
ಸಾಮಾನ್ಯವಾಗಿ ನೀವು ಬೆಳಗ್ಗೆ ಎದ್ದೇಳ್ತೀರಿ, ಫ್ರೆಶಪ್ ಆಗಿ ಟೀ ಕುಡಿದು ಟಿಫೀನ್ ಮಾಡ್ತೀರಿ, ಮಧ್ಯಾಹ್ನಕ್ಕೆ ಚಪಾತಿ ಅನ್ನ, ರಾತ್ರಿನೂ ಚಪಾತಿ ಅನ್ನ ಸಾಂಬಾರು ಊಟ ಮಾಡೋದು ಸಾಮಾನ್ಯ. ಇದು ಪ್ರತಿ ಭಾರತೀಯರ ಆಹಾರ ಮಾಡುವ ಕ್ರಮ. ದಿನಕ್ಕೆ ಮೂರು ಬಾರಿ ಮಾಡಲಾಗುತ್ತೆ. ದಿನಕ್ಕೆ ಮೂರು ಊಟ ಅನ್ನೋದು ನಮ್ಮ ಎಷ್ಟು ಆಳವಾಗಿ ಬೇರೂರಿವೆ ಎಂದರೆ ದಿನನಿತ್ಯ ಆ ಸಮಯಕ್ಕೆ ಕಡ್ಡಾಯವಾಗಿ ಆಹಾರ ಸೇವಿಸುತ್ತೇವೆ. ಇದೇ ಸರಿಯಾದ ಮಾರ್ಗ ಎಂದೂ ನಂಬಿದ್ದೇವೆ. ಆದರೆ ನಿಜವಾಗಿಯೂ ಇದೇ ಪದ್ಧತಿ ಸರಿಯೇ?
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಸಿಇಒ ರಜಿತ್ ಪುನ್ಹಾನಿ ಹೇಳೋದೇ ಬೇರೆ!ಭಾರತೀಯ ಸಂಪ್ರಾದಾಯದ ಪ್ರಕಾರ ದಿನಕ್ಕೆ ಮೂರು ಊಟ ಅಲ್ಲ, ಎರಡು ಅಂತಾರೆ. ಹಾಗಾದರೆ, ವೇದಗಳು ಮತ್ತು ಪುರಾಣಗಳು ದಿನಕ್ಕೆ ಮೂರು ಊಟಗಳ ಬದಲಾಗಿ ದಿನಕ್ಕೆ ಎರಡು ಬಾರಿ ಆಹಾರ ಸೇವನೆ ಬಗ್ಗೆ ಪ್ರತಿಪಾದಿಸುತ್ತವೆಯೇ? ಹಾಗಾದ್ರೆ ನಾವು ದಿನಕ್ಕೆ ಮೂರು ಊಟಗಳನ್ನು ತಿನ್ನಲು ಹೇಗೆ ಒಗ್ಗಿಕೊಂಡೆವು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಸೆಪ್ಟೆಂಬರ್ 2, 2026 ರಂದು ಮಾಧ್ಯಮ ಸಂದರ್ಶನವೊಂದರಲ್ಲಿ FSSAI ಸಿಇಒ ರಜಿತ್ ಪುನ್ಹಾನಿ ಅವರು ಹೇಳ್ತಾರೆ, 'ಭಾರತೀಯ ಸಂಪ್ರದಾಯವು ಹಿಂದೆ ಕಡ್ಡಾಯ ದಿನಕ್ಕೆ ಊಟಗಳನ್ನು ಹೊಂದಿರಲಿಲ್ಲ, ಅಂದರೆ ಬೆಳಗ್ಗೆ ಟಿಫಿನ್, ಮಧ್ಯಾಹ್ನ ಮತ್ತು ರಾತ್ರಿ ಊಟ ಇರಲಿಲ್ಲ. ಆದರೆ. ದಿನಕ್ಕೆ ಎರಡು ಊಟ ಮಾಡಲಾಗುತ್ತಿತ್ತು. ಆದರೆ ದಿನಗಳಲ್ಲಿ ಆರ್ಡರ್ ಪದ್ಧತಿ ಬಂದನಂತರ ಜನರು ಪ್ಯಾಕ್ ಮಾಡಿದ, ಸಂಸ್ಕರಿಸಿದ ಆಹಾರ ಸೇವನೆ ತುಂಬಾ ಸಾಮಾನ್ಯವಾಗಿದೆ, ಜನರು ಬೆಳಗಿನ ತಿಂಡಿಗೂ ಅಂಗಡಿಯಲ್ಲಿ ಸಿಗುವ ಪ್ಯಾಕ್ಡ್ ತಿಂಡಿಗಳ ಮೇಲೆ ಡಿಪೆಂಡ್ ಆಗಿದ್ದಾರೆ ಎಂದು ಹೇಳಿದರು. FSSAI ಯ 'ಈಟ್ ರೈಟ್ ಥಾಲಿ' ಅಭಿಯಾನವು ಸಾಂಪ್ರದಾಯಿಕವಾಗಿ, ಮನೆಯಲ್ಲಿ ಬೇಯಿಸಿದ ಊಟ ಮಾಡುವ ಬಗ್ಗೆ ಹೇಳಿದೆ.
2025 ರಲ್ಲಿ FSSAI 424 ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಿತು. ಇದು 29 ರಾಜ್ಯಗಳ ಸಾಂಪ್ರದಾಯಿಕ ಭಕ್ಷ್ಯಗಳನ್ನು ಒಳಗೊಂಡಿತ್ತು. ಸಾಂಪ್ರದಾಯಿಕ ಭಾರತೀಯ ಆಹಾರವು ಹೆಚ್ಚಾಗಿ ಸಸ್ಯಾಹಾರವಾಗಿತ್ತು. ಧಾನ್ಯಗಳು, ದ್ವಿದಳ ಧಾನ್ಯಗಳು, ಮಸಾಲೆಗಳು, ತರಕಾರಿಗಳು, ಹಣ್ಣುಗಳು ಮತ್ತು ಡೈರಿ ಉತ್ಪನ್ನಗಳನ್ನು ಒಳಗೊಂಡಿದೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಈಗ ಪ್ರಶ್ನೆ ಏನೆಂದರೆ, ಇದು ಕೇವಲ FSSAI CEO ಅವರ ವೈಯಕ್ತಿಕ ಅಭಿಪ್ರಾಯವೋ ಅಥವಾ ಇದರ ಹಿಂದೆ ಯಾವುದೇ ದೃಢವಾದ ಪುರಾವೆಗಳಿವೆಯೇ...?
ವೇದಗಳು ಮತ್ತು ಪುರಾಣಗಳಲ್ಲಿ ಆಹಾರದ ಬಗ್ಗೆ ಸಾಕಷ್ಟು ಉಲ್ಲೇಖವಿದೆ.
ತೈತ್ತಿರೀಯ ಬ್ರಾಹ್ಮಣದಲ್ಲಿ (1.4.9), 'ಒಬ್ಬ ಮನುಷ್ಯ ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡಬೇಕು' ಎಂದು ಸ್ಪಷ್ಟವಾಗಿ ಹೇಳಿದೆ.
ಋಗ್ವೇದ ಸಂಹಿತ (4.30.3) ಕೂಡ ಊಟ ಮಾಡುವಾಗ ಕುಳಿತುಕೊಳ್ಳುವ ಭಂಗಿಯನ್ನು ಸಹ ಉಲ್ಲೇಖಿಸುತ್ತದೆ. ಊಟದ ಸಮಯವನ್ನು ಗಂಭೀರ ಆಚರಣೆಯಾಗಿ ಪರಿಗಣಿಸಲಾಗುತ್ತಿತ್ತು ಎಂದು ಸೂಚಿಸುತ್ತದೆ. ಈಗ ಕ್ಯಾಂಟಿನ್ ಗೆ ಹೋದರೆ ಕುಳಿತು ಉಣ್ಣುವವರನ್ನ ನೋಡುವುದೇ ಅಪರೂಪವಾಗಿದೆ. ಪ್ರಾಚೀನ ಆಯುರ್ವೇದದ ಹೇಳುತ್ತೆ'ದಿನಕ್ಕೆ ಒಮ್ಮೆ ತಿನ್ನುವವನು ಯೋಗಿ, ಎರಡು ಬಾರಿ ತಿನ್ನುವವನು ಭೋಗಿ, ಮತ್ತು ಮೂರು ಬಾರಿ ತಿನ್ನುವವನು ರೋಗಿ.. ಅಂತಾ. ಇದರರ್ಥ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲವೇ?
ಗೌತಮ ಧರ್ಮಸೂತ್ರ ( IX.59 ), ಬೌಧಾಯನ ಧರ್ಮಸೂತ್ರ (II.7.36), ಮನುಸ್ಮೃತಿ ( II.56 ) ಮತ್ತು ಸಂವರ್ತ ಸ್ಮೃತಿ (12) ಎಲ್ಲವೂ ಒಂದೇ ವಿಷಯವನ್ನು ಹೇಳುತ್ತವೆ: 'ಒಬ್ಬ ಗೃಹಸ್ಥನು ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡಬೇಕು. ನಡುವೆ ಏನನ್ನೂ ತಿನ್ನಬಾರದು. ಇದನ್ನು ಮಾಡುವವನು ಉಪವಾಸದ ಪುಣ್ಯವನ್ನು ಪಡೆಯುತ್ತಾನೆ ಎಂದು ಹೇಳಿದೆ.
ಮಹಾಭಾರತದ ಶಾಂತಿ ಪರ್ವದಲ್ಲಿ, ಭೀಷ್ಮ ಪಿತಾಮಹ ಹೀಗೆ ಹೇಳುತ್ತಾರೆ, 'ದೇವತೆಗಳು ಮನುಷ್ಯರಿಗೆ ಎರಡು ಸಮಯಗಳನ್ನು ನಿಗದಿಪಡಿಸಿದ್ದಾರೆ- 'ಬೆಳಿಗ್ಗೆ ಮತ್ತು ಸಂಜೆ ಈ ಸಮಯಗಳ ನಡುವೆ ಏನನ್ನೂ ತಿನ್ನಬಾರದು ಎಂದು.
ಆಯುರ್ವೇದದ ಪಿತಾಮಹ ಆಚಾರ್ಯ ಸುಶ್ರುತ ಕೂಡ ದಿನಕ್ಕೆ ಎರಡು ಊಟಗಳನ್ನು ಶಿಫಾರಸು ಮಾಡಿದ್ದಾರೆ. ಬೆಳಿಗ್ಗೆ ಒಮ್ಮೆ ಮತ್ತು ಸಂಜೆ ಒಮ್ಮೆ (ರಾತ್ರಿ). ಸುಶ್ರುತ ಸಂಹಿತದ ಪ್ರಕಾರ, ದಿನಕ್ಕೆ ಎರಡು ಊಟಗಳನ್ನು ತಿನ್ನುವ ಅಭ್ಯಾಸವಿರುವವರು ಬೆಳಿಗ್ಗೆ 3:30 ಕ್ಕೆ (ಬೆಳಿಗ್ಗೆ 8:30 ರ ಸುಮಾರಿಗೆ) ಅರ್ಧ ಊಟವನ್ನು ಲಘುವಾಗಿ ಸೇವಿಸಬೇಕು. ಎರಡನೇ ಊಟವನ್ನು ಮಧ್ಯಾಹ್ನ 3:00 ರಿಂದ ಸಂಜೆ 5:30 ರ ನಡುವೆಸೇವಿಸಬೇಕು. ಈ ನಿಯಮಗಳು ಎಲ್ಲರಿಗೂ ಒಂದೇ ಆಗಿರಲಿಲ್ಲ ಎಂಬುದನ್ನು ಗಮಮಿಸಬೇಕು.. ವೈದಿಕ ಅಗ್ನಿಹೋತ್ರ (ಅಗ್ನಿ ಪೂಜೆ) ದೀಕ್ಷೆ ಪಡೆದವರು ಈ ನಿಯಮಕ್ಕೆ ಒಳಪಡಲಿಲ್ಲ. ಅವರು ದಿನಕ್ಕೆ ಹಲವಾರು ಬಾರಿ ಊಟ ಮಾಡಬಹುದಿತ್ತು!
ಭಾರತೀಯ ಸಂಪ್ರದಾಯದಲ್ಲಿ ದಿನಕ್ಕೆ ಎರಡು ಊಟ ಮಾಡುವುದರ ಹಿಂದಿನ ವಿಜ್ಞಾನವೇನು? ಹೀಗೊಂದು ಪ್ರಶ್ನೆ ಎದುರಾಗುತ್ತೆ. ಅದಕ್ಕೂ ಉತ್ತರವೂ ಇದೆ. ಭಾರತೀಯ ಸಂಪ್ರದಾಯವು ಊಟವನ್ನು ಎಷ್ಟು ಬಾರಿ ಸೇವಿಸಬೇಕೆಂದು ಮಾತ್ರವಲ್ಲದೆ, ಯಾವಾಗ... ಎಂದೂ ಸೂಚಿಸುತ್ತದೆ.
ಜೀರ್ಣಕ್ರಿಯೆಗೆ ಸಮಯ: ಆಯುರ್ವೇದ ಮತ್ತು ಯೋಗ ಎರಡೂ ಆಹಾರವು ಸಂಪೂರ್ಣವಾಗಿ ಜೀರ್ಣವಾಗಲು ಸಮಯದ ಮಹತ್ವವನ್ನು ಒತ್ತಿಹೇಳುತ್ತವೆ. ವೈದಿಕ ಆಹಾರದ ಪ್ರಕಾರ, ಆಹಾರವು ಸಂಪೂರ್ಣವಾಗಿ ಜೀರ್ಣವಾಗಲು 8 ರಿಂದ 11 ಗಂಟೆಗಳು ಬೇಕಾಗುತ್ತದೆ. ನೀವು ಪ್ರತಿ 3-4 ಗಂಟೆಗಳಿಗೊಮ್ಮೆ ತಿನ್ನುತ್ತಿದ್ದರೆ, ಜೀರ್ಣಕ್ರಿಯೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ.
ಊಟದ ನಡುವಿನ ಅಂತರದ ಮಹತ್ವ: ಪ್ರಾಚೀನ ಯೋಗಾಭ್ಯಾಸಗಳ ಪ್ರಕಾರ, ಎರಡು ಮುಖ್ಯ ಊಟಗಳ ನಡುವೆ ಕನಿಷ್ಠ 6-8 ಗಂಟೆಗಳ ಅಂತರವಿರಬೇಕು. ಸದ್ಗುರುಗಳು ಸಹ ಇದನ್ನು ಸಲಹೆ ಮಾಡುತ್ತಾರೆ, ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ದಿನಕ್ಕೆ ಎರಡು ಊಟಗಳು ನಿಮಗೆ ಆರೋಗ್ಯಕರವಾಗಿರುತ್ತದೆ. ಆದಾಗ್ಯೂ, ನೀವು ತುಂಬಾ ಸಕ್ರಿಯರಾಗಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆ ಹೊಂದಿಲ್ಲದಿದ್ದರೆ.
ಆಯುರ್ವೇದವು ಎಷ್ಟು ಬಾರಿ ತಿನ್ನಬೇಕು ಎಂಬುದರ ಮೇಲೆ ಮಾತ್ರವಲ್ಲದೆ, ಯಾವಾಗ ತಿನ್ನಬೇಕು ಎಂಬುದರ ಮೇಲೂ ಹೆಚ್ಚಿನ ಒತ್ತು ನೀಡುತ್ತದೆ. ಸುಶ್ರುತ ಹೇಳುವಂತೆ, 'ದಿನದ ಎರಡು ತುದಿಗಳಲ್ಲಿ ಊಟ ಮಾಡಬೇಕು: ಬೆಳಿಗ್ಗೆ ಒಮ್ಮೆ ಮತ್ತು ಸಂಜೆ ಒಮ್ಮೆ
ಹಾಗಾದರೆ ದಿನಕ್ಕೆ ಮೂರು ಬಾರಿ ಊಟ ಮಾಡುವ ಪದ್ಧತಿ ಎಲ್ಲಿಂದ ಬಂತು?
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ, ಪಾಶ್ಚಿಮಾತ್ಯ ಆಹಾರ ಪದ್ಧತಿಗಳು ಹೆಚ್ಚು ಪ್ರಭಾವಶಾಲಿಯಾದವು. ಬ್ರಿಟಿಷರು ಮೂರು-ಕೋರ್ಸ್ ಊಟಗಳನ್ನು (ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ) ಪರಿಚಯಿಸಿದರು. ಕ್ರಮೇಣ, ಇದು ಭಾರತೀಯ ಮಧ್ಯಮ ವರ್ಗಕ್ಕೂ ಹರಡಿತು.
ಜನರು ಕಾರ್ಖಾನೆಗಳು ಮತ್ತು ಕಚೇರಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ನಿಗದಿತ ಊಟದ ವಿರಾಮಗಳು ಅನಿವಾರ್ಯವಾದವು. ದಿನಕ್ಕೆ ಎರಡು ಊಟಗಳು ಕೃಷಿ ಅಥವಾ ಮನೆಕೆಲಸಗಳಿಗೆ ಸಂಬಂಧಿಸಿವೆ. ಅವು ಗಡಿಯಾರದ ಕೆಲಸದಲ್ಲಿ ಹೊಂದಿಕೊಳ್ಳಲಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ, ಮಧ್ಯಂತರ ಉಪವಾಸ ಕೆಲವು ಗಂಟೆಗಳ ಕಾಲ ತಿನ್ನುವುದು ಮತ್ತು ಉಳಿದ ಸಮಯದಲ್ಲಿ ಉಪವಾಸ ಮಾಡುವುದು ಜಾಗತಿಕ ಪ್ರವೃತ್ತಿಯಾಗಿದೆ ಬದಲಾಗಿದೆ. ಇದು ಪ್ರಾಚೀನ ಸಂಪ್ರದಾಯವೇ ಆಗಿದೆ. ದಿನಕ್ಕೆ ಎರಡು ಬಾರಿ, ಬೆಳಿಗ್ಗೆ ಮತ್ತು ಸಂಜೆ ತಿನ್ನುವುದು ಮತ್ತು ನಡುವೆ ಏನೂ ಇಲ್ಲ.
FSSAI ಯ 2025 ರ ವರದಿಯ ಪ್ರಕಾರ, ಹೆಚ್ಚುತ್ತಿರುವ ಸಂಸ್ಕರಿಸಿದ ಆಹಾರಗಳ ಸೇವನೆ ಮತ್ತು ಆಗಾಗ್ಗೆ ತಿನ್ನುವ ಅಭ್ಯಾಸಗಳು ಬೊಜ್ಜು, ಮಧುಮೇಹ ಮತ್ತು ಹೃದ್ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಸಾಂಪ್ರದಾಯಿಕ ಭಾರತೀಯ ಆಹಾರವು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು FSSAI ಹೇಳುತ್ತದೆ.
ಇಲ್ಲ. ತಜ್ಞರ ಪ್ರಕಾರ ಅರ್ಥಮಾಡಿಕೊಳ್ಳಬೇಕಾದ ಒಂದು ಪ್ರಮುಖ ವಿಷಯ ಇಲ್ಲಿದೆ:
ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಕೆಲಸಗಳು ಬೇರೆ ಬೇರೆಯಾಗಿರುತ್ತವೆ. ಅಂದರೆ, ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ.
ವಯಸ್ಸು, ಅನಾರೋಗ್ಯ, ಗರ್ಭಧಾರಣೆ ಮತ್ತು ಹಾಲುಣಿಸುವಿಕೆಯಂತಹ ಪರಿಸ್ಥಿತಿಗಳಿಗೆ ಹೆಚ್ಚಿನ ಪೋಷಣೆಯ ಅಗತ್ಯವಿರುತ್ತದೆ. ಆಯುರ್ವೇದವು ಅದು ನಿಮ್ಮ ದೇಹದ ಪ್ರಕಾರ ಮತ್ತು ಜೀರ್ಣಕ್ರಿಯೆಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಹೇಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.