ್ಲಿ ಸಬ್ ಕಲೆಕ್ಟರ್ ಹುದ್ದೆಯನ್ನು ಹೊಂದಿದ್ದಾರೆ. ಅವರು ತಮ್ಮ ಪದವಿಯನ್ನು ಗಿಂಡಿಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪಡೆದರು. ನಂತರ ಶ್ರುತಂಜಯ ಅವರು ಸ್ನಾತಕೋತ್ತರ ಪದವಿಗಾಗಿ ಅಶೋಕ ವಿಶ್ವವಿದ್ಯಾಲಯಕ್ಕೆ ಹೋದರು.

ಬರೋಬ್ಬರಿ 35 ಬಾರಿ ಪರೀಕ್ಷೆಯಲ್ಲಿ ಫೇಲ್, UPSC ಎರಡು ಬಾರಿ ಪಾಸಾಗಿ ಐಎಎಸ್‌ ಅಧಿಕಾರಿಯಾದ ವ್ಯಕ್ತಿ!

2015 ರ ಬ್ಯಾಚ್‌ನ IAS ಅಧಿಕಾರಿ, ಶ್ರುತಂಜಯ ನಾರಾಯಣನ್ UPSC ನಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 75 ರ ರ್ಯಾಂಕ್ ಗಳಿಸಿದರು. ಶ್ರುತಂಜಯ್ ಹೆಚ್ಚು ಲವಲವಿಕೆಯ ವ್ಯಕ್ತಿ. ಅವರು UPSC ಪರೀಕ್ಷೆಗೆ ಅಧ್ಯಯನ ಮಾಡುವಾಗ ಅವರ ಬೋಧಕರು, ಕುಟುಂಬ ಮತ್ತು ಸ್ನೇಹಿತರಿಂದ ಸಾಕಷ್ಟು ಸಹಾಯವನ್ನು ಪಡೆದರು. ಅವರ ಎರಡನೇ ಪ್ರಯತ್ನದಲ್ಲಿ, ಅವರು ಸ್ಟಾರ್ಟ್‌ಅಪ್‌ಗೆ ಉದ್ಯೋಗಿಯಾದರು.

IAS ಶ್ರುತಂಜಯ ನಾರಾಯಣನ್ ಪ್ರಕಾರ, ಅಭ್ಯರ್ಥಿಯು ನಿಗದಿತ 20 ನಿಮಿಷಗಳಲ್ಲಿ ಈ ಸಂದರ್ಶನದಲ್ಲಿ ಪ್ರಭಾವ ಬೀರಬೇಕು. ಶ್ರುತಂಜಯ್ ಸಮಾಜಶಾಸ್ತ್ರವನ್ನು ಐಚ್ಛಿಕವಾಗಿ ಆರಿಸಿಕೊಂಡಿದ್ದರು. ಭೂಗೋಳಶಾಸ್ತ್ರದಲ್ಲಿಯೂ ಅವರಿಗೆ ಅಪಾರ ಆಸಕ್ತಿಯಿತ್ತು. ಶ್ರುತಂಜಯ ನಾರಾಯಣನ್ ಅವರು ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ದಿನಕ್ಕೆ 4-5 ಗಂಟೆಗಳ ಕಾಲ ಸ್ವಯಂ ಅಧ್ಯಯನದಲ್ಲಿ ಕಳೆಯುತ್ತಿದ್ದರು. ನಂತರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಪರೀಕ್ಷೆಗೆ ಕೆಲವು ವಾರಗಳ ಮೊದಲು, ಅವರು ತಮ್ಮ ಅಧ್ಯಯನ ತಂತ್ರವನ್ನು ಪರಿಷ್ಕರಿಸಿದರು. ಅದರ ನಂತರ, ಅವರು 10 ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ. ಇದರ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಿದ್ದರು. ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆಯ ಜೊತೆಗೆ ಯೋಗವು ಅವರ ದಿನಚರಿಯ ಒಂದು ಅಂಶವಾಗಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇರಾನ್ ಮಹಿಳೆಯರು ಮದುವೆಯಾಗುವಾಗ, ತಾಯಿಯಾಗುವಾಗ ವಯಸ್ಸು ಎಷ್ಟಿರಬೇಕು?
ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!